ಬೋರ್ಡ್ ಗೇಮ್ ಜೊತೆ ಬಾಲಕ ಇಶಾನ್ 
ವಿಶೇಷ

ಪದ್ಮನಾಭಸ್ವಾಮಿ ದೇಗುಲ ನಿಧಿ ಕಥಾನಕ ಆಧರಿಸಿ ಬೋರ್ಡ್ ಗೇಮ್ ಸೃಷ್ಟಿಸಿದ ಬೆಂಗಳೂರು ಬಾಲಕ

ಪದ್ಮನಾಭ ದೇಗುಲದಡಿ ದೊಡ್ಡ ಪ್ರಮಾಣದಲ್ಲಿ ಚಿನ್ನದ ನಿಧಿ ಇದೆ ಎನ್ನುವ ಬಗ್ಗೆ ಈ ಹಿಂದೆ ಸುದ್ದಿಯಾಗಿದ್ದು ಅನೇಕರಿಗೆ ನೆನಪಿರಬಹುದು. ಆದನ್ನೇ ಪ್ರೇರಣೆಯಾಗಿ ಪಡೆದು ನಿಧಿ ಹುಡುಕುವ ಬೋರ್ಡ್ ಗೇಮನ್ನು ಇಶಾನ್ ರೂಪಿಸಿದ್ದಾನೆ.

ಬೆಂಗಳೂರು: ಮಕ್ಕಳು ಬೋರ್ ಕಳೆಯಲು ಬೋರ್ಡ್ ಗೇಮ್ ಆಡುವುದನ್ನು ನೋಡಿದ್ದೀರಿ. ಬೆಂಗಳೂರಿನ ಬಾಲಕನೊಬ್ಬ ತನ್ನದೇ ಪರಿಕಲ್ಪನೆಯಲ್ಲಿ Treasures of Thiruvananthapuram ಎನ್ನುವ ಬೋರ್ಡ್ ಗೇಮೊಂದನ್ನು ಅಭಿವೃದ್ಧಿಪಡಿಸಿದ್ದಾನೆ. 


11 ವರ್ಷದ ಬಾಲಕ ಇಶಾನ್ ಲಾಕ್ ಡೌನ್ ಸಮಯದಲ್ಲಿ ಕುಟುಂಬ ಸದಸ್ಯರೊಡನೆ ಬೋರ್ಡ್ ಗೇಮ್ ಆಡುತ್ತಿದ್ದ. ಇತಿಹಾಸ ಹಿನ್ನೆಲೆಯುಳ್ಲ ಬೋರ್ಡ್ ಗೇಮ್ ಎಂದರೆ ಅವನಿಗೆ ತುಂಬಾ ಇಷ್ಟ. ಹೀಗಾಗಿ ಚಂದ್ರಗುಪ್ತ ಮೌರ್ಯ ಮತ್ತಿತರ ಐತಿಹಾಸಿಕ ಪುರುಷರ ಬೋರ್ಡ್ ಗೇಮ್ ಆಡುತ್ತಿದ್ದ. ಈ ಸಮಯದಲ್ಲಿಯೇ ಇಶಾನ್ ಗೆ ತಾನೂ ಏಕೆ ಇತಿಹಾಸವನ್ನು ಆಧರಿಸಿ ಒಂದು ಹೊಸ ಬೋರ್ಡ್ ಸೃಷ್ಟಿಸಬಾರದು ಎನ್ನುವ ಯೋಚನೆ ಮೊಳೆಯಿತು. 

ಅದಕ್ಕಾಗಿ ಆತ ಆರಿಸಿಕೊಂಡಿದ್ದು ತಿರುವನಂತಪುರದ ಪದ್ಮನಾಭ ದೇಗುಲವನ್ನು. ದೇಗುಲದಡಿ ದೊಡ್ಡ ಪ್ರಮಾಣದಲ್ಲಿ ಚಿನ್ನದ ನಿಧಿ ಇದೆ ಎನ್ನುವ ಬಗ್ಗೆ ಈ ಹಿಂದೆ ಸುದ್ದಿಯಾಗಿದ್ದು ಅನೇಕರಿಗೆ ನೆನಪಿರಬಹುದು.  ಆದನ್ನೇ ಪ್ರೇರಣೆಯಾಗಿ ಪಡೆದು ನಿಧಿ ಹುಡುಕುವ ಬೋರ್ಡ್ ಗೇಮನ್ನು ಇಶಾನ್ ರೂಪಿಸಿದ್ದಾನೆ. ಅದರ ಹೆಸರು 'ಟ್ರೆಶರ್ಸ್ ಆಫ್ ತಿರುವನಂತಪುರಂ'

ಆಟವನ್ನು ಅಭಿವೃದ್ಧಿಪಡಿಸುವ ಮೊದಲು ಆತ ಸಂಶೋಧನೆ ನಡೆಸಿದ್ದಾನೆ ಎನ್ನುವುದು ವಿಶೇಷ. ಇಶಾನ್ ಬೆಂಗಳೂರಿನ ಎಕ್ಯಾ ಶಾಲೆಯ ವಿದ್ಯಾರ್ಥಿ. ಆನ್ ಲೈನ್ ಆಟಗಳನ್ನು ಆಡುವುದಕ್ಕೆ ಬದಲಾಗಿ ಮಕ್ಕಳು ಬೋರ್ಡ್ ಗೇಮುಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಲಬೇಕು ಎನ್ನುವುದು ಇಶಾನ್ ಅಭಿಪ್ರಾಯ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT