ಉಮಾಶ್ರೀ  
ರಾಜಕೀಯ

'ನಾನು ಸಚಿವ ಸ್ಥಾನ ಆಕಾಂಕ್ಷಿ, ಪಕ್ಷಕ್ಕೆ ಕೆಲಸ ಮಾಡಿರುವುದನ್ನು ಪರಿಗಣಿಸಿ ನನಗೆ ಹುದ್ದೆ ನೀಡಬೇಕು': ಉಮಾಶ್ರೀ

ಸಚಿವ ಸಂಪುಟ ವಿಸ್ತರಣೆಯಲ್ಲಿ 19 ಮಂದಿಗೆ ಸ್ಥಾನ ನೀಡಿ ಒಂದು ಸ್ಥಾನ ಕಾಯ್ದಿರಿಸಿದ್ದಾರೆ, ನಾನು ಕೂಡ ಸಚಿವೆ ಸ್ಥಾನ ಆಕಾಂಕ್ಷಿ, ನಮ್ಮ ಪಕ್ಷ ನನಗೆ ಅವಕಾಶ ಮಾಡಿಕೊಡಬಹುದು ಎಂಬ ನಿರೀಕ್ಷೆಯಿದೆ, ನೋಡೋಣ ಏನು ಮಾಡುತ್ತಾರೆ ಎಂದು, ಕಾದು ನೋಡೋಣ ಎಂದರು.

ಬೆಂಗಳೂರು: ನನಗೆ ಉಪ ಸಭಾಪತಿ ಸ್ಥಾನ ನೀಡಿದ್ದಾರೆ, ನಾನು ಸಚಿವ ಸ್ಥಾನದ ಆಕಾಂಕ್ಷಿಯೂ ಹೌದು ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನಗೆ ಭರವಸೆ ಇದೆ, ಪಕ್ಷ ಸೂಕ್ತ ತೀರ್ಮಾನ ತೆಗೆದುಕೊಂಡು ನನಗೆ ಸಚಿವೆ ಸ್ಥಾನ ನೀಡಬಹುದು ಎಂಬ ನಂಬಿಕೆಯಿದೆ ಎಂದರು.

ಸಚಿವ ಸಂಪುಟ ವಿಸ್ತರಣೆಯಲ್ಲಿ 19 ಮಂದಿಗೆ ಸ್ಥಾನ ನೀಡಿ ಒಂದು ಸ್ಥಾನ ಕಾಯ್ದಿರಿಸಿದ್ದಾರೆ, ನಾನು ಕೂಡ ಸಚಿವೆ ಸ್ಥಾನ ಆಕಾಂಕ್ಷಿ, ನಮ್ಮ ಪಕ್ಷ ನನಗೆ ಅವಕಾಶ ಮಾಡಿಕೊಡಬಹುದು ಎಂಬ ನಿರೀಕ್ಷೆಯಿದೆ, ನೋಡೋಣ ಏನು ಮಾಡುತ್ತಾರೆ ಎಂದು, ಕಾದು ನೋಡೋಣ ಎಂದರು.

ಪಕ್ಷಕ್ಕೆ ದುಡಿದು, ಕೆಲಸ ಮಾಡಿರುವುದನ್ನು ಪರಿಗಣಿಸಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ, ಮೂವರು ಮಹಿಳಾ ಶಾಸಕರಿಗೆ ಈ ಬಾರಿ ಅವಕಾಶ ನೀಡಬಹುದು ಎಂಬ ನಿರೀಕ್ಷೆಯಲ್ಲಿದ್ದೆವು. ಕೇಳಿದ್ದೆವು ಕೂಡ. ವರಿಷ್ಠ ಹಂತದಲ್ಲಿ ಕೊನೆ ಗಳಿಗೆಯಲ್ಲಿ ಏನು ತೀರ್ಮಾನವಾಯಿತೋ ಗೊತ್ತಿಲ್ಲ, ಮಹಿಳೆಯರು ಸಚಿವರಾಗಲಿಲ್ಲ ಎಂಬ ನೋವು ಖಂಡಿತಾ ಇದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೀದಿ ಜೊತೆಗೆ ಕಾಂಗ್ರೆಸ್ ಗೂ ಶಾಕ್; TMC ಬೆಂಬಲ ಬೆನ್ನಲ್ಲೇ ನಂದಿಗ್ರಾಮ 'ಕೈ' ಅಭ್ಯರ್ಥಿ ಕೊಲೆ ಕೇಸ್`ನಲ್ಲಿ ಅರೆಸ್ಟ್!

‘ಪ್ರಜಾಪ್ರಭುತ್ವದ ಕರಾಳ ದಿನ’, 'ತಲೆ ಬಾಗಲ್ಲ, ಯಾರಿಗೂ ಶರಣಾಗಲ್ಲ'; ಮಮತಾ ಬ್ಯಾನರ್ಜಿ ಕೆಂಡಾಮಂಡಲ

ತುಳು ಭಾಷೆಗೆ ಸಿಕ್ತು ಅಧಿಕೃತ ಸ್ಥಾನಮಾನ: ಕರ್ನಾಟಕದ 2ನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಣೆ, ಕರಾವಳಿಗೆ ಹೊಸ ಟೂರಿಸಂ ನೀತಿ!

ಪ್ರಧಾನಿ ಮೋದಿಗೆ UAE ಅಧ್ಯಕ್ಷ ನಹ್ಯಾನ್ ದೂರವಾಣಿ ಕರೆ: ಪಶ್ಚಿಮ ಏಷ್ಯಾದಲ್ಲಿನ ಬೆಳವಣಿಗೆ, ಕಾರ್ಯತಂತ್ರದ ಪಾಲುದಾರಿಕೆ ಕುರಿತು ಚರ್ಚೆ!

ದೀದಿ ಬಣಕ್ಕೆ ಫುಟ್‌ಬಾಲ್, ಬಂಡಾಯಗಾರರಿಗೆ ಲಕೋಟೆ: ಟಿಎಂಸಿ ಚಿಹ್ನೆ ಫ್ರೀಜ್ ಬೆನ್ನಲ್ಲೇ ಚುನಾವಣಾ ಆಯೋಗದಿಂದ ಮಹತ್ವದ ಆದೇಶ!