ಮನಿಕಾ ಬಾತ್ರಾ 
ಕ್ರೀಡೆ

Paris Olympics 2024: ಮಹಿಳೆಯರ ಟೇಬಲ್ ಟೆನ್ನಿಸ್; ರೊಮೇನಿಯಾ ವಿರುದ್ಧ ಭಾರತಕ್ಕೆ 3-2 ಗೆಲುವು, ಕ್ವಾರ್ಟರ್ ಫೈನಲ್‌ಗೆ ಲಗ್ಗೆ!

ಭಾರತ ತಂಡ ಆರಂಭದಲ್ಲಿ 2-0 ಅಂತರದಲ್ಲಿ ಮುನ್ನಡೆ ಪಡೆದಿತ್ತು. ಆಗ ಮರು ಹೋರಾಟ ನೀಡಿದ ರೊಮೇನಿಯಾ 2-2ರಿಂದ ಸಮಬಲ ಸಾಧಿಸಿತ್ತು. ನಿರ್ಣಾಯಕ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಮನಿಕಾ ತನ್ನ ತಂಡಕ್ಕೆ ಗೆಲುವು ತಂದುಕೊಟ್ಟರು.

ಪ್ಯಾರಿಸ್: ಸೋಮವಾರ ಇಲ್ಲಿ ನಡೆದ ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳೆಯರ ಟೇಬಲ್ ಟೆನಿಸ್ ಪಂದ್ಯದಲ್ಲಿ ರೋಚಕ ಟೈ ಆಗಿದ್ದ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ರೊಮೇನಿಯಾ ವಿರುದ್ಧ 3-2 ಅಂತರದಲ್ಲಿ ಮೇಲುಗೈ ಸಾಧಿಸಿದ ಸ್ಟಾರ್ ಆಟಗಾರ್ತಿ ಮನಿಕಾ ಬಾತ್ರಾ ನೇತೃತ್ವದ ಭಾರತ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿತು.

ಭಾರತ ತಂಡ ಆರಂಭದಲ್ಲಿ 2-0 ಅಂತರದಲ್ಲಿ ಮುನ್ನಡೆ ಪಡೆದಿತ್ತು. ಆಗ ಮರು ಹೋರಾಟ ನೀಡಿದ ರೊಮೇನಿಯಾ 2-2ರಿಂದ ಸಮಬಲ ಸಾಧಿಸಿತ್ತು. ನಿರ್ಣಾಯಕ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಮನಿಕಾ ತನ್ನ ತಂಡಕ್ಕೆ ಗೆಲುವು ತಂದುಕೊಟ್ಟರು.

ಡಬಲ್ಸ್ ಪಂದ್ಯದಲ್ಲಿ ಶ್ರೀಜಾ ಅಕುಲಾ ಮತ್ತು ಅರ್ಚನಾ ಕಾಮತ್ ಆಡಿನಾ ಡಯಾಕೋನು ಮತ್ತು ಎಲಿಜಬೆಟಾ ಸಮರಾ ವಿರುದ್ಧ 11-9 12-10 11-7 ಅಂತರದಲ್ಲಿ ಗೆಲುವು ಸಾಧಿಸಿದರು.

ಆನಂತರ ಮಣಿಕಾ ಅವರು ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಬರ್ನಾಡೆಟ್ ಸಾಕ್ಸ್ರನ್ನು 11-5, 11-7, 11-7 ನೇರ ಗೇಮ್ ಗಳ ಅಂತರದಿಂದ ಸೋಲಿಸಿ ಭಾರತಕ್ಕೆ 2-0 ಮುನ್ನಡೆ ಒದಗಿಸಿಕೊಟ್ಟರು. ಎರಡನೇ ಸಿಂಗಲ್ಸ್ ಪಂದ್ಯದಲ್ಲಿ ಶ್ರೀಜಾ ಅಕುಲಾ ಅವರು

ಯುರೋಪಿಯನ್ ಚಾಂಪಿಯನ್ ಎಲಿಝಬೆಟಾ ಸಮರಾ ವಿರುದ್ಧ 2-3( 11-8, 4-11, 11-7, 6-11, 8-11) ಅಂತರದಿಂದ ಸೋತರು. ಶ್ರೀಜಾ ಅವರ ಸೋಲು ಅರ್ಚನಾ ಮತ್ತು ಬರ್ನಾಡೆಟ್ ನಡುವಿನ ಮುಖಾಮುಖಿಗೆ ದಾರಿ ಮಾಡಿಕೊಟ್ಟಿತು. ಅರ್ಚನಾ ಕಾಮತ್ ಅವರು ಬರ್ನಾಡೆಟ್ ಸಾಕ್ಸ್ ವಿರುದ್ಧ 11-5, 8-11, 11-7, 11-9 ಸೆಟ್‌ಗಳಿಂದ ಸೋತರು. ನಂತರ ಬರ್ನಾಡೆಟ್ ಮುಂದಿನ ಎರಡು ಗೇಮ್‌ಗಳನ್ನು 11-7 11-9 ರಿಂದ ಗೆದ್ದು ಪಂದ್ಯವನ್ನು ಟೈ ಹಂತಕ್ಕೆ ತಂದರು.

ನಿರ್ಣಾಯಕ ಪಂದ್ಯದಲ್ಲಿ ತಂಡವನ್ನು ಸೆಮೀಸ್‌ಗೆ ಕೊಂಡೊಯ್ಯುವ ಹೊರೆ ಮನಿಕಾ ಅವರ ಹೆಗಲ ಮೇಲಿತ್ತು. ಆಗ ಮನಿಕಾ ಅವರು ಆಡಿನಾ ಡಿಯಾಕೋನುರನ್ನು 3-0( 11-5, 11-9, 11-9) ಅಂತರದಿಂದ ಮಣಿಸಿ ಭಾರತಕ್ಕೆ 3-2ಅಂತರದ ರೋಚಕ ಗೆಲುವು ತಂದುಕೊಟ್ಟರು. ಭಾರತ ತಂಡ ಮುಂದಿನ ಸುತ್ತಿನಲ್ಲಿ ಮತ್ತೊಂದು ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ ಜಯ ಸಾಧಿಸಲಿರುವ ಅಮೆರಿಕ ಅಥವಾ ಜರ್ಮನಿ ತಂಡವನ್ನು ಎದುರಿಸಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT