'ಮಾಲ್ಗುಡಿ ಶಾಲಾ ದಿನಗಳು' ಹೊಸ ಮುದ್ರಣದ ಒಂದು ಚಿತ್ರ 
ವಿಶೇಷ

'ಮಾಲ್ಗುಡಿ ದಿನಗಳು' ಹೊಸ ಚಿತ್ರಗಳೊಂದಿಗೆ ಮರುಮುದ್ರಣ

ಮೈಸೂರಿನ ಆರ್ ಕೆ ನಾರಾಯಣ್ ಅವರ...

ನವದೆಹಲಿ: ಮೈಸೂರಿನ ಆರ್ ಕೆ ನಾರಾಯಣ್ ಅವರ 'ಮಾಲ್ಗುಡಿ ದಿನಗಳು' ಕೇಳದವರುಂಟೆ? ಈ ಕಥೆಗಳನ್ನು ಹಿಂದಿಯಲ್ಲಿ ಧಾರಾವಾಹಿಯಾಗಿ ನಿರ್ದೇಶನ ಮಾಡಿ ದೇಶದ ಮನೆ ಮಾತನ್ನಾಗಿಸಿದ ಕೀರ್ತಿಯೂ ಕನ್ನಡಿಗನದ್ದೆ. ಅದು ಶಂಕರ್ ನಾಗ್ ಅವರ ಸೃಷ್ಟಿ.

ಮಕ್ಕಳಿಗೆ ಅತಿ ಪ್ರಿಯವಾದ ಈ "ಮಾಲ್ಗುಡಿ ಸ್ಕೂಲ್ ಡೇಸ್", ಆರ್ ಕೆ ನಾರಾಯಣ್ ಆವರ ಅತಿ ಜನಪ್ರಿಯ ಕೃತಿ "ಸ್ವಾಮಿ ಮತ್ತು ಅವನ ಸ್ನೇಹಿತರು" ಪುಸ್ತಕದ ಸಣ್ಣ ಅವತರಿಣಿಕೆಯಾಗಿದೆ. ಇದರ ಹೊಸ ಆವೃತ್ತಿ ಲಾವಣ್ಯ ನಾಯ್ಡು ಆವರ ಚಿತ್ರಗಳೊಂದಿಗೆ ಮಾರುಕಟ್ಟೆಗೆ ಬಂದಿದೆ.

"ಸ್ವಾಮಿ ಅಂಡ್ ಹಿಸ್ ಫ್ರೆಂಡ್ಸ್" ಪುಸ್ತಕವನ್ನು ಕನ್ನಡಕ್ಕೆ ಇಂದಿರಾಗಾಂಧಿ ಅವರ ಮಾಧ್ಯಮ ಕಾರ್ಯದರ್ಶಿಯಾಗಿದ್ದ ಎಚ್ ವೈ ಶಾರದಾಪ್ರಸಾದ್ ಅವರು ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ. ಇದರ ಮೂಲ ಪುಸ್ತಕಕ್ಕೆ ಆರ್ ಕೆ ನಾರಾಯಣ್ ಅವರ ತಮ್ಮ ಖ್ಯಾತ ವ್ಯಂಗ್ಯಚಿತ್ರಕಾರ ಆರ್ ಕೆ ಲಕ್ಷ್ಮಣ್ ಅವರ ಚಿತ್ರಗಳಿವೆ. ಈ ಕಥೆಗಳು, ಆರ್ ಕೆ ನಾರಾಯಣ್ ಕಲ್ಪನೆಯ 'ಮಾಲ್ಗುಡಿ' ಎಂಬ ಪ್ರದೇಶದಲ್ಲಿ ನಡೆಯುವ ಕಥೆಗಳು. ಇಂದಿಗೂ ಆ ಮಾಲ್ಗುಡಿ ನಿಜವಾದ ಪ್ರದೇಶವೇ ಎಂಬ ಊಹೆ ನಡೆಯುತ್ತಲೇ ಇದೆ. ಮಾಲ್ಗುಡಿ ಎಂಬುದು ಬೆಂಗಳೂರಿನ ಹಳೆಯ ಪ್ರದೇಶಗಳಾದ ಮಲ್ಲೇಶ್ವರಂ ಮತ್ತು ಬಸವನಗುಡಿ ಕೂಡಿ ಬಂದಿರುವ ಕಾಲ್ಪನಿಕ ಪ್ರದೇಶ ಎಂಬುದು ಕೆಲವರ ಊಹೆ.

ಈ ಹೊಸ ಪುಸ್ತಕಕ್ಕೆ ಚಿತ್ರಗಳನ್ನು ಬರೆದಿರುವ ಲಾವಣ್ಯ ಕೋಲ್ಕತ್ತಾ ಮೂಲದ ಇಲ್ಲಸ್ಟ್ರೇಟರ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT