ವಿರಾಟ್ ಕೊಹ್ಲಿ 
ಕ್ರೀಡೆ

ಬಿಸಿಸಿಐನ ನೂತನ ಸಲಹಾ ಸಮಿತಿಯಲ್ಲಿ ದ್ರಾವಿಡ್ ಇರಬೇಕಿತ್ತು: ಕೊಹ್ಲಿ

ಬಿಸಿಸಿಐ ನ ನೂತನ ಸಲಹಾ ಸಮಿತಿಯಲ್ಲಿ ಮಾಜಿ ನಾಯಕ ರಾಹುಲ್ ದ್ರಾವಿಡ್ ಇದ್ದಿದ್ದರೆ ಉತ್ತಮವಾಗಿರುತ್ತಿತ್ತು

ನವದೆಹಲಿ: ಬಿಸಿಸಿಐ ನ  ನೂತನ ಸಲಹಾ ಸಮಿತಿಯಲ್ಲಿ ಮಾಜಿ  ನಾಯಕ ರಾಹುಲ್ ದ್ರಾವಿಡ್ ಇದ್ದಿದ್ದರೆ ಉತ್ತಮವಾಗಿರುತ್ತಿತ್ತು ಎಂದು  ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಭಾರತ  ಕ್ರಿಕೆಟ್  ನ ಆಧಾರ  ಸ್ಥಂಭಗಳಾಗಿದ್ದ  ನಾಲ್ವರು ಪ್ರಮುಖ ಆಟಗಾರರು ಸಲಹಾ ಸಮಿತಿಯಲ್ಲಿದ್ದಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ಅವರು ಬೇರೆ ಕಾರ್ಯದಲ್ಲಿ ತೊಡಗಿದ್ದರಿಂದ ಅದು ಸಾದ್ಯವಾಗಲಿಲ್ಲ ಎಂದು ಕೊಹ್ಲಿ ತಿಳಿಸಿದ್ದಾರೆ. ಕಳೆದವಾರ ರಚನೆಯಾದ  ಬಿಸಿಸಿಐ ಸಲಹಾ ಸಮಿತಿಯಲ್ಲಿ ಸಚಿನ್ ಟೆಂಡುಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಸದಸ್ಯರಾಗಿ ಆಯ್ಕೆಯಾಗಿದ್ದರು.

ಕ್ರಿಕೆಟ್ ಆಡಲು ಆರಂಭಿಸಿದ ನಂತರ ಈ  ದಿಗ್ಗಜ ಆಟಗಾರರನ್ನು ನೋಡಿ  ಕಲಿಯುವುದು ಸಾಕಷ್ಟಿದೆ. ಅವರು ಈ ಜವಾಬ್ದಾರಿಯನ್ನು  ವಹಿಸಿಕೊಂಡಿರುವುದರಿಂದ ನಮಗೆ ಸಾಕಷ್ಟು ಅಂಶಗಳಲ್ಲಿ  ನೆರವಾಗಲಿದೆ ಎಂದು  ವಿರಾಟ್ ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಟೀಂ ಇಂಡಿಯಾದ ನಿರ್ದೇಶಕರಾಗಿ ರವಿಶಾಸ್ತ್ರಿ ಅವರನ್ನು ಮುಂದುವರೆಸುವ ಬಿಸಿಸಿನ ನಿರ್ಧಾರದ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಕೊಹ್ಲಿ, ರವಿಶಾಸ್ತ್ರಿ ಅವರು ತಂಡದ ಜೊತೆಗಿರುವಷ್ಟೂ ಆಟಗಾರರಿಗೆ ಹೆಚ್ಚು ನೆರವಾಗಲಿದೆ.  ಅವರು ಕ್ರಿಕೆಟ್ ನ್ನು ತಮ್ಮದೇ ಶೈಲಿಯಲ್ಲಿ ಆಡಿದ್ದಾರೆ ಪ್ರತಿ ಆಟಗಾರರಲ್ಲಿ ಆತ್ಮ  ವಿಶ್ವಾಸವನ್ನು  ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಕೊಹ್ಲಿ  ತಿಳಿಸಿದ್ದಾರೆ.

ಇನ್ನು ಟೆಸ್ಟ್ ತಂಡದ ನಾಯಕನಾಗಿ ಹೊಂದಿರುವ ಗುರಿ ಬಗ್ಗೆ ಮಾತನಾಡಿದ ಕೊಹ್ಲಿ, ನಿರೀಕ್ಷೆಗೆ ತಕ್ಕಂತೆ ಆಟ ಆಡುವುದು ಪ್ರಮುಖ ಗುರಿ. ತಂಡದಲ್ಲಿನ ಪ್ರತಿಯೊಬ್ಬ ಆಟಗಾರನಿಗೆ  ಮುಕ್ತವಾದ  ವಾತಾವರಣ ಕಲ್ಪಿಸುವ ಅಗತ್ಯವಿದೆ.  ಪ್ರತಿಯೊಬ್ಬರೂ ತಂಡಕ್ಕೆ ಉತ್ತಮ ಕಾಣಿಕೆ ನೀಡುವ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.       

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಓಪನ್ನಾಗಿ ಹೇಳ್ತಿದ್ದೀನಿ, ಯಾರೂ ಬಿ ಖಾತಾದಿಂದ ಎ ಖಾತಾಗೆ ದುಡ್ಡು ಕಟ್ಟಬೇಡಿ, ಇದು ಸರ್ಕಾರದ ಬಹುದೊಡ್ಡ ಲೂಟಿ': ಹೆಚ್ ಡಿ ಕುಮಾರಸ್ವಾಮಿ

ಧರ್ಮಸ್ಥಳ ಬುರುಡೆ ಕೇಸ್​: ನಿರ್ಣಾಯಕ ಘಟ್ಟದಲ್ಲಿ SIT ತನಿಖೆ, ತಿಮರೋಡಿ ಸೇರಿ ನಾಲ್ವರಿಗೆ ನೋಟಿಸ್! ಕಾರಣವೇನು?

Maharashtra: ಮಹಿಳಾ ಡಾಕ್ಟರ್ ಆತ್ಮಹತ್ಯೆ ಪ್ರಕರಣ, ಓರ್ವನ ಬಂಧನ; ಪ್ರಮುಖ ಆರೋಪಿಗಾಗಿ ಪೊಲೀಸರ ಶೋಧ!

ಮುಂದಿನ ವಾರ '10-15 ರಾಜ್ಯಗಳೊಂದಿಗೆ' ಅಖಿಲ ಭಾರತ SIR ಆರಂಭ ಸಾಧ್ಯತೆ

'ನೀವು ನಡೆದು ಬಂದ ದಾರಿಯನ್ನು ಹಿಂತಿರುಗಿ ನೋಡಿ' ಶಿಷ್ಯರ ಬೀದಿ ಜಗಳ, ಕಿತ್ತಾಟಕ್ಕೆ ಬ್ರೇಕ್ ಹಾಕಲು ಎಂಟ್ರಿಯಾದ ಗುರು!

SCROLL FOR NEXT