ಕ್ರೀಡೆ

ಶಾಸ್ತ್ರಿ ನೇಮಕ ನಮ್ಮ ವಿಶ್ವಾಸ ಹೆಚ್ಚಿಸಿದೆ: ವಿರಾಟ್ ಕೊಹ್ಲಿ

Lingaraj Badiger

ನವದೆಹಲಿ: ಬಾಂಗ್ಲಾದೇಶ ವಿರುದ್ಧದ ಟೂರ್ನಿಗೆ ಟೀಂ ಇಂಡಿಯಾ ಮಾಜಿ ನಾಯಕ ರವಿ ಶಾಸ್ತ್ರಿ ಅವರನ್ನು ಮತ್ತೆ ತಂಡದ ನಿರ್ದೇಶಕರನ್ನಾಗಿ ನೇಮಕ ಮಾಡಿರುವ ಬಿಸಿಸಿಐ ನಿರ್ಧಾರವನ್ನು ವಿರಾಟ ಕೊಹ್ಲಿ ಸ್ವಾಗತಿಸಿದ್ದು, ಶಾಸ್ತ್ರಿ ನೇಮಕ ನಮ್ಮ ವಿಶ್ವಾಸ ಹೆಚ್ಚಿಸಿದೆ ಎಂದಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸ ಹಾಗೂ ವಿಶ್ವಕಪ್ ಪಂದ್ಯಾವಳಿ ವೇಳೆಯೂ ರವಿ ಶಾಸ್ತ್ರಿ ಅವರೇ ಟೀಂ ಇಂಡಿಯಾ ನಿರ್ದೇಶಕರಾಗಿದ್ದರು. ಈಗ ಮತ್ತೆ ಜೂನ್ 10ರಿಂದ ಆರಂಭವಾಗುವ ಬಾಂಗ್ಲಾ ಪ್ರವಾಸಕ್ಕೆ ತೆರಳುತ್ತಿದ್ದಾರೆ.

'ಅವರು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವಂತ ವ್ಯಕ್ತಿ ಅಲ್ಲ ಮತ್ತು ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವಂತ ವ್ಯಕ್ತಿ' ಎಂದು ಕೊಹ್ಲಿ ಇಎಸ್‌ಪಿಎನ್ ಕ್ರಿಕ್‌ಇನ್ಫೋ ತಿಳಿಸಿದ್ದಾರೆ.

'ಅವರ ವಿಚಾರಗಳ ಬಗ್ಗೆ ಬೇರೆ ರೀತಿ ವಿಚಾರ ಮಾಡುವ ಅಗತ್ಯ ಇಲ್ಲ. ಅಂತಹ ಅದ್ಭುತ ವ್ಯಕ್ತಿ ಮತ್ತೆ ತಂಡಕ್ಕೆ ಸಿಕ್ಕಿದ್ದಾರೆ' ಎಂದು ಕೊಹ್ಲಿ ಹೇಳಿದ್ದಾರೆ.

ಟೀಂ ಇಂಡಿಯಾ ಬಾಂಗ್ಲಾದೇಶ ವಿರುದ್ಧ ಒಂದು ಟೆಸ್ಟ್ ಪಂದ್ಯ ಹಾಗೂ ಮೂರು ಏಕದಿನ ಪಂದ್ಯವನ್ನಾಡಳಿದೆ.

SCROLL FOR NEXT