ಬಾಸ್ಕೆಟ್‍ಬಾಲ್ 
ಕ್ರೀಡೆ

ರಾಷ್ಟ್ರೀಯ ಬಾಸ್ಕೆಟ್‍ಬಾಲ್ ಚಾಂಪಿಯನ್‍ಶಿಪ್: ಕ್ವಾರ್ಟರ್‍ಗೆ ಕರ್ನಾಟಕ

ಹಲವಾರು ಏಳು ಬೀಳುಗಳ ನಡುವೆಯೂ ಆತಿಥೇಯ ಕರ್ನಾಟಕ ಪುರುಷರ ತಂಡವು ನಗರದಲ್ಲಿ ನಡೆಯುತ್ತಿರುವ 66ನೇ ಹಿರಿಯರ ರಾಷ್ಟ್ರೀಯ ಬಾಸ್ಕೆಟ್‍ಬಾಲ್...

ಮೈಸೂರು: ಹಲವಾರು ಏಳು ಬೀಳುಗಳ ನಡುವೆಯೂ ಆತಿಥೇಯ ಕರ್ನಾಟಕ ಪುರುಷರ ತಂಡವು ನಗರದಲ್ಲಿ ನಡೆಯುತ್ತಿರುವ 66ನೇ ಹಿರಿಯರ ರಾಷ್ಟ್ರೀಯ ಬಾಸ್ಕೆಟ್‍ಬಾಲ್ ಪಂದ್ಯಾವಳಿಯ ಕ್ವಾರ್ಟರ್ಫೈನಲ್ ತಲುಪುವಲ್ಲಿ ಸಫಲವಾಗಿದೆ.

ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಅಂಕ ಗಳಿಕೆಯ ಆಧಾರದ ಮೇಲೆ ಕರ್ನಾಟಕ ಪುರುಷರ ತಂಡ ಕ್ವಾರ್ಟರ್ಫೈನಲ್ ಪ್ರವೇಶಿಸಿದರೆ, ಮಹಿಳೆಯರ ತಂಡವು ಪಂದ್ಯಾವಳಿಯಿಂದ ಹೊರಬಿದ್ದಿದೆ. ಬುಧವಾರ ಬೆಳಗ್ಗೆ ಕರ್ನಾಟಕ ಮತ್ತು ಉತ್ತರಾಖಂಡ್ ನಡುವೆ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡವು 65-58 (22-11, 14-18, 13-11, 16-18) ಅಂತರದಲ್ಲಿ ಸೋಲು ಅನುಭವಿಸಿತು. ಆದರೆ ಕರ್ನಾಟಕ ತಂಡವು ದೆಹಲಿ ಮತ್ತು ಹರಿಯಾಣ ತಂಡಗಳಿಗೆ ಹೋಲಿಸಿದಲ್ಲಿ ಹೆಚ್ಚು ಅಂಕ ಗಳಿಸಿದ್ದರಿಂದ ಕ್ವಾರ್ಟರ್ ಫೈನಲ್‍ಗೆ ಅರ್ಹತೆ ಪಡೆದುಕೊಂಡಿತು.

ಇದೀಗ ಅಂತಿಮ ಎಂಟರ ಹಣಾಹಣಿಯಲ್ಲಿ ಬಲಿಷ್ಠ ಸರ್ವೀಸಸ್ ತಂಡದ ಸವಾಲನ್ನು ಮೆಟ್ಟಿನಿಂತು ಸೆಮಿಫೈನಲ್ ತಲುಪಬೇಕಾದ ಒತ್ತಡ ಅದರ ಮೇಲಿದೆ. ಅಂದಹಾಗೆ ಉತ್ತರಾಖಂಡ ವಿರುದ್ಧದ ಪಂದ್ಯದಲ್ಲಿ ರಾಜ್ಯದ ಪರ ಎಸ್. ಶಶಿ ಹಾಗೂ ಅನಿಲ್ ಕುಮಾರ್ ಕ್ರಮವಾಗಿ 11 ಮತ್ತು 10 ಅಂಕ ಗಳಿಸಿದರೆ, ಅದೇ ಉತ್ತರಾಖಂಡದ ಪರ ತ್ರಿದೀಪ್ ರೈ ಮತ್ತು ವಿಶೇಶ್ ಭೃಗುವಂಶಿ 24 ಮತ್ತು 20 ಪಾಯಿಂಟ್ಸ್‍ಗಳಿಂದ ವಿಜೃಂಭಿಸಿದರು.

ಸೋತ ವನಿತೆಯರು: ಇನ್ನು ಬುಧವಾರ ನಡೆದ ಮಹಿಳೆಯರ ವಿಭಾಗದಲ್ಲಿ ಕರ್ನಾಟಕ ಎದುರು ಇಂಡಿಯನ್ ರೇಲ್ವೇಸ್ ನ ವನಿತೆಯರು 68-49ರಿಂದ ಜಯ ಪಡೆದರು. ಆರಂಭದಿಂದಲೇ ಆಕ್ರಮಣ ಕಾರಿ ಹೋರಾಟ ನಡೆಸಿದ ರೇಲ್ವೇಸ್ ವನಿತೆಯರು 25-8, 20-6, 13-16 ಹಾಗೂ 22-7ರಿಂದ ಜಯಶಾಲಿಯಾದರು. ಪಂದ್ಯದಾದ್ಯಂತ ಅಬ್ಬರದ ಪ್ರದರ್ಶನ ನೀಡಿದ ರೇಲ್ವೇಸ್ ವನಿತಾ ತಂಡ ಭರ್ಜರಿ ಜಯ ಪಡೆಯಿತು. ರೇಲ್ವೇಸ್ ಪರ ರಾಜಪ್ರಿಯದರ್ಶಿನಿ 19 ಪಾಯಿಂಟ್ಸ್ ಗಳಿಸಿದರೆ, ಅನಿತಾ ಪೌಲ್ 12 ಮತ್ತು ಶೃತಿ ಮೆನನ್ 10 ಅಂಕ ಗಳಿಸಿ ತಂಡದ ಗೆಲುವಿಗೆ ನೆರವಾದರು. ಇನ್ನು ಸೋತ ಕರ್ನಾಟಕದ ಪರ ಬಾಂಧವ್ಯ ಮಹೇಶ ಮತ್ತು ಎಸ್. ಸವಿತಾ 13 ಹಾಗೂ 10 ಪಾಯಿಂಟ್ಸ್ ಗಳಿಸಿ ಗಮನ ಸೆಳೆದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT