ಬೆಂಗಳೂರು: ಕರ್ನಾಟಕದಲ್ಲಿ ವಿಧಾನಪರಿಷತ್ ಚುನಾವಣೆಗೆ ಮತದಾನ ನಡೆದಿದೆ. ಜೆಡಿಎಸ್ ಪಕ್ಷದ ವತಿಯಿಂದ ಹೆಚ್ ಡಿ ರೇವಣ್ಮ ತಮ್ಮ ಮತ ಚಲಾಯಿಸಿದರು. ಬಳಿಕ ಮಾತನಾಡಿದ ಅವರು, ತಮ್ಮ ಮೈತ್ರಿ ಪಕ್ಷ ಬಿಜೆಪಿ ವಿರುದ್ಧ ಕಿಡಿಕಾರಿದರು.
ದೇವೇಗೌಡರು ಪ್ರಧಾನಿ ಹುದ್ದೆಯನ್ನು ತೊರೆದು ಬಂದಿದ್ದಾರೆ. ಇನ್ನು ಈ ರಾಜ್ಯಸಭಾ ಸ್ಥಾನಕ್ಕಾಗಿ ಇನ್ನೊಬ್ಬರ ಮನೆ ಮುಂದೆ ಹೋಗಿ ಬೇಡಿಕೊಳ್ಳುತ್ತಾರಾ? ಮೊದಲು ಬಿಜೆಪಿಗರು ದೇವೇಗೌಡರು ಮತ್ತು ಸದಾನಂದಗೌಡ ಹೆಸರನ್ನು ಹೇಳಿದ್ದರೂ ನಂತರ ಮಂಡ್ಯ ಮೇಡಂ ಹೆಸರನ್ನು ಹೇಳಿದರೂ. ಸುಮಲತಾ ಅವರಿಗಾದರೂ ಟಿಕೆಟ್ ಕೊಟ್ಟಿದ್ದರೇ ತಮ್ಮ ತಕರಾರು ಇರುತ್ತಿರಲಿಲ್ಲ. ನಮ್ಮವರು ಯಾರೋ ಒಬ್ಬರು ಇದ್ದಾರೆ ಅಂತ ಅಂದುಕೊಳ್ಳುತ್ತಿದ್ದೇವು. ಇರಲಿ ಇನ್ನು ಎರಡೂ ವರ್ಷ 2028 ಚುನಾವಣೆಯಲ್ಲಿ ನೋಡೋಣ ಎಂದು ರೇವಣ್ಣ ಹೇಳಿದ್ದಾರೆ.