ಡಿ.ಕೆ ಶಿವಕುಮಾರ್ 
ರಾಜಕೀಯ

'ಅಣ್ಣ' ಕೋಣನಾದ್ರೂ ಬಲಿ ಕೊಡ್ಲಿ, ನಿಂಬೆ ಹಣ್ಣನ್ನಾದ್ರೂ ಮಂತ್ರಿಸಿ ಇಟ್ಟುಕೊಳ್ಳಲಿ; ಪುತ್ರವ್ಯಾಮೋಹ ತಿರಸ್ಕರಿಸಿ ಇತಿಹಾಸ ಸೃಷ್ಟಿಸಿ!

ಈ ಪುತ್ರ ವ್ಯಾಮೋಹ ಯಾರನ್ನೂ ಬಿಡೋದಿಲ್ಲ. ಧೃತರಾಷ್ಟ್ರನ ಪುತ್ರ ಪ್ರೇಮದಿಂದಲೇ ಮಹಾಭಾರತ ನಡೆಯಿತು. ಒಂದು ಕಡೆ ಪಾಂಡವರು, ಇನ್ನೊಂದು ಕಡೆ ನೂರು ಮಂದಿ ಕೌರವರು. ಪಾಂಡವರು ಬರೀ ಐದು ಗ್ರಾಮ ಕೇಳ್ತಾರೆ.

ಹಾಸನ: ಅಣ್ಣ (ರೇವಣ್ಣ) ಕೋಣನಾದ್ರೂ ಬಲಿ ಕೊಡ್ಲಿ. ನಿಂಬೆ ಹಣ್ಣನಾದ್ರೂ ಮಂತ್ರಿಸಿ ಇಟ್ಟುಕೊಳ್ಳಲಿ, ಆದರೆ ಒಂದು ಮಾತು ಹೇಳ್ತೇನೆ, ಇದು ನೂರಕ್ಕೆ ನೂರರಷ್ಟು ಸತ್ಯ, ಈಗ ನಿಂಬೆ ಹಣ್ಣು ವರ್ಕೌಟ್ ಆಗಲ್ಲ. ಎಲ್ಲ ರಿವರ್ಸ್ ಹೊಡೆಯುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಹೊಳೆನರಸೀಪುರದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿ ಅವರು,  ಈ ಪುತ್ರ ವ್ಯಾಮೋಹ ಯಾರನ್ನೂ ಬಿಡೋದಿಲ್ಲ. ಧೃತರಾಷ್ಟ್ರನ ಪುತ್ರ ಪ್ರೇಮದಿಂದಲೇ ಮಹಾಭಾರತ ನಡೆಯಿತು. ಒಂದು ಕಡೆ ಪಾಂಡವರು, ಇನ್ನೊಂದು ಕಡೆ ನೂರು ಮಂದಿ ಕೌರವರು. ಪಾಂಡವರು ಬರೀ ಐದು ಗ್ರಾಮ ಕೇಳ್ತಾರೆ. ಆದರೆ ಧೃತರಾಷ್ಟ್ರ ಪುತ್ರ ಪ್ರೇಮದಿಂದ ಅವರಿಗೆ ಐದು ಗ್ರಾಮ ಸಿಗೋದಿಲ್ಲ. ಕೊನೆಗೆ ಕುರುಕ್ಷೇತ್ರ ಯುದ್ಧ ನಡೆಯಿತು. ಧರ್ಮರಾಜ್ಯ ಸಂಸ್ಥಾಪನೆ ಆಯಿತು ಎಂದರು.

ನೀವು ಹೊಳೆನರಸೀಪುರದ ಜನ ಈ ಧರ್ಮ ಸೂಕ್ಷ್ಮ ಅರ್ಥ ಮಾಡಿಕೊಂಡು, ಇಂಥದ್ದೇ ಇತಿಹಾಸ ಸೃಷ್ಟಿ ಮಾಡಬೇಕು, ಕಾಂಗ್ರೆಸ್ ಅಭ್ಯರ್ಥಿಯನ್ನು ವಿಧಾನಸಭೆಗೆ ಆರಿಸಿ ಕಳುಹಿಸುವ ಐತಿಹಾಸಿಕ ನಿರ್ಧಾರವನ್ನು ನೀವು ಮಾಡಬೇಕು. ಆ ಮೂಲಕ ಧರ್ಮರಾಜ್ಯ ಸ್ಥಾಪನೆ ಮಾಡಬೇಕು ಎಂದು ಕರೆ ನೀಡಿದರು.

ಅಣ್ಣ (ರೇವಣ್ಣ) ಕೋಣನಾದ್ರೂ ಬಲಿ ಕೊಡ್ಲಿ. ನಿಂಬೆ ಹಣ್ಣನಾದ್ರೂ ಮಂತ್ರಿಸಿ ಇಟ್ಟುಕೊಳ್ಳಲಿ. ಆದರೆ ಒಂದು ಮಾತು ಹೇಳ್ತೇನೆ, ಇದು ನೂರಕ್ಕೆ ನೂರರಷ್ಟು ಸತ್ಯ, ಈಗ ನಿಂಬೆ ಹಣ್ಣು ವರ್ಕೌಟ್ ಆಗಲ್ಲ. ಎಲ್ಲ ರಿವರ್ಸ್ ಹೊಡಿಯುತ್ತದೆ. ಈಗಾಗಲೇ ಹೊಡೀತಾ ಇದೆ. ಹೊಳೆನರಸೀಪುರ, ಹಾಸನ, ಅರಸೀಕೆರೆಯಲ್ಲಿ ಏನೇನು ಆಗ್ತಾ ಇದೆ ಅಂತ ನೀವೇ ನೋಡ್ತಾ ಇದ್ದೀರಲ್ಲ ಎಂದು ಮಾಜಿ ಸಚಿವ ಎಚ್‌.ಡಿ ರೇವಣ್ಣ ವಿರುದ್ದ ಕಿಡಿಕಾರಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಖಾಸಗಿ ಶಾಲೆಗಳ ಮಾನ್ಯತೆ: ನಿಯಮಗಳ ಪರಿಷ್ಕರಣೆಗೆ ಸದನ ಸಮಿತಿ ರಚನೆ- ಸಚಿವ ಮಧು ಬಂಗಾರಪ್ಪ

ಕೊಲೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಜಾ!

ದೇಶಕ್ಕೆ ಸ್ವಾತಂತ್ರ್ಯ ಬಂದ 79 ವರ್ಷಗಳ ನಂತರ 'ವಂದೇ ಮಾತರಂ' ಚರ್ಚೆಯ ಅಗತ್ಯವೇನಿತ್ತು?: ಪ್ರಿಯಾಂಕಾ ಗಾಂಧಿ; Video

ಪೂಮಾದಿಂದ 300 ಕೋಟಿ ಆಫರ್ ಕೈಬಿಟ್ಟ ಕೊಹ್ಲಿ: ತನ್ನದೇ ಬ್ರ್ಯಾಂಡ್ ಗಾಗಿ ಹೊಸ ಡೀಲ್, 40 ಕೋಟಿ ರೂ. ಹೂಡಿಕೆ!

ಮಳೆ, ಚಳಿಯಿಂದಾಗಿ ಕರ್ನಾಟಕದಲ್ಲಿ ಬಿಯರ್ ಮಾರಾಟದಲ್ಲಿ ಶೇ. 19.55ರಷ್ಟು ಕುಸಿತ: ಸಚಿವ ತಿಮ್ಮಾಪುರ

SCROLL FOR NEXT