'ಮಾಲ್ಗುಡಿ ಶಾಲಾ ದಿನಗಳು' ಹೊಸ ಮುದ್ರಣದ ಒಂದು ಚಿತ್ರ 
ವಿಶೇಷ

'ಮಾಲ್ಗುಡಿ ದಿನಗಳು' ಹೊಸ ಚಿತ್ರಗಳೊಂದಿಗೆ ಮರುಮುದ್ರಣ

ಮೈಸೂರಿನ ಆರ್ ಕೆ ನಾರಾಯಣ್ ಅವರ...

ನವದೆಹಲಿ: ಮೈಸೂರಿನ ಆರ್ ಕೆ ನಾರಾಯಣ್ ಅವರ 'ಮಾಲ್ಗುಡಿ ದಿನಗಳು' ಕೇಳದವರುಂಟೆ? ಈ ಕಥೆಗಳನ್ನು ಹಿಂದಿಯಲ್ಲಿ ಧಾರಾವಾಹಿಯಾಗಿ ನಿರ್ದೇಶನ ಮಾಡಿ ದೇಶದ ಮನೆ ಮಾತನ್ನಾಗಿಸಿದ ಕೀರ್ತಿಯೂ ಕನ್ನಡಿಗನದ್ದೆ. ಅದು ಶಂಕರ್ ನಾಗ್ ಅವರ ಸೃಷ್ಟಿ.

ಮಕ್ಕಳಿಗೆ ಅತಿ ಪ್ರಿಯವಾದ ಈ "ಮಾಲ್ಗುಡಿ ಸ್ಕೂಲ್ ಡೇಸ್", ಆರ್ ಕೆ ನಾರಾಯಣ್ ಆವರ ಅತಿ ಜನಪ್ರಿಯ ಕೃತಿ "ಸ್ವಾಮಿ ಮತ್ತು ಅವನ ಸ್ನೇಹಿತರು" ಪುಸ್ತಕದ ಸಣ್ಣ ಅವತರಿಣಿಕೆಯಾಗಿದೆ. ಇದರ ಹೊಸ ಆವೃತ್ತಿ ಲಾವಣ್ಯ ನಾಯ್ಡು ಆವರ ಚಿತ್ರಗಳೊಂದಿಗೆ ಮಾರುಕಟ್ಟೆಗೆ ಬಂದಿದೆ.

"ಸ್ವಾಮಿ ಅಂಡ್ ಹಿಸ್ ಫ್ರೆಂಡ್ಸ್" ಪುಸ್ತಕವನ್ನು ಕನ್ನಡಕ್ಕೆ ಇಂದಿರಾಗಾಂಧಿ ಅವರ ಮಾಧ್ಯಮ ಕಾರ್ಯದರ್ಶಿಯಾಗಿದ್ದ ಎಚ್ ವೈ ಶಾರದಾಪ್ರಸಾದ್ ಅವರು ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ. ಇದರ ಮೂಲ ಪುಸ್ತಕಕ್ಕೆ ಆರ್ ಕೆ ನಾರಾಯಣ್ ಅವರ ತಮ್ಮ ಖ್ಯಾತ ವ್ಯಂಗ್ಯಚಿತ್ರಕಾರ ಆರ್ ಕೆ ಲಕ್ಷ್ಮಣ್ ಅವರ ಚಿತ್ರಗಳಿವೆ. ಈ ಕಥೆಗಳು, ಆರ್ ಕೆ ನಾರಾಯಣ್ ಕಲ್ಪನೆಯ 'ಮಾಲ್ಗುಡಿ' ಎಂಬ ಪ್ರದೇಶದಲ್ಲಿ ನಡೆಯುವ ಕಥೆಗಳು. ಇಂದಿಗೂ ಆ ಮಾಲ್ಗುಡಿ ನಿಜವಾದ ಪ್ರದೇಶವೇ ಎಂಬ ಊಹೆ ನಡೆಯುತ್ತಲೇ ಇದೆ. ಮಾಲ್ಗುಡಿ ಎಂಬುದು ಬೆಂಗಳೂರಿನ ಹಳೆಯ ಪ್ರದೇಶಗಳಾದ ಮಲ್ಲೇಶ್ವರಂ ಮತ್ತು ಬಸವನಗುಡಿ ಕೂಡಿ ಬಂದಿರುವ ಕಾಲ್ಪನಿಕ ಪ್ರದೇಶ ಎಂಬುದು ಕೆಲವರ ಊಹೆ.

ಈ ಹೊಸ ಪುಸ್ತಕಕ್ಕೆ ಚಿತ್ರಗಳನ್ನು ಬರೆದಿರುವ ಲಾವಣ್ಯ ಕೋಲ್ಕತ್ತಾ ಮೂಲದ ಇಲ್ಲಸ್ಟ್ರೇಟರ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?