ಮಂಜಿತ್ ಚಿಲ್ಲರ್ 
ಕ್ರೀಡೆ

ಜನವರಿಯಲ್ಲಿ ಪ್ರೋ ಕಬಡ್ಡಿ ಲೀಗ್: ಬುಲ್ಸ್ ತೊರೆದ ಚಿಲ್ಲರ್

ದೇಶದಲ್ಲಿ ಕಬಡ್ಡಿ ಕ್ರೀಡೆಯ ಹೊಸ ಅಲೆಯನ್ನೇ ಸೃಷ್ಟಿಸಿದ ಪ್ರೋ ಕಬಡ್ಡಿ ಲೀಗ್ ಟೂರ್ನಿಯ 3ನೇ ಆವೃತ್ತಿ ಯನ್ನು ಮುಂದಿನ ವರ್ಷ ಜನವರಿಯಲ್ಲೇ ನಡೆಸಲು...

ಮುಂಬೈ: ದೇಶದಲ್ಲಿ ಕಬಡ್ಡಿ ಕ್ರೀಡೆಯ ಹೊಸ ಅಲೆಯನ್ನೇ ಸೃಷ್ಟಿಸಿದ ಪ್ರೋ ಕಬಡ್ಡಿ ಲೀಗ್ ಟೂರ್ನಿಯ 3ನೇ ಆವೃತ್ತಿ ಯನ್ನು ಮುಂದಿನ ವರ್ಷ ಜನವರಿಯಲ್ಲೇ ನಡೆಸಲು ನಿರ್ಧರಿಸಲಾಗಿದೆ ಎಂದು ಟೂರ್ನಿಯ ಆಯೋಜಕರು ತಿಳಿಸಿದ್ದಾರೆ. 
ಮುಂದಿನ ಆವೃತ್ತಿಯಲ್ಲಿ ಎಂಟು ತಂಡಗಳು ತಮ್ಮ ಆಟಗಾರರನ್ನು ಬದಲಾಯಿಸಿಕೊಂಡಿದ್ದಾರೆ. ಬೆಂಗಳೂರು ಬುಲ್ಸ್ ನಾಯಕ ಹಾಗೂ ಕಳೆದ ಎರಡು ಆವೃತ್ತಿಯಲ್ಲಿ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದಿದ್ದ ಮಂಜೀತ್ ಚಿಲ್ಲರ್ ಸೇರಿದಂತೆ ಇತರೆ ಪ್ರಮುಖ ಆಟಗಾರರು, ಈ ಬಾರಿ ಬೇರೆ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 
ಅಜಯ್ ಠಾಕೂರ್, ರಾಕೇಶ್ ಕುಮಾರ್, ದೀಪಕ್ ಹುಡ್ಡಾ, ಜಸ್ಮೀರ್ ಸಿಂಗ್, ಸುರ್ಜಿತ್ ನರ್ವಾಲ್, ಧರ್ಮರಾಜ್ ಚೆರಲನಾಥನ್, ವಾಸಿಂ ಸಜ್ಜದ್, ರಾಜಗುರು ಸುಬ್ರಮಣಿಯನ್ ಈ ಬಾರಿ ಬೇರೆ ತಂಡದಲ್ಲಿ ಆಡಲಿದ್ದಾರೆ ಎಂದು ಪ್ರೋ ಕಬಡ್ಡಿ ಲೀಗ್ ಆಯೋಜಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದೇ ವೇಳೆ ಯು ಮುಂಬಾ ತಂಡದ ನಾಯಕ ಅನೂಪ್ ಕುಮಾರ್, ದಬಾಂಗ್ ಡೆಲ್ಲಿಯ ಕಾಶಿಲಿಂಗ್ ಅಡಕೆ ಸೇರಿದಂತೆ ರವೀಂದರ್ ಪಹಲ್, ರಾಹುಲ್ ಚೌಧರಿ, ಸುಖೇಶ್ ಹೆಗಡೆ, ಜಾನ್ ಕುನ್ ಲೀ, ಸಂದೀಪ್ ನರ್ವಾಲ್ ಅದೇ ತಂಡಗಳಲ್ಲಿ ಮುಂದುವರಿಯಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT