ಅನುರಾಗ್ ಠಾಕೂರ್ (ಸಂಗ್ರಹ ಚಿತ್ರ) 
ಕ್ರೀಡೆ

ಎಲ್‍ಬಿ ಡಿಆರ್‍ಎಸ್‍ಗೆ ಭಾರತ ಒಪ್ಪದು: ಬಿಸಿಸಿಐ

ಟೆಸ್ಟ್ ಕ್ರಿಕೆಟ್‍ನಲ್ಲಿ ಬಳಸಲಾಗುತ್ತಿರುವ ಅಂಪೈರ್ ತೀರ್ಪು ಪರಿಶೀಲನಾ ವ್ಯವಸ್ಥೆ (ಡಿಆರ್‍ಎಸ್)ನಲ್ಲಿ ಕೆಲವು ಬದಲಾವಣೆ ತರುವವರೆಗೂ ಭಾರತ ಈ ವ್ಯವಸ್ಥೆಯನ್ನು ಒಪ್ಪುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ತಿಳಿಸಿದ್ದಾರೆ...

ಬೆಂಗಳೂರು: ಟೆಸ್ಟ್ ಕ್ರಿಕೆಟ್‍ನಲ್ಲಿ ಬಳಸಲಾಗುತ್ತಿರುವ ಅಂಪೈರ್ ತೀರ್ಪು ಪರಿಶೀಲನಾ ವ್ಯವಸ್ಥೆ (ಡಿಆರ್‍ಎಸ್)ನಲ್ಲಿ ಕೆಲವು ಬದಲಾವಣೆ ತರುವವರೆಗೂ ಭಾರತ ಈ ವ್ಯವಸ್ಥೆಯನ್ನು ಒಪ್ಪುವುದಿಲ್ಲ  ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ತಿಳಿಸಿದ್ದಾರೆ.

ಈ ವ್ಯವಸ್ಥೆಯಲ್ಲಿ ಐಸಿಸಿ ಬದಲಾವಣೆ ತರುವುದೇ ಎಂಬುದನ್ನು ನೋಡುತ್ತೇವೆ. ಡಿಆರ್‍ಎಸ್‍ನಲ್ಲಿ ನೋಬಾಲ್, ಬ್ಯಾಟ್ ಪ್ಯಾಡ್ ಕ್ಯಾಚ್, ಮತ್ತು ಇತರೆ ರಿವ್ಯೂಗಳಲ್ಲಿ ಇನ್ನಷ್ಟು ಸುಧಾರಣೆ  ತರಬಹುದಾಗಿದೆ. ಆದರೆ ಎಲ್‍ಬಿಡಬ್ಲ್ಯೂನಲ್ಲಿ ಡಿಆರ್‍ಎಸ್ ಅನ್ನು ಭಾರತ ಒಪ್ಪುವುದಿಲ್ಲ. ಈ ಕುರಿತು ನಾವು ಸಾಕಷ್ಟು ಅಸಮಾಧಾನ ಹೊಂದಿದ್ದೇವೆ. ಐಸಿಸಿ ನಿಖರ ವ್ಯವಸ್ಥೆ ತರುವವರೆಗೂ ಎಲ್ ಬಿಡಬ್ಲ್ಯೂಗೆ ಡಿಆರ್‍ಎಸ್ ಅನ್ನು ಒಪ್ಪುವುದಿಲ್ಲ ಎಂದು ಅನುರಾಗ್ ಠಾಕೂರ್ ತಿಳಿಸಿದ್ದಾರೆ.

ಎನ್‍ಸಿಎ ಸ್ಥಳಾಂತರ ಅನಿವಾರ್ಯ
ಇನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯನ್ನು ಸ್ಥಳಾಂತರಿಸುವ ಬಗ್ಗೆ ಮಾತನಾಡಿರುವ ಠಾಕೂರ್, ಬೇರೆ ರಾಜ್ಯ ಸರ್ಕಾರಗಳು ಈ ಸಂಸ್ಥೆ ನಿರ್ಮಿಸಲು ಉಚಿತವಾಗಿ ಭೂಮಿಯನ್ನು ನೀಡಲು   ಮುಂದಾಗಿದೆ. ಆದರೆ, ಉಪೇಕ್ಷೆಯಿಂದಾಗಿ ಇಲ್ಲಿ ರು.50 ಕೋಟಿ ನೀಡಿದ್ದರೂ ಅಗತ್ಯ ಭೂಮಿ ಸಿಗುವುದು ಅನುಮಾನ. ಹಿಮಾಚಲ ಪ್ರದೇಶ ಹಾಗೂ ಮಹಾರಾಷ್ಟ್ರ ಸರ್ಕಾರಗಳು ಮುಂದೆ ಬಂದಿದ್ದು, ಕರ್ನಾಟಕ ಸರ್ಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT