ಮುಹಮ್ಮುದ್ ಇನ್ಸಾಫ್ ತನ್ನ ಡ್ರೋನ್ ನೊಂದಿಗೆ 
ವಿಶೇಷ

ಕೇರಳ: ಪಟ್ಟು ಬಿಡದ ಸಾಹಸಿ; ರೀಫಿಲ್, ಸಿಡಿ, ಕ್ಯಾಮೆರಾ ಬಳಸಿ ಡ್ರೋನ್ ತಯಾರಿದ ಬಾಲಕ!

ಮೂರು ಬಾರಿ ವಿಫಲವಾದರೂ ಪಟ್ಟು ಬಿಡದ 14 ವರ್ಷದ ಮುಹಮ್ಮದ್ ಇನ್ಸಾಫ್ ರೀಫಿಲ್, ಸಿಡಿ, ಕ್ಯಾಮೆರಾ ಬಳಸಿ ಡ್ರೋನ್ ತಯಾರಿಸಿದ್ದಾರೆ.

ಆಲಪ್ಪುಳ: ಮೂರು ಬಾರಿ ವಿಫಲವಾದರೂ ಪಟ್ಟು ಬಿಡದ 14 ವರ್ಷದ ಮುಹಮ್ಮದ್ ಇನ್ಸಾಫ್ ರೀಫಿಲ್, ಸಿಡಿ, ಕ್ಯಾಮೆರಾ ಬಳಸಿ ಡ್ರೋನ್ ತಯಾರಿಸಿದ್ದಾರೆ.

ತನ್ನ ಶಾಲೆಯಲ್ಲಿ ಡ್ರೋನ್ ಆಗಸ್ಟ್ 15ರಂದು ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ತನ್ನ ಪ್ರಯತ್ನ ಫಲಿಸಿದ ಖುಷಿ ಇನ್ಸಾಫ್ ನದ್ದು. 'ನಾಲ್ಕು ವರ್ಷಗಳ ಹಿಂದೆ ವ್ಯಾಪಾರದ ಉದ್ದೇಶಕ್ಕಾಗಿ ನಾನು ಚೀನಾಗೆ ತೆರಳಿದ್ದೆ ಅಲ್ಲಿಂದ ಬರುವಾಗ ನಾನು ಅವನಿಗೆ ಸಣ್ಣದೊಂದು ಡ್ರೋನ್ ತಂದುಕೊಟ್ಟೆ. ಇದನ್ನು ನೋಡಿದ ಅವನಿಗೆ ತಾನೇ ಒಂದು ಡ್ರೋನ್ ತಯಾರಿಸುವ ಉತ್ಸಾಹವು ಬೆಳೆಯಿತು ಎಂದು ನೀರ್ಕುನ್ನಂನ ಇನಾಯತ್‌ನ ತಂದೆ ಎಂ ಎ ಅನ್ಸಿಲ್ ಹೇಳಿದರು.

'ನಾಲ್ಕು ಅಥವಾ ಐದು ಡ್ರೋನ್ ಗಳನ್ನು ತಯಾರಿಸಿದ್ದು ಅವು ಹಾನಿಗೊಳಗಾದವು. ಆದರೆ ಅವನ ಉತ್ಸಾಹ ಕಡಿಮೆಯಾಗಲಿಲ್ಲ. ಮತ್ತೊಂದನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿದ. ಆದರೆ ಅದರ ತಯಾರಿಕೆಯ ಸಮಯದಲ್ಲಿ ಅದು ಮೂರು ಬಾರಿ ಹಾನಿಗೊಳಗಾಯಿತು. ಆದರೆ ಅದನ್ನು ಬಿಡುವ ಮನಸ್ಥಿತಿ ಅವನಲ್ಲಿರಲಿಲ್ಲ. ಅಂತಿಮವಾಗಿ, 30 ಮೀಟರ್ ಎತ್ತರದಲ್ಲಿ 600 ಮೀಟರ್ ಹಾರಬಲ್ಲ ಡ್ರೋನ್ ಅನ್ನು ಅಭಿವೃದ್ಧಿಪಡಿಸಿದನು. ಇನ್ಸಾಫ್ ನನ್ನು ಶಿಕ್ಷಕರು ಶಾಲೆಯಲ್ಲಿ ಸ್ವಾತಂತ್ರ್ಯ ದಿನದಂದು ತ್ರಿವರ್ಣ ಧ್ವಜವನ್ನು ಹಾರಿಸುವಂತೆ ಒತ್ತಾಯಿಸಿದರು. ಅದನ್ನು ಆತ ಹೆಮ್ಮೆಯಿಂದ ಮಾಡಿದನು ಎಂದು ಅನ್ಸಿಲ್ ಹೇಳಿದರು.

ಇದನ್ನು ತಯಾರಿಸಲು ಸುಮಾರು 10,000 ರೂಪಾಯಿ ವ್ಯಯಿಸಿದೆ. ನಾನು ಯೂಟ್ಯೂಬ್ ನೋಡುವ ಮೂಲಕ ಅದರ ಜೋಡಣೆಯನ್ನು ಅಧ್ಯಯನ ಮಾಡಿದೆ. ಪ್ಲಾಸ್ಟಿಕ್ ಬಾಟಲಿಗಳ ಕ್ಯಾಪ್ಗಳು, ಹಳೆಯ ಸಿಡಿ, ಪೆನ್ ರೀಫಿಲ್ ಮತ್ತು ಅಲ್ಯೂಮಿನಿಯಂ ರಾಡ್ ನಿಂದ ಅದರ ಕೆಲವು ಘಟಕಗಳನ್ನು ರಚಿಸಿದೆ. ವಿಮಾನ ನಿಯಂತ್ರಣ ಸಾಧನಗಳು, ಟ್ರಾನ್ಸ್‌ಮಿಟರ್‌ಗಳು, OTG ರಿಸೀವರ್‌ಗಳು ಮತ್ತು ಇತರ ಕೆಲವು ಸಾಧನಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಿದೆ. ತಂದೆ ನನಗೆ 6,500 ರೂ. ಮತ್ತು ಸಹೋದರಿ ನೌಜಾ ಫಾತಿಮಾ ಆಕೆಯ ಒಡವೆ ಮಾರಿ ಉಳಿದ ಮೊತ್ತವನ್ನು ನೀಡಿದರು ಎಂದು ಇನ್ಸಾಫ್ ಹೇಳಿದರು.

ಟಿಲ್ಟಿಂಗ್ ಕ್ಯಾಮೆರಾವನ್ನು ಸಹ ಆನ್‌ಲೈನ್‌ನಲ್ಲಿ ಖರೀದಿಸಿದೆ. ಡ್ರೋನ್ ಅನ್ನು ಜಾಯ್‌ಸ್ಟಿಕ್‌ನಿಂದ ನಿಯಂತ್ರಿಸಲಾಗುತ್ತದೆ. ಡ್ರೋನ್ ಗೆ ಅಳವಡಿಸಿದ್ದ ಕ್ಯಾಮೆರಾದೊಂದಿಗೆ ಸಂಪರ್ಕಿಸಲಾದ ಮೊಬೈಲ್ ಫೋನ್‌ನಲ್ಲಿ ಉಳಿಸಲಾಗುತ್ತದೆ ಎಂದು ಅವರು ಹೇಳಿದರು. ಇನ್ಸಾಫ್ ಅವರ ತಾಯಿ ಸುಲ್ಫಿಯಾ, ಇನ್ಸಾಫ್ ಗೆ ಚಿಕ್ಕಂದಿನಿಂದಲೂ ಡಿಜಿಟಲ್ ಸಾಧನಗಳು ಮತ್ತು ಎಲೆಕ್ಟ್ರಾನಿಕ್ಸ್ ಬಗ್ಗೆ ತುಂಬಾ ಒಲವಿತ್ತು ಎಂದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT