ಮೈಸೂರು: ಸಿಎಂ ಸಿದ್ದರಾಮಯ್ಯ ಪುತ್ರ, ಪರಿಷತ್ ಸದಸ್ಯ ಡಾ. ಯತೀಂದ್ರ ಮಾಜಿ ಬಿಜೆಪಿ ಸಂಸದ ಪ್ರತಾಪ್ ಸಿಂಹಗೆ ಮಾಡೋಕೆ ಕೆಲಸ ಇಲ್ಲದವರ ಆರೋಪಗಳಿಗೆ ನಾನು ಉತ್ತರ ನೀಡುವುದಿಲ್ಲ ಎಂದು ಹೇಳಿದ್ದರು. ಇದಕ್ಕೆ ತೀವ್ರ ತಿರುಗೇಟು ನೀಡಿರುವ ಪ್ರತಾಪ್ ಸಿಂಹ ಕೆಲಸ ಅಂದರೆ ಬರೀ ವರ್ಗಾವಣೆ ಮಾಡಿಸೋದಾ? ಎಂದು ಕುಹಕವಾಡಿದ್ದಾರೆ.
ಅಪ್ಪನ ಅಧಿಕಾರ ದುರುಪಯೋಗ ಮಾಡಿಕೊಂಡು ಹಣ ಮಾಡೋದೇ ಕೆಲಸನಾ? ನಿಮ್ಮಂತಹ ಕೆಲಸವನ್ನು ನಾನು ಯಾವತ್ತೂ ಮಾಡಲ್ಲ. ವರ್ಗಾವಣೆ ದಂಧೆ ಕೆಲಸ ನಿಮಗೇ ಇರಲಿ. ನಿಮ್ಮ ಅಪ್ಪ ಸಹ ನಾಲ್ಕು ಬಾರಿ ಚುನಾವಣೆಯಲ್ಲಿ ಸೋತಿದ್ದರು. ಅವರನ್ನು ಕೆಲಸ ಇಲ್ಲದವರು ಅನ್ನುತ್ತಿದ್ರಾ? ನಂಗೆ ತಪ್ಪಿರೋದು ಟಿಕೆಟ್ ಅಷ್ಟೇ. ನನ್ನಂತೆ 130ಕ್ಕೂ ಹೆಚ್ಚು ಜನರಿಗೆ ಲೋಕಸಭೆ ಟಿಕೆಟ್ ತಪ್ಪಿತ್ತು. ನನ್ನ ಜೊತೆ ಸಂಸದರಾಗಿದ್ದ ಪರ್ವೇಶ್ ವರ್ಮಾ ಅವರು ದೆಹಲಿ ವಿಧಾನಸಭೆಯಿಂದ ಸ್ಪರ್ಧಿಸಿ ಗೆದ್ದು ಇಂದು ದೆಹಲಿ ಡಿಸಿಎಂ ಆಗಿದ್ದಾರೆ.
ನಾನು ವಿಧಾನಸಭೆಗೆ ಮೈಸೂರಿನಿಂದಲೇ ಗೆದ್ದು ಬರ್ತೀನಿ. ಅವತ್ತು ನೀವು ಎಲ್ಲಿ ಇರುತ್ತೀರಾ ನೋಡ್ತಿನಿ. ನಿಮ್ಮ ರೀತಿ ಹಿಂಬಾಗಿಲಿನಿಂದ ವಿಧಾನಸಭೆಗೆ ಬರುವ ಜಾಯಮಾನ ನನ್ನದಲ್ಲ ಎಂದು ಪ್ರತಾಪ್ ಸಿಂಹ್ ವಾಗ್ದಾಳಿ ನಡೆಸಿದರು.