ಬಿಎಸ್ ಯಡಿಯೂರಪ್ಪ 
ರಾಜಕೀಯ

ಸಿಎಂ ಬಿಎಸ್‌ವೈಗೆ ಸಂಕಷ್ಟ: ವಿರೋಧಿಗಳಿಂದ 'ಗೋ ಬ್ಯಾಕ್, ಸಿಂಗ್' ಅಭಿಯಾನಕ್ಕೆ ಕರೆ?

ಸಿಎಂ ಬಿಎಸ್ ಯಡಿಯೂರಪ್ಪ ಅವರು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಹೇಳಿದ್ದಾರೆ. ಆದರೆ ಇದೀಗ ಈ ಕುರಿತಂತೆ ಹೊಸ ಬೆಳವಣಿಗೆ ನಡೆದಿದೆ.ಯಡಿಯೂರಪ್ಪ ಅವರ ವಿರೋಧಿಗಳು ಈಗ ಅರುಣ್ ಸಿಂಗ್ ಅವರ ಮೇಲೆ ತಮ್ಮ ಮುನಿಸನ್ನು ತೋರುತ್ತಿದ್ದಾರೆ.

ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಹೇಳಿದ್ದಾರೆ. ಆದರೆ ಇದೀಗ ಈ ಕುರಿತಂತೆ ಹೊಸ ಬೆಳವಣಿಗೆ ನಡೆದಿದೆ. ಯಡಿಯೂರಪ್ಪ ಅವರ ವಿರೋಧಿಗಳು ಈಗ ಅರುಣ್ ಸಿಂಗ್ ಅವರ ಮೇಲೆ ತಮ್ಮ ಮುನಿಸನ್ನು ತೋರುತ್ತಿದ್ದಾರೆ.

ಸಿಂಗ್ ಅವರು ಬುಧವಾರ ರಾಜ್ಯಕ್ಕೆ ಆಗಮಿಸಿದಾಗ, ಅವರು ಶಾಸಕರನ್ನು ಭೇಟಿ ಮಾಡುವ ಮೊದಲು ಕ್ಯಾಬಿನೆಟ್ ಮಂತ್ರಿಗಳೊಂದಿಗೆ ಸಂವಹನ ನಡೆಸಲಿದ್ದಾರೆ. ಶಾಸಕರಾದ ಬಸನಗೌಡ ಯತ್ನಾಳ್, ಅರವಿಂದ್ ಬೆಲ್ಲದ್ ಮತ್ತು ಜಿ.ಎಚ್. ​​ತಿಪ್ಪಾರೆಡ್ಡಿ ಸಚಿವ ಸಿ.ಪಿ. ಯೋಗೇಶ್ವರ, ಸುನಿಲ್ ಕುಮಾರ್ ಮತ್ತು ಇನ್ನೂ ಕೆಲವರನ್ನೊಳಗೊಂಡ ಒಂದು ಗುಂಪು, ಮೊದಲು ಶಾಸಕಾಂಗ ಪಕ್ಷದ ಸಭೆಗೆ ಸಿಂಗ್ ಕರೆ ನೀಡಬೇಕೆಂದು ಒತ್ತಾಯಿಸಲು ಯೋಜಿಸಿದೆ.

ಮೊದಲು ಸಚಿವರನ್ನು ಭೇಟಿಯಾಗುವುದಾಗಿ ಸಿಂಗ್ ಸೂಚಿಸಿದ್ದರು ಮತ್ತು ಅಗತ್ಯವಿದ್ದರೆ ಶಾಸಕಾಂಗ ಸಭೆ ನಡೆಸಲು ಸಿಂಗ್ ತಯಾರಾಗಿರಬಹುದು. ಆದರೆ ಅಗತ್ಯವಾದರೆ ‘ಗೋ ಬ್ಯಾಕ್, ಅರುಣ್ ಸಿಂಗ್’ ಅಭಿಯಾನವನ್ನು ಪ್ರಾರಂಭಿಸಲು ಸಹ ಸಿಂಗ್ ವಿರೋಧಿ ಬಣ ಸಿದ್ದವಾಗಿದೆ ಎಂಬ ಆತಂಕವಿದೆ.

ಯಡಿಯೂರಪ್ಪ ಅವರು ಇನ್ನೂ ಎರಡು ವರ್ಷಗಳ ಕಾಲ ಸಿಎಂ ಆಗಿ ಉಳಿಯುತ್ತಾರೆ ಎಂದು ಮಾಧ್ಯಮಗಳಿಗೆ ತಿಳಿಸಲು ಸಿಎಂಗೆ ಅಧಿಕಾರ ನೀಡಿದ ಕಾರಣವನ್ನು ಸಿಂಗ್ ಅವರಲ್ಲಿ ಕೇಳಲು ಈ ಗುಂಪು ಬಯಸಿದೆ ಎನ್ನುವುದಾದಲ್ಲಿ ಈ ಭೇಟಿಯ ಉದ್ದೇಶವೇನು ಎನ್ನುವುದು ಈಗಿನ ಪ್ರಶ್ನೆಯಾಗಿ ಉಳಿದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಓಪನ್ನಾಗಿ ಹೇಳ್ತಿದ್ದೀನಿ, ಯಾರೂ ಬಿ ಖಾತಾದಿಂದ ಎ ಖಾತಾಗೆ ದುಡ್ಡು ಕಟ್ಟಬೇಡಿ, ಇದು ಸರ್ಕಾರದ ಬಹುದೊಡ್ಡ ಲೂಟಿ': ಹೆಚ್ ಡಿ ಕುಮಾರಸ್ವಾಮಿ

3ನೇ ಏಕದಿನ: 'ರೋ-ಕೋ' ಭರ್ಜರಿ ಕಮ್ ಬ್ಯಾಕ್, ಸಿಡ್ನಿಯಲ್ಲಿ ಭಾರತಕ್ಕೆ 9 ವಿಕೆಟ್ ಭರ್ಜರಿ ಜಯ

ಬಿಹಾರ ಚುನಾವಣೆ: ಪ್ರಮುಖ ಯಾದವ್ ನಾಯಕರಿಗೆ ಟಿಕೆಟ್ ನಿರಾಕರಣೆ; NDAಗೆ ಹಿನ್ನಡೆ

'ಆತ ನನ್ನ ಕೊಲ್ತಾನೆ', ನನ್ನ ತಾಯಿನಾ ನಾನು ನೋಡ್ಬೇಕು: ಸೌದಿ ಮರುಭೂಮಿಯಲ್ಲಿ ಗೋಳಾಡಿದ ಭಾರತೀಯ ಪ್ರಜೆ! Video

3ನೇ ಏಕದಿನ: ರೋ'ಹಿಟ್' ಶರ್ಮಾ, ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್, ಕ್ರಿಕೆಟ್ ಇತಿಹಾಸದ ಹಲವು ದಾಖಲೆಗಳು ಪತನ

SCROLL FOR NEXT