ರಾಜಕೀಯ

ಬಿಜೆಪಿಯಿಂದ ದಲಿತ ರಾಜಕಾರಣ,2ನೇ ಹಂತದ ಆಪರೇಷನ್ ಕಮಲ-ಡಿ.ಕೆ.ಶಿವಕುಮಾರ್

Nagaraja AB

ನವದೆಹಲಿ: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆಯನ್ನಿಟ್ಟುಕೊಂಡು ಬಿಜೆಪಿ ದಲಿತ ರಾಜಕಾರಣ ಹಾಗೂ ಎರಡನೇ ಹಂತದ ಆಪರೇಷನ್ ಕಮಲ ಆರಂಭಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲಭೆ ವಿಚಾರವಾಗಿ ಉದ್ದೇಶಪೂರ್ವಕವಾಗಿ ನಮ್ಮ ನಾಯಕರ ವಿಚಾರಣೆ ನಡೆಸಲಾಗುತ್ತಿದೆ. ಗಲಭೆಯಲ್ಲಿ ಕಾಂಗ್ರೆಸ್ ಪಾತ್ರ ಇದೆ ಎಂದು ಬಿಂಬಿಸಲು ಬಿಜೆಪಿಗರು ಪ್ರಯತ್ನಿಸುತ್ತಿದ್ದಾರೆ ಎಂದರು.

ಸರ್ಕಾರದ ವೈಫಲ್ಯತೆ, ಹುಳುಕು ಮುಚ್ಚಿಕೊಳ್ಳಲು ಗಲಭೆಯಲ್ಲಿ ಕಾಂಗ್ರೆಸ್ ಪಾತ್ರವಿದೆ ಎಂಬ ರೀತಿಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ.ಪಕ್ಷದ ನಾಯಕರಿಗೆ ಕಿರುಕುಳ ನೀಡುತ್ತಿದ್ದಾರೆ.ಆ ಮೂಲಕ ಬಿಜೆಪಿ ಎರಡನೇ ಹಂತದ ಆಪರೇಷನ್ ಕಮಲ ಆರಂಭಿಸಿದೆ ಎಂದು ಡಿಕೆ ಶಿವ ಕುಮಾರ್ ಆರೋಪಿಸಿದರು. 

SCROLL FOR NEXT