ಸೋಲಾರ್ ಘಟಕ ಎದುರು ದೇವ್ ಕಿರಣ್ ಪುತ್ರ ಅಮಿತ್ 
ವಿಶೇಷ

ಬರಡು ಭೂಮಿಯಲ್ಲಿ ಸೋಲಾರ್ ಬೆಳೆ ತೆಗೆದ ರಾಜಸ್ಥಾನ ರೈತ: ತಿಂಗಳಿಗೆ 4 ಲಕ್ಷ ರೂ. ಆದಾಯ

ಕೆಲವರ್ಷಗಳ ಹಿಂದೆ ತಪ್ಪಿನಿಂದಾಗಿ ಅಗಾಧ ಮೊತ್ತದ ವಿದ್ಯುತ್ ಬಿಲ್ ಬಂದಿತ್ತು. ಆ ತಪ್ಪನ್ನು ಪರಿಹರಿಸುವಷ್ಟರಲ್ಲಿ ಯಾದವ್ ಕುಟುಂಬಕ್ಕೆ ಸಾಕೋಸಾಕಾಗಿತ್ತು.

ಜೈಪುರ: ರಾಜಸ್ಥಾನದ ಜೈಪುರ ಜಿಲ್ಲೆಯಲ್ಲಿನ ರೈತ ಕುಟುಂಬವೊಂದು 3.5 ಎಕರೆ ಜಮೀನಿನಲ್ಲಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ಪ್ರಾರಂಭಿಸಿ ತಿಂಗಳಿಗೆ 4 ಲಕ್ಷ ರೂ. ಗಳಿಸುತ್ತಿರುವ ಸುದ್ದಿ ಬೆಳಕಿಗೆ ಬಂದಿದೆ. 

ರೈತರಾದ ದೇವ್ ಕಿರಣ್ ಯಾದವ್ ಮತ್ತು ಅವರ ಪುತ್ರ ಡಾ. ಅಮಿತ್ ಯಾದವ್ ಕೊತ್ಪುಲಿ ಗ್ರಾಮದಲ್ಲಿನ ತಮ್ಮ ಜಮೀನಿನಲ್ಲಿ ಸೋಲಾರ್ ಪ್ಲಾಂಟ್ ಗಳನ್ನು ಸ್ಥಾಪಿಸಿದ್ದಾರೆ. ಪ್ರಧಾನ ಮಂತ್ಫ್ರಿ ಕಿಸಾನ್ ಉಜ್ರಾ ಸುರಕ್ಷಾ ಏವಂ ಉತ್ಥಾನ್ ಮಹಾಭಿಯಾನ್(KUSUM) ಯೋಜನೆ ಸಹಕಾರದೊಂದಿಗೆ ಈ ಸೋಲಾರ್ ಪ್ಲಾಂಟ್ ಸ್ಥಾಪಿಸಲಾಗಿದೆ.

ಯಾದವ್ ಅವರ ರೈತ ಕುಟುಂಬ ರಾಜಸ್ಥಾನ ನವೀಕರಿಸುವ ಶಕ್ತಿ ಪ್ರಾಧಿಕಾರದೊಂದಿಗೆ 25 ವರ್ಷಗಳ ಕಾಲ ವಿದ್ಯುತ್ ಪೂರೈಸುವ ಒಪ್ಪಂದ ಮಾಡಿಕೊಂಡಿದೆ. ಅದರಿಂದಾಗಿ ಪ್ರತಿ ತಿಂಗಳು ಈ ಕುಟುಂಬ 4 ಲಕ್ಷ ರೂ. ಸಂಪಾದಿಸುತ್ತಿದೆ. 

ಕೆಲವರ್ಷಗಳ ಹಿಂದೆ ತಪ್ಪಿನಿಂದಾಗಿ ಅಗಾಧ ಮೊತ್ತದ ವಿದ್ಯುತ್ ಬಿಲ್ ಬಂದಿತ್ತು. ಆ ತಪ್ಪನ್ನು ಪರಿಹರಿಸುವಷ್ಟರಲ್ಲಿ ಯಾದವ್ ಕುಟುಂಬಕ್ಕೆ ಸಾಕೋಸಾಕಾಗಿತ್ತು. ಆಗಲೇ ವಿದ್ಯುತ್ ಶಕ್ತಿಗೆ ಬದಲಾಗಿ ಇತೆರೆ ಆಯ್ಕೆಯಾದ ಸೋಲಾರ್ ಕಡೆ ಗಮನ ಹರಿದಿದ್ದು. 

ಅವರ ಬಳಿ ತುಂಬಾ ಜಮೀನಿದ್ದರೂ ಅಂತರ್ಜಲ ಕೊರತೆಯಿಂದಾಗಿ ಬರಡು ಭೂಮಿಯಾಗಿ ಬಿಟ್ಟಿದ್ದವು. ಹೀಗಾಗಿ ಸೋಲಾರ್ ಘಟಕ ಸ್ಥಾಪಿಸಲು ತಮ್ಮ ಬರಡು ಭೂಮಿಯನ್ನೇ ಬಳಸಿಕೊಂಡಿದ್ದಾರೆ ದೇವ್ ಕಿರಣ್ ಯಾದವ್. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT