ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಸಿಎಂ ಡಿಕೆ ಶಿವಕುಮಾರ್ 
ರಾಜಕೀಯ

ಬರಗಾಲ ಇದ್ದರೂ ಅದ್ದೂರಿ ದಸರಾ ಏಕೆ? ವಿಧಾನಸೌಧ ಕೂಡ ನಮ್ಮಪ್ಪನ ಆಸ್ತಿ ಎಂದು ಮಾರಿ ಬಿಡ್ತಾರೆ: ಎಚ್.ಡಿ ಕುಮಾರಸ್ವಾಮಿ

ಪ್ರತಿ ಪಂಚಾಯಿತಿಗೆ ಭಾರತ್ ಜೋಡೊ ಸಂಘದ ಹೆಸರಿನಲ್ಲಿ 10 ಲಕ್ಷ ಕೊಡುತ್ತಿದೆ. ಆ ಹಣ ಯಾರಪ್ಪನದು? ಇಸ್ಪೀಟ್ ಆಡಿಸಲು ನೀವು ಮಾಡುತ್ತಿದ್ದ ದಂಧೆಗಳನ್ನು ಮುಂದುವರಿಸಲು ಈ ಸಂಘ ಕಟ್ಟುತ್ತಿದ್ದೀರಾ?

ಮೈಸೂರು: ಡಿ.ಕೆ. ಶಿವಕುಮಾರ್ ಇನ್ನೂ 15 ವರ್ಷ ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಅವರು ಈ ಅವಧಿಯನ್ನೇ ಮುಗಿಸಲಿ ಸಾಕು. ಅವರೇ ಇದ್ದರೆ ವಿಧಾನಸೌಧವನ್ನೇ ಮಾರಿಬಿಡುತ್ತಾರೆ.1 ಲಕ್ಷ ಕೋಟಿ ಸಾಲ ಮಾಡಲು ಹುನ್ನಾರ ನಡೆಸಿದ್ದು, ರಾಜ್ಯವನ್ನು ಸಾಲದ ಪ್ರಪಾತಕ್ಕೆ ತಳ್ಳಲು ಹೊರಟಿದ್ದಾರೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ವಿಧಾನಸೌಧ ಕೂಡ ನಮ್ಮಪ್ಪನ ಆಸ್ತಿ ಎಂದುಬಿಡುತ್ತಾರೆ. ಇಂಥವರಿಗೆಲ್ಲ ಬುದ್ಧಿ ಕಲಿಸಬೇಕಿದೆ ಎಂದರು. ಬೆಂಗಳೂರಿನಲ್ಲಿ‌ ಕಸ ಎತ್ತುವುದಕ್ಕೂ ಸಾಲ, ಬಿಡದಿ ಟೌನ್‌ಶಿಪ್‌ಗೂ ಸಾಲ ಎತ್ತುತ್ತಿದ್ದಾರೆ.

ಪ್ರತಿಯೊಂದಕ್ಕೂ ಸಾಲ. ಹೀಗಿರುವಾಗ, ಭಾರತ್ ಜೋಡೊ ಸಂಘಗಳಿಗೆ ಸಾವಿರ ಕೋಟಿ ರೂಪಾಯಿ ಕೊಡಲು ಹಣ ಎಲ್ಲಿತ್ತು? ಎಂದು ಪ್ರಶ್ನಿಸಿದರು.

ತೀವ್ರ ಬರಗಾಲ ಇರುವುದರಿಂದ ದಸರೆಯನ್ನು ಅದ್ದೂರಿ ಬದಲಿಗೆ ಅರ್ಥಪೂರ್ಣವಾಗಿ ಆಚರಿಸಲಿ. ಈ ಸಂದರ್ಭದಲ್ಲಿ ರೈತರ ನೆರವಿಗೆ ಬರಬೇಕಿರುವುದು ಸರ್ಕಾರದ ಕರ್ತವ್ಯ. ಆದರೆ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವವರು ಜನರ ಬಳಿಗೆ ಸುಳಿಯುತ್ತಿಲ್ಲ ಎಂದು ದೂರಿದರು.

ಈ ಸರ್ಕಾರ ಜನರ ತೆರಿಗೆ ದುಡ್ಡನ್ನು ಅನಗತ್ಯವಾಗಿ ಬಳಸಿ, ದುರ್ಬಳಕೆ ಮಾಡಿಕೊಳ್ಳುತ್ತಿದೆ. ಪ್ರತಿ ಪಂಚಾಯಿತಿಗೆ ಭಾರತ್ ಜೋಡೊ ಸಂಘದ ಹೆಸರಿನಲ್ಲಿ 10 ಲಕ್ಷ ಕೊಡುತ್ತಿದೆ. ಆ ಹಣ ಯಾರಪ್ಪನದು? ಇಸ್ಪೀಟ್ ಆಡಿಸಲು ನೀವು ಮಾಡುತ್ತಿದ್ದ ದಂಧೆಗಳನ್ನು ಮುಂದುವರಿಸಲು ಈ ಸಂಘ ಕಟ್ಟುತ್ತಿದ್ದೀರಾ? ಎಂದು ಡಿಕೆಶಿ ಅವರನ್ನು ಕೇಳಿದರು.

ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಬರಪೀಡಿತ ಉತ್ತರ ಕರ್ನಾಟಕದ ಪ್ರದೇಶಗಳಿಗೆ ಶೀಘ್ರದಲ್ಲೇ ಭೇಟಿ ನೀಡುತ್ತೇನೆ. ಅಲ್ಲಿನ ಅನೇಕ ಕಡೆಗಳಲ್ಲಿ ಜನರು ಕಂಗೆಟ್ಟು ಗುಳೇ ಹೋಗಿದ್ದಾರೆ. ಅಧಿಕಾರ ಹಂಚಿಕೆಯ ಗಲಾಟೆಯಲ್ಲಿ ಸರ್ಕಾರ ಮೈಮರೆತಿದೆ ಎಂದು ದೂರಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವೆನೆಜುವೆಲಾ ಜತೆ ‘ವಿಶ್ವದ ಅತಿದೊಡ್ಡ ತೈಲ ಒಪ್ಪಂದ’ ; 65 ಬಿಲಿಯನ್ ಬ್ಯಾರೆಲ್ ತೈಲ ನಿಕ್ಷೇಪದ ಮೇಲೆ ಅಮೆರಿಕದ ನಿಯಂತ್ರಣ

ನೇಪಾಳ ಪ್ರವಾಹ: ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್ CEO ನಾಪತ್ತೆ

'ಮಹಾರಾಜರ ಕಾಲದಲ್ಲಿ ಹೊಗಳು ಭಟ್ಟರು ಇರ್ತಿದ್ರು: ನಮ್ಮ ಸರ್ಕಾರಕ್ಕಾಗಿ ಕುಮಾರಣ್ಣನನ್ನು ಇಟ್ಟುಕೊಂಡಿದ್ದೇವೆ; ಹಗರಣ ಸಾಬೀತಾದ್ರೆ ರಾಜಕೀಯ ನಿವೃತ್ತಿ'

ನನ್ನ ಮಗನಿಗೆ ವಾಚ್ ಮನ್ ಕೆಲಸ: ತಂದೆ ಕಳೆದುಕೊಂಡ ಕುಟುಂಬಕ್ಕೆ ಇದೇನಾ ಸಿಗಬೇಕಾದ ನ್ಯಾಯ?; ಮೃತ ಚಂದ್ರಶೇಖರ್ ಪತ್ನಿ

ರಾಜ್ಯದಲ್ಲಿ ಹೆಚ್ಚುತ್ತಿರುವ ಹೆಚ್1ಎನ್1 ಪ್ರಕರಣಗಳು (ಕುಶಲವೇ ಕ್ಷೇಮವೇ)