ಬಿಷನ್ ಸಿಂಗ್ ಬೇಡಿ (ಸಂಗ್ರಹ ಚಿತ್ರ) 
ಕ್ರೀಡೆ

ಇಶಾಂತ್ ವರ್ತನೆ ಸಹನೀಯವಲ್ಲ: ಬಿಷನ್ ಸಿಂಗ್ ಬೇಡಿ

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತದ ವೇಗಿ ಇಶಾಂತ್ ಶರ್ಮಾ ಆತಿಥೇಯ ಆಟಗಾರರ ಜತೆಗೆ ತೋರಿದ ಅನುಚಿತವರ್ತನೆ ತೀರಾ ಕೆಟ್ಟದಾಗಿದೆ ಎಂದು ಭಾರತದ ಮಾಜಿ ಆಟಗಾರ ಬಿಷನ್ ಸಿಂಗ್ ಬೇಡಿ ಅಭಿಪ್ರಾಯಪಟ್ಟಿದ್ದಾರೆ...

ನವದೆಹಲಿ: ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತದ ವೇಗಿ ಇಶಾಂತ್ ಶರ್ಮಾ ಆತಿಥೇಯ ಆಟಗಾರರ ಜತೆಗೆ ತೋರಿದ ಅನುಚಿತ ವರ್ತನೆ ತೀರಾ ಕೆಟ್ಟದಾಗಿದೆ ಎಂದು ಭಾರತದ   ಮಾಜಿ ಆಟಗಾರ ಬಿಷನ್ ಸಿಂಗ್ ಬೇಡಿ ಅಭಿಪ್ರಾಯಪಟ್ಟಿದ್ದಾರೆ.

ಇಶಾಂತ್ ಶರ್ಮಾ ತೋರಿದ ಉತ್ತಮ ಬೌಲಿಂಗ್ ಪ್ರದರ್ಶನವು ಭಾರತದ 21 ಅಂತರದ ಸರಣಿ ಗೆಲುವಿನಲ್ಲಿ ನೆರವಿಗೆ ಬಂದರೂ, ಅಂತಿಮ ಪಂದ್ಯದಲ್ಲಿ ಎಂಟು ವಿಕೆಟ್ ಕಬಳಿಸಿ ತಮ್ಮ ವೃತ್ತಿ  ಜೀವನದಲ್ಲಿ 200 ವಿಕೆಟ್ ಪೂರೈಸಿದರು. ಆದರೆ ಲಂಕಾ ಆಟಗಾರರೊಂದಿಗೆ ಸತತವಾಗಿ ವಾಗ್ವಾದದಲ್ಲಿ ಕಾಣಿಸಿಕೊಂಡ ಪರಿಣಾಮ ಐಸಿಸಿಯಿಂದ ಒಂದು ಟೆಸ್ಟ್ ಪಂದ್ಯದ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ. ``ಲಂಕಾ ವಿರುದ್ಧದ ಸರಣಿಯಲ್ಲಿ ನಿರಂತರವಾಗಿ ಆಟಗಾರರ ಜತೆಗೆ ನಡೆಸಿದ ಮಾತಿನ ಚಕಮಕಿ ದುರದೃಷ್ಟಕರ. ತಂಡ ಆಕ್ರಮಣಕಾರಿ ಮನೋಭಾವದ ಬಗ್ಗೆ ಮಾತನಾಡುತ್ತಿದ್ದರೂ ಇದರ ಫಲವಾಗಿ ಇಶಾಂತ್ ಒಂದು ಪಂದ್ಯದಿಂದ ನಿಷೇಧಿಸಲ್ಪಟ್ಟಿದ್ದಾರೆ.

ಕ್ರಿಕೆಟ್ ಕ್ರೀಡೆಯಲ್ಲಿ ಇದನ್ನು ನಿರೀಕ್ಷಿಸುತ್ತೀರಾ? ಇದು ಅತ್ಯಂತ ಕೆಟ್ಟ ವರ್ತನೆ. ಈ ವರ್ತನೆ ವಿರಾಟ್ ಕೊಹ್ಲಿ ಆಕ್ರಮಣಕಾರಿ ವರ್ತನೆಗೆ ಸಂಬಂಧಿಸಿಲ್ಲ'' ಎಂದು ಬೇಡಿ ಹೇಳಿದ್ದಾರೆ. ``ಕೊಹ್ಲಿ ಈ  ಸರಣಿಯಲ್ಲಿ ಅತ್ಯುತ್ತಮ ರೀತಿಯಲ್ಲಿ ಜವಾಬ್ದಾರಿ ನಿಭಾಯಿಸಿದರು. ಆದರೆ ಆತ ತನ್ನ ಆಕ್ರಮಣಕಾರಿ ಮನೋಭಾವವನ್ನು ನಿಯಂತ್ರಿಸಿಕೊಳ್ಳಬೇಕು. ಎಲ್ಲರ ಕಣ್ಣು ನಾಯಕನ ಮೇಲೆ ನೆಟ್ಟಿರುತ್ತದೆ.  ಆತ ಇತರೆ ಆಟಗಾರರಿಗೆ ಮಾದರಿಯಾಗಿರಬೇಕು. ಪಂದ್ಯದ ವೇಳೆ ಬ್ಯಾಟ್, ಬಾಲ್, ಫೀಲ್ಡಿಂಗ್ ವೇಳೆ ಆಕ್ರಮಣಕಾರಿಯಾಗಿರಬೇಕೇ ಹೊರತು ಬಾಯಿಯ ಮೂಲಕವಲ್ಲ'' ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT