ಮಹೇಂದ್ರ ಸಿಂಗ್ ಧೋನಿ 
ಕ್ರೀಡೆ

ಧೋನಿ ಹೇಳಿದ ಸ್ಟಂಪ್ ಸ್ಟೋರಿ

ಧೋನಿ ಹೀಗೆ ಸ್ಟಂಪ್ ತೆಗೆದುಕೊಂಡು ಹೋಗುತ್ತಿರುವುದಕ್ಕೂ ಒಂದು ಕಾರಣವಿದೆ. ಅದೇನು ಎಂಬುದನ್ನು ಧೋನಿಯೇ ಹೇಳಿದ್ದಾರೆ...

ಯಾವುದೇ ಪಂದ್ಯವಿರಲಿ ಅದರಲ್ಲಿ ಟೀಂ ಇಂಡಿಯಾ ಗೆಲವು ಸಾಧಿಸಿದರೆ, ಮ್ಯಾಚ್ ಮುಗಿದ ನಂತರ ನಾಯಕ ಮಹೇಂದ್ರ ಸಿಂಗ್ ಧೋನಿ ಸ್ಟಂಪ್ ಕಿತ್ತು ತೆಗೆದುಕೊಂಡು ಹೋಗುವುದನ್ನು ನಾವೆಲ್ಲ ನೋಡಿದ್ದೇವೆ. ಧೋನಿ ಹೀಗೆ ಸ್ಟಂಪ್ ತೆಗೆದುಕೊಂಡು ಹೋಗುತ್ತಿರುವುದಕ್ಕೂ ಒಂದು ಕಾರಣವಿದೆ.

ಅದೇನು ಎಂಬುದನ್ನು ಧೋನಿಯೇ ಹೇಳಿದ್ದಾರೆ.  ನಾನು ನಿವೃತ್ತನಾದ ನಂತರ ಟೀಂ ಇಂಡಿಯಾದ ಎಲ್ಲ ಆಟಗಳ ವೀಡಿಯೋ ನೋಡುವೆ. ಆಗ ನನ್ನ ಬಳಿಯಿರುವ ಸ್ಟಂಪ್‌ಗಳಲ್ಲಿರು ಪ್ರಾಯೋಜಕರ ಹೆಸರನ್ನು ಹುಡುಕಿ, ಇದು ಯಾವ ಪಂದ್ಯಗಳಲ್ಲಿ ಬಳಸಲಾಗಿದೆ ಎಂಬುದನ್ನು ನೆನಪಿಸಿಕೊಳ್ಳಲು ಯತ್ನಿಸುವೆ. ನಿವೃತ್ತಿಯ ನಂತರ ಇದೊಂದು ಟೈಮ್ ಪಾಸ್‌ಗಿರುವ ವಿಷಯ ಎಂಬುದಾಗಿ ನಾನಿದನ್ನು  ನೋಡುತ್ತಿದ್ದೇನೆ.

ಬಿಸಿಸಿಐಯ ವೆಬ್‌ಸೈಟ್‌ಗಾಗಿ ನೀಡಿದ ಸಂದರ್ಶನವೊಂದರಲ್ಲಿ ಧೋನಿ ಈ ವಿಷಯವನ್ನು ಹೇಳಿದ್ದಾರೆ.

ತಿಂಗಳುಗಳ ಹಿಂದೆಯಷ್ಟೇ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯಗಳಲ್ಲಿ ದುಬಾರಿ ಎಲ್‌ಸಿಡಿ ಸ್ಟಂಪ್‌ಗಳನ್ನು ಬಳಸಲಾಗಿತ್ತು. ಮಾತ್ರವಲ್ಲದೆ ಸ್ಟಂಪ್‌ಗಳನ್ನು ಕೀಳದಂತೆ ಆಟಗಾರರಿಗೆ ತಾಕೀತು ನೀಡಲಾಗಿತ್ತು. ವಿಶ್ವಕಪ್ ಪಂದ್ಯಗಳಲ್ಲಿ ಟೀಂ ಇಂಡಿಯಾ ಗೆದ್ದಾಗ ಧೋನಿ ಸ್ಟಂಪ್ ಕಿತ್ತು ತೆಗೆದುಕೊಳ್ಳಲು ಹೋದಾಗ ಅಂಪೈರ್ ತಡೆದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT