ನ್ಯಾಯಾಧೀಶ ಡಿ.ಕೆ ಸಿಂಗ್ 
ವಿಶೇಷ

ಕೈತಪ್ಪಿದ್ದ ಹಿಂದುಳಿದ ವರ್ಗದ ವಿದ್ಯಾರ್ಥಿಯ ಐಐಟಿ ಶಿಕ್ಷಣ ಕನಸು: ಪ್ರವೇಶ ಶುಲ್ಕ ಪಾವತಿಸಿದ ಹೈಕೋರ್ಟ್ ನ್ಯಾಯಾಧೀಶ

ಅಕ್ಟೋಬರ್ 15ರ ಒಳಗೆ ಪ್ರವೇಶ ಶುಲ್ಕ 15,000 ರೂ.ಗಳನ್ನು ಪಾವತಿಸುವಂತೆ ಆಕೆಗೆ ತಿಳಿಸಲಾಗಿತ್ತು. ಆದರೆ ಅ ಗಡುವಿನಲ್ಲಿ ಹಣ ಹೊಂದಿಸಲು ಆಕೆಗೆ ಸಾಧ್ಯವಾಗಿರಲಿಲ್ಲ.

ಲಖನೌ: ದೇಶದ ಪ್ರತಿಷ್ಟಿತ ಐಐಟಿ ಕಾಲೇಜಿನಲ್ಲಿ ಓದುವ ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಯ ಕನಸು ಶುಲ್ಕ ಪಾವತಿಸಲಾಗದೆ ಭಗ್ನಗೊಳ್ಳುವುದರಲ್ಲಿತ್ತು. ಆದರೆ ಅಷ್ಟರಲ್ಲಿ ಮಧ್ಯಪ್ರವೇಶಿಸಿದ ಅಲಾಹಾಬಾದ್ ಹೈಕೋರ್ಟ್ ನ್ಯಾಯಾಧೀಶರೊಬ್ಬರು ಬಡ ವಿದ್ಯಾರ್ಥಿಯ ಕಾಲೇಜು ಶುಲ್ಕವನ್ನು ತಾವೇ ಭರಿಸುವ ಮೂಲಕ ಆತನ ಕನಸಿಗೆ ರೆಕ್ಕೆ ಮೂಡಿಸಿದ್ದಾರೆ.

ಈ ಹೃದಯಸ್ಪರ್ಶಿ ಘಟನೆ ಲಖನೌನಲ್ಲಿ ನಡೆದಿದೆ. ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯನ್ನು ಕ್ಲಿಯರ್ ಮಾಡಿದ್ದ ಸಂಸ್ಕೃತಿ ಎಂಬ ವಿದ್ಯಾರ್ಥಿನಿಗೆ ಐಐಟಿ ಯಲ್ಲಿ ಸೀಟು ಸಿಕ್ಕಿತ್ತು. ಅಕ್ಟೋಬರ್ 15ರ ಒಳಗೆ ಪ್ರವೇಶ ಶುಲ್ಕ 15,000 ರೂ.ಗಳನ್ನು ಪಾವತಿಸುವಂತೆ ಆಕೆಗೆ ತಿಳಿಸಲಾಗಿತ್ತು. ಆದರೆ ಅ ಗಡುವಿನಲ್ಲಿ ಹಣ ಹೊಂದಿಸಲು ಆಕೆಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಆಕೆ ಕಾಲಾವಕಾಶ ಕೋರಿ ಹೈಕೋರ್ಟ್ ಮೊರೆ ಹೋಗಿದ್ದಳು. ವಿಚಾರಣೆ ಬಳಿಕ ಆಕೆಯ ಶುಲ್ಕವನ್ನು ನ್ಯಾಯಾಧೀಶ ಡಿ.ಕೆ ಸಿಂಗ್ ಅವರೇ ಪಾವತಿಸಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆಕೆಯ ಪರಿಸ್ಥಿತಿಯನ್ನು ವಿಶೇಷ ಎಂದು ಪರಿಗಣಿಸಿ ವಿನಾಯಿತಿ ನೀಡುವಂತೆ ವಾರಾಣಸಿ ಕಾಲೇಜಿಗೆ ನಿರ್ದೇಶನ ನೀಡಿದೆ. ಒಂದು ವೇಳೆ ಆಕೆಯ ಸೀಟು ಈಗಾಗಲೇ ಭರ್ತಿಯಾಗಿದ್ದರೆ ಹೆಚ್ಚುವರಿ ಸೀಟನ್ನು ಸೃಷ್ಟಿಸಿ ಆಕೆಗೆ ಅಲಾಟ್ ಮಾಡುವಂತೆ ಸೂಚನೆ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT