ಎಎಚ್.ವಿಶ್ವನಾಥ್ 
ರಾಜಕೀಯ

2019ರಲ್ಲಿ ರಾಜ್ಯದಲ್ಲಿದ್ದ ರಾಜಕೀಯ ಬಿಕ್ಕಟ್ಟು ಪರಿಸ್ಥಿತಿಯೇ ಇಂದು ಮಹಾರಾಷ್ಟ್ರದಲ್ಲೂ ಇದೆ: ಎಚ್.ವಿಶ್ವನಾಥ್

2019ರಲ್ಲಿ ಕರ್ನಾಟಕದಲ್ಲಿ ನಡೆದ ‘ಆಪರೇಷನ್ ಕಮಲ’ ಹಾಗೂ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಸಾಮ್ಯತೆ ಇದೆ ಎಂದು ಹಲವರು ಹೇಳುತ್ತಿದ್ದು, ಈ ಮಾತುಗಳನ್ನು ಬಿಜೆಪಿ ಎಂಎಲ್'ಸಿ ಎಚ್.ವಿಶ್ವನಾಥ್ ಒಪ್ಪಿಕೊಂಡಿದ್ದಾರೆ.

ಬೆಂಗಳೂರು: 2019ರಲ್ಲಿ ಕರ್ನಾಟಕದಲ್ಲಿ ನಡೆದ ‘ಆಪರೇಷನ್ ಕಮಲ’ ಹಾಗೂ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಸಾಮ್ಯತೆ ಇದೆ ಎಂದು ಹಲವರು ಹೇಳುತ್ತಿದ್ದು, ಈ ಮಾತುಗಳನ್ನು ಬಿಜೆಪಿ ಎಂಎಲ್'ಸಿ ಎಚ್.ವಿಶ್ವನಾಥ್ ಒಪ್ಪಿಕೊಂಡಿದ್ದಾರೆ. 

'ಬಿಜೆಪಿಗೆ ಹೋಗುವ ಮುನ್ನ ಹುಣಸೂರು ಶಾಸಕರಾಗಿದ್ದ ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿ ಉಪ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮನವಿ ಮಾಡಲಾಗಿತ್ತು. ಆದರೆ, ಇದನ್ನು ನಿರಾಕರಿಸಿದ್ದ ವಿಶ್ವನಾಥ್ ಅವರು, ಉಪಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. 

ತಮ್ಮ ಹಾಗೂ ಪ್ರತಾಪ್ ಗೌಡ ಪಾಟೀಲ್ ಅವರ ರಾಜಕೀಯ ಜೀವನವನ್ನು ಬಿಜೆಪಿ ನಾಶಪಡಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ವಿಶ್ವನಾಥ್ ಅವರು, ಬಿಜೆಪಿ ಒಂದು ಸಂಸ್ಥೆ. ನಾನು ಬಿಜೆಪಿಯನ್ನು ದೂಷಿಸುವುದಿಲ್ಲ. ಆದರೆ ಕೆಲವು ನಾಯಕರು ನಮ್ಮ ವೃತ್ತಿಯನ್ನು ನಾಶಮಾಡಲು ಕೆಲಸ ಮಾಡಿದ್ದಾರೆಂದು ಹೇಳಿದ್ದಾರೆ. 

ವಿಶ್ವನಾಥ್ ಅವರ ಬೆಂಬಲಿಗರು ಮಾತನಾಡಿ, ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡಲು ಬಯಸದ ಬಿಜೆಪಿ ವಿಶ್ವನಾಥ್ ಅವರನ್ನು ಎಂಎಲ್‌ಸಿಯಾಗಿ ನಾಮನಿರ್ದೇಶನ ಮಾಡಲು ಮತ್ತು ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಡಬೇಡದಂತೆ ನೋಡಿಕೊಂಡಿದೆ ಎಂದು ಹೇಳಿದ್ದಾರೆ. 

ಜೆಡಿಎಸ್ ಶಾಸಕ ನಾಗಣ್ಣಗೌಡ ಕಂದಕೂರ್ ಅವರ ಪುತ್ರ ಶರಣಗೌಡ ಕಂದಕೂರ ಅವರನ್ನು ಭೇಟಿ ಮಾಡಲು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೆಲಿಕಾಪ್ಟರ್ ಮೂಲಕ ಯಾದಗಿರಿಗೆ ತೆರಳಿದ್ದು, ಪಕ್ಷ ಬದಲಾಯಿಸಲು ಹಣ ನೀಡಿದ್ದಾರೆ ಎಂಬ ವದಂತಿಗಳ ಕುರಿತು ಮಾತನಾಡಿದ ವಿಶ್ವನಾಥ್ ಅವರು, ಇದು ನಿಜ. ಈ ಕುರಿತ ಆಡಿಯೋ ಟೇಪ್ ಗಳೂ ಕೂಡ ಬಿಡುಗಡೆಯಾಗಿದೆ. ಆದರೆ, ಇದನ್ನು ಎಳೆದುಕೊಂಡು ಹೋಗಲು ನಾನು ಇಚ್ಛಿಸುವುದಿಲ್ಲ ಎಂದು ತಿಳಿಸಿದ್ದಾರೆ. 

2008 ಮತ್ತು 2019 ಎರಡೂ ಸಂದರ್ಭಗಳಲ್ಲಿ ಬಿಜೆಪಿಗೆ ಬಹುಮತದ ಕೊರತೆಯಿತ್ತು. ಈ ವೇಳೆ ಶಾಸಕರನ್ನು ಖರೀದಿ ಮಾಡಿತ್ತು ಎಂದರು. 

ಈ ವೇಳೆ ಕಾನೂನು ವ್ಯವಸ್ಥೆಯಿಂದ ಯಾವುದೇ ಸಹಾಯವಾಗಿಲ್ಲವೇ? ಪಕ್ಷಾಂತರ ನಿಷೇಧ ಕಾನೂನು ಕೇವಲ ಜೋಕ್ ಆಗಿ ಮಾರ್ಪಟ್ಟಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಕಾನೂನು ವ್ಯವಸ್ಥೆಯು ಇನ್ನೂ ಜೀವಂತವಾಗಿರಬಹುದು. ಆದರೆ, ಪಕ್ಷಾಂತರ ವಿರೋಧಿ ನೀತಿಯನ್ನು ತಮಾಷೆಗೆ ನೋಡಲಾಗುತ್ತಿದೆ ಎಂದು ತಿಳಿಸಿದರು. 

2019ರಲ್ಲಿ ಬಿಜೆಪಿ ಸರ್ಕಾರ ರಚಿಸಲು ಬಂಡಾಯ ನಾಯಕರ ನೇತೃತ್ವ ವಹಿಸಿದ್ದ ರಮೇಶ್ ಜಾರಕಿಹೊಳಿಯವರಿಗೆ ಪ್ರಕರಣವೊಂದರಲ್ಲಿ ಕ್ಲೀನ್ ಚಿಟ್ ದೊರೆತಿದ್ದರೂ, ಬಿಜೆಪಿ ಜಾರಕಿಹೊಳಿಗೆ ಸಚಿವ ಸ್ಥಾನ ನೀಡದ್ದ ಕುರಿತು ಮಾತನಾಡಿ, ಬಿಜೆಪಿಯಲ್ಲಿ ಯೂಸ್ ಅಂಡ್ ಥ್ರೋ ವ್ಯವಸ್ಥೆಯನ್ನು ಅನುಸರಿಸುವ ಕೆಲವು ನಾಯಕರು ಇದ್ದಾರೆ ಎಂದರು. 

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಕುರಿತು ಮಾತನಾಡಿ, ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಶ್ ನಾಯಕರು ಎದುರಿಸಿದ ಸ್ಥಿತಿಯೇ ಶಿಂಧೆಯವರಿಗೂ ಎದುರಾಗಲಿದೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT