ಪುಸ್ತಕ ಖರೀದಿಯಲ್ಲಿ ತೊಡಗಿರುವ ಸಾಹಿತ್ಯಾಸಕ್ತರು (ಸಂಗ್ರಹ ಚಿತ್ರ) 
ವಿಶೇಷ-ವೈವಿಧ್ಯ

ಪುಸ್ತಕಗಳ ದಾಖಲೆ ಮಾರಾಟ..!

ಶ್ರವಣಬೆಳಗೊಳ: 81ನೇ ಸಾಹಿತ್ಯ ಸಮ್ಮೇಳನದಲ್ಲಿ ಹಾಕಿದ್ದ ಪುಸ್ತಕ ಮಳಿಗೆಗಳಲ್ಲಿ ಮೂರು ಕೋಟಿಗೂ ಅಧಿಕ ವಹಿವಾಟು ನಡೆದಿದ್ದು, ಕನ್ನಡಿಗರು ಹಿಂದೆಂದೂ ಕಾಣದ ರೀತಿ ಪುಸ್ತಕ ಖರೀಧಿಸಿ ಶತಮಾನೋತ್ಸವ ಸಂದರ್ಭದಲ್ಲಿ ನಡೆದ ಸಮ್ಮೇಳನ ದಾಖಲೆ ನಿರ್ಮಿಸಿದೆ.

 ಶ್ರೀ ಕ್ಷೇತ್ರದ ಚಾರುಕೀರ್ತಿ ಭಟ್ಟಾರಕ ಅವರು ಪುಸ್ತಕ ಮಳಿಗೆಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಪುಸ್ತಕ ಖರೀದಿಸುವವರಿಗೆ ಎಲ್ಲ ಅನುಕೂಲ ಕಲ್ಪಿಸಬೇಕೆಂಬ ನಿಟ್ಟಿನಲ್ಲಿ ಮುಖ್ಯ ವೇದಿಕೆಯ ಎದುರಿನಲ್ಲಿಯೇ ಬೃಹದಾಕಾರದ ಪೆಂಡಾಲ್‍ನಲ್ಲಿ ನೆಲದಿಂದ ಧೂಳು ಬಾರದಂತೆ ನೆಲ ಹಾಸಿಗೆಯನ್ನು ಹಾಕಿಸಿ ವ್ಯವಸ್ಥೆ ಮಾಡಿದ್ದರು. ಫೆ.1ರಂದು ಪ್ರಾರಂಭವಾದ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆಗಳಲ್ಲಿ ಕಿಕ್ಕಿರಿದು ಸಾಲಾಗಿ ನಿಂತು ಪುಸ್ತಕಗಳನ್ನು ಖರೀಧಿಸಿದರು.

ವಿಶಾಲವಾದ ಪೆಂಡಾಲ್ ನಲ್ಲಿ 517 ಪುಸ್ತಕ ಮಳಿಗೆಗಳಲ್ಲಿ ವ್ಯಾಪಾರಿಗಳು ಸಮಿತಿ ನಿಗದಿ ಮಾಡಿದ್ದ ಅತ್ಯಲ್ಪ ಹಣ ಕಟ್ಟಿ ವ್ಯಾಪಾರ ಪ್ರಾರಂಭಿಸಿ ಮುಂಜಾನೆ 7ರಿಂದ 12ರವರೆಗೆ ಪುಸ್ತಕ ವ್ಯಾಪಾರ ಮಾಡಿದರು. ಫೆ.1ರಂದು 90612 ಪುಸ್ತಕಗಳು ರು47,84,775; ಫೆ.2ರಂದು ರು.93ಲಕ್ಷ; ಫೆ.3ರಂದು ರು1 ಕೋಟಿ ಮೌಲ್ಯದ ಪುಸ್ತಕಗಳ ಮಾರಾಟವಾಗಿವೆ. ರಾತ್ರಿ 12 ಗಂಟೆಯವರೆಗೆ ಆಸಕ್ತರು ಪುಸ್ತಕ ಖರೀದಿಯಲ್ಲಿ ತೊಡಗಿದ್ದರು.

ಕಾನೂನು ಪುಸ್ತಕ ದಾಖಲೆ ಮಾರಾಟ
ರಾಜ್ಯ ಕಾನೂನು ಸೇವಾ ಸಮಿತಿ ಮಳಿಗೆಯಲ್ಲಿ ಸಾಮಾನ್ಯ ಜನತೆಗೆ ಕಾನೂನು ಅರಿವು ಮೂಡಿಸುವ ಪುಸ್ತಕಗಳು ಗರಿಷ್ಠ ವ್ಯಾಪಾರವಾಗಿದೆ. 260 ಪುಟಗಳ ಕಾನೂನು ಅರಿವು ಪುಸ್ತಕವನ್ನು ಕೇವಲ ರು20 ಕೈಗೆಟಕುವ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಪುಸ್ತಕ ಮಳಿಗೆಗೆ ಹೋದವರಲ್ಲಿ 10 ಸಾವಿರ ಮಂದಿ ಒಂದೇ ಪುಸ್ತಕವನ್ನು ಖರೀದಿಸಿ ದಾಖಲೆ ನಿರ್ಮಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT