ಮಲ್ಲಿಕಾರ್ಜುನ ಖರ್ಗೆ 
ರಾಜಕೀಯ

ಕಾಶ್ಮೀರ ಪ್ರವಾಸ ರದ್ದುಗೊಳಿಸಿದ ಮೋದಿ ಪ್ರವಾಸಿಗರಿಗೆ ಎಚ್ಚರಿಕೆ ನೀಡಿದ್ದರೆ, 26 ಜೀವಗಳು ಉಳಿಯುತ್ತಿದ್ದವು: ಖರ್ಗೆ

ಹೊಸಪೇಟೆಯಲ್ಲಿ ಆಯೋಜಿಸಲಾಗಿದ್ದ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಖರ್ಗೆ, ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳದಿರುವುದು ಮತ್ತು ಸರ್ವಪಕ್ಷ ಸಭೆಗೆ ಗೈರು ಆದ ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಹೊಸಪೇಟೆ: ಗುಪ್ತಚರ ಮಾಹಿತಿಯ ಆಧಾರದ ಮೇಲೆ ತಮ್ಮ ಕಾಶ್ಮೀರ ಪ್ರವಾಸವನ್ನು ರದ್ದುಗೊಳಿಸಿದ ಪ್ರಧಾನಿ ನರೇಂದ್ರ ಮೋದಿ, ಆ ಬಗ್ಗೆ ಜನರಿಗೂ ಎಚ್ಚರಿಕೆ ನೀಡಿದ್ದರೆ, 26 ಪ್ರವಾಸಿಗರ ಜೀವ ಉಳಿಸಬಹುದಿತ್ತು ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಹೇಳಿದ್ದಾರೆ.

ಕಳೆದ ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ್ದಾರೆ.

ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಇಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಆಯೋಜಿಸಲಾಗಿದ್ದ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಖರ್ಗೆ, ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳದಿರುವುದು ಮತ್ತು ಸರ್ವಪಕ್ಷ ಸಭೆಗೆ ಗೈರು ಆದ ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

"ಪಹಲ್ಗಾಮ್‌ ಉಗ್ರರ ದಾಳಿಗೆ ಭದ್ರತಾ ವೈಫಲ್ಯವೇ ಕಾರಣ ಎಂದ ಖರ್ಗೆ, ಪ್ರವಾಸಿಗರಿಗೆ ಪೊಲೀಸ್ ಅಥವಾ ಗಡಿ ಭದ್ರತಾ ಪಡೆ ಅಥವಾ ಮಿಲಿಟರಿಯಿಂದ ಯಾವುದೇ ಭದ್ರತೆ ನೀಡಲಾಗಿಲ್ಲ. ಇಲ್ಲಿಯವರೆಗೆ ಮೋದಿ(ಭದ್ರತಾ ವೈಫಲ್ಯದ ಬಗ್ಗೆ) ಒಂದು ಮಾತನ್ನೂ ಹೇಳಿಲ್ಲ ಅಥವಾ ಉತ್ತರ ನೀಡಿಲ್ಲ. ಏಪ್ರಿಲ್ 17 ರಂದು ಮೋದಿಯವರ ಕಾಶ್ಮೀರ ಭೇಟಿ ನಿಗದಿಯಾಗಿತ್ತು. ಆದರೆ ಗುಪ್ತಚರ ಅಧಿಕಾರಿಗಳು ಅದಕ್ಕೆ ಅವಕಾಶ ನೀಡಲಿಲ್ಲ. ಹೀಗಾಗಿ ಅವರ ಪ್ರವಾಸವನ್ನು ರದ್ದುಪಡಿಸಲಾಯಿತು. ನೀವು ನಿಮ್ಮ ಕಾಶ್ಮೀರ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದೀರಿ. ಆದರೆ ಪ್ರವಾಸಿಗರಿಗೆ ಏಕೆ ಎಚ್ಚರಿಕೆ ನೀಡಲಿಲ್ಲ? ಅವರಿಗೆ ಎಚ್ಚರಿಕೆ ನೀಡಿದ್ದರೆ 26 ಜೀವಗಳನ್ನು ಉಳಿಸಬಹುದಿತ್ತು" ಎಂದು ಖರ್ಗೆ ಹೇಳಿದರು.

"ನಮ್ಮ ವಿರುದ್ಧ ಹೋರಾಡಲು ಪಾಕಿಸ್ತಾನಕ್ಕೆ ತನ್ನದೇ ಆದ ಶಕ್ತಿಯಿಲ್ಲ. ನಮ್ಮ ವಿರುದ್ಧ ಹೋರಾಡಲು ಚೀನಾದ ಬೆಂಬಲವನ್ನು ಪಡೆಯಿತು. ಏಪ್ರಿಲ್ 22 ರಂದು ಬೆಂಗಳೂರಿನಲ್ಲಿ ನಾನು ದೇಶವು ಸರ್ಕಾರವನ್ನು ಬೆಂಬಲಿಸಲು ಒಗ್ಗಟ್ಟಾಗುತ್ತದೆ ಮತ್ತು ನಾವೆಲ್ಲರೂ ಒಗ್ಗಟ್ಟಿನಿಂದ ಯುದ್ಧವನ್ನು ನಡೆಸುತ್ತೇವೆ ಮತ್ತು ಜಾತಿ, ಧರ್ಮಕ್ಕಿಂತ ದೇಶದ ಹಿತಾಸಕ್ತಿ ಮುಖ್ಯ. ನಮ್ಮ ಪ್ರಾಣವನ್ನು ತ್ಯಾಗ ಮಾಡುತ್ತೇವೆ ಎಂದು ಹೇಳಿದ್ದೆ. ಆದರೆ ಬಿಜೆಪಿಯವರಿಗೆ ದೇಶಕ್ಕಿಂತ ಮೋದಿಯೇ ಮುಖ್ಯ. ಕಾಂಗ್ರೆಸ್ ಕೂಡ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರ ಪಕ್ಷ. ಮಹಾತ್ಮ ಗಾಂಧಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಈ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ ಎಂದರು.

"ನಾವು ದೇಶಕ್ಕಾಗಿ ಸರ್ವಪಕ್ಷ ಸಭೆಯಲ್ಲಿ ಕುಳಿತಾಗ, ಮೋದಿ ಬಿಹಾರಕ್ಕೆ ಚುನಾವಣೆ ಪ್ರಚಾರಕ್ಕಾಗಿ ಹೋಗಿದ್ದರು. ಎರಡು ಬಾರಿ ಅವರು ಸರ್ವಪಕ್ಷ ಸಭೆ ಕರೆದರೂ ಅವರು ಬರಲಿಲ್ಲ. ನೀವು ದೇಶಭಕ್ತರಾಗಿದ್ದರೆ ಮತ್ತು ದೇಶದ ಬಗ್ಗೆ ಪ್ರೀತಿ ಹೊಂದಿದ್ದರೆ, ನಮ್ಮನ್ನು ಕರೆದ ನಂತರ ನೀವು ಏಕೆ ಬರಲಿಲ್ಲ? ನಾವು ಸರ್ವಪಕ್ಷ ಸಭೆಗೆ ಹಾಜರಾಗದಿದ್ದರೆ ನಮ್ಮನ್ನು ದೇಶದ್ರೋಹಿಗಳೆಂದು ಹಣೆಪಟ್ಟಿ ಕಟ್ಟಲಾಗುತ್ತಿತ್ತು. ಆದರೆ ಸಭೆಗೆ ಹಾಜರಾಗದಿದ್ದರೂ ಅವರನ್ನು ದೇಶಭಕ್ತ ಎಂದು ಕರೆಯಲಾಗುತ್ತಿದೆ. ದೇಶದ ಕಲ್ಯಾಣದ ಬಗ್ಗೆ ಬರಿ ಮಾತನಾಡುವುದರಿಂದ ಸಾಧ್ಯವಿಲ್ಲ, ಎಲ್ಲರನ್ನೂ ಕರೆದುಕೊಂಡು ಹೋಗುವುದು ಮುಖ್ಯ" ಎಂದು ವಾಗ್ದಾಳಿ ನಡೆಸಿದರು.

ಕರ್ನಲ್ ಸೋಫಿಯಾ ಖುರೇಷಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಮಧ್ಯಪ್ರದೇಶದ ಬಿಜೆಪಿ ಸಚಿವ ವಿಜಯ್ ಶಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಮೋದಿಗೆ ಒತ್ತಾಯಿಸಿದ ಖರ್ಗೆ, "ನಾವು ಅವರ ರಾಜೀನಾಮೆ ಕೇಳಿದ್ದೇವೆ. ಆದರೆ ಮೋದಿ ಇನ್ನೂ ಅವರನ್ನು ಸಂಪುಟದಲ್ಲಿಯೇ ಉಳಿಸಿಕೊಂಡಿದ್ದಾರೆ. ಮೊದಲು ಬಿಜೆಪಿಯೊಳಗಿನ ಆ ದೇಶದ್ರೋಹಿಗಳನ್ನು ತೆಗೆದುಹಾಕಿ ಮತ್ತು ನಂತರ ಮಾತನಾಡಿ" ಎಂದರು.

ಎಸ್‌ಸಿ ಜಾತಿ ಜನಗಣತಿ ಬಗ್ಗೆ ಸಿಎಂ ಸಿದ್ದುಗೆ ಎಚ್ಚರಿಕೆ

ನಡೆಯುತ್ತಿರುವ ಎಸ್‌ಸಿ ಜಾತಿ ಜನಗಣತಿಯಲ್ಲಿ 'ಬೇಡ ಜಂಗಮ' ಎಂದು ನೋಂದಾಯಿಸಿಕೊಳ್ಳುವ ಅನೇಕ ಎಸ್‌ಸಿಯೇತರರ ಸಮಸ್ಯೆಯನ್ನು ಪರಿಹರಿಸಲು ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚಿಸಿದರು.

"ನಾನು ಒಳ ಮೀಸಲಾತಿ ವಿಷಯದಲ್ಲಿ ಎಂದಿಗೂ ಮಧ್ಯಪ್ರವೇಶಿಸಲಿಲ್ಲ. ಆದರೆ ಅನೇಕರು 'ಬೇಡ ಜಂಗಮ' ಎಂದು ದಾಖಲಾಗಿದ್ದಾರೆ. ಲಿಂಗಾಯಿತರಲ್ಲಿ ಬಡವರಿಗೆ ಸವಲತ್ತುಗಳನ್ನು ನೀಡಲಿ. ಆದರೆ ಅವರನ್ನು ಎಸ್‌ಸಿ ಪಟ್ಟಿಯಲ್ಲಿ ಸೇರಿಸಬಾರದು. ಕೆಲವು ವರ್ಷಗಳ ಹಿಂದೆ ಸುಮಾರು 500 ರಷ್ಟಿದ್ದ ಬೇಡ ಜಂಗಮದ ಜನಸಂಖ್ಯೆ ಈಗ 5 ಲಕ್ಷ ತಲುಪಿದೆ ಮತ್ತು ಅದು ಹೇಗೆ ಸಾಧ್ಯ?. ಎಸ್ ಸಿಗೆ ಅವರನ್ನು ಸೇರಿಸಿದರೆ ಇದು ಅನ್ಯಾಯ; ಇದು ಎಸ್‌ಸಿ ಜನರ ಮೇಲೆ ಪರಿಣಾಮ ಬೀರುತ್ತದೆ. ಸುಳ್ಳು ಎಸ್‌ಸಿ ಪ್ರಮಾಣಪತ್ರಗಳ ವಿಷಯಕ್ಕೆ ಕಾರಣರಾದವರು ಜೈಲಿಗೆ ಕಳುಹಿಸಬೇಕು. ಏಕೆಂದರೆ ಅದು ವಂಚನೆಗೆ ಸಮಾನವಾಗಿರುತ್ತದೆ" ಎಂದು ಅವರು ಸಿದ್ದರಾಮಯ್ಯ ಅವರ ಗಮನಕ್ಕೆ ತಂದರು.

ಜಾತಿ ಗಣತಿ ವಿಚಾರದಲ್ಲಿ "ರಾಹುಲ್ ಗಾಂಧಿ ಅವರಿಗೆ ಕೆಟ್ಟ ಹೆಸರು ತರಬೇಡಿ. ಏಕೆಂದರೆ ಅವರು ಜಾತಿ ಜನಗಣತಿಗಾಗಿ ಹೋರಾಡಿದ್ದರು ಮತ್ತು ಅವರ ಒತ್ತಡದಿಂದಾಗಿ ಮೋದಿ ಸರ್ಕಾರವು ರಾಷ್ಟ್ರೀಯ ಜನಗಣತಿಯಲ್ಲಿ ಜಾತಿ ಜನಗಣತಿಯನ್ನು ಸೇರಿಸುವುದಾಗಿ ಘೋಷಿಸಿದೆ" ಎಂದು ಖರ್ಗೆ ಸಲಹೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಗದ್ದುಗೆ ಗುದ್ದಾಟ: 'ಹೈಕಮಾಂಡ್' ನತ್ತ ಎಲ್ಲರ ಚಿತ್ತ, ಮುಂದೇನು?

ಕೇರಳ: ರೂ. 50 ಲಕ್ಷ ಮೌಲ್ಯದ 'ಐಷಾರಾಮಿ ಬೈಕ್' ಬೇಕೆಂದು ಗಲಾಟೆ, ತಂದೆಯಿಂದ ಹಲ್ಲೆಗೊಳಗಾದ ಯುವಕ ಸಾವು!

SCROLL FOR NEXT