ಪ್ಯಾರಾಲಿಂಪಿಕ್ಸ್ 2024 ರ ಮಹಿಳೆಯರ 10 ಮೀಟರ್ ಏರ್ ರೈಫಲ್ (SH1) ಈವೆಂಟ್‌ನಲ್ಲಿ ಚಿನ್ನದ ಪದಕ ಮತ್ತು ಕಂಚಿನ ಪದಕವನ್ನು ಗೆದ್ದ ನಂತರ ಭಾರತದ ಅವನಿ ಲೆಖರಾ, ಮತ್ತು ಮೋನಾ ಅಗರ್ವಾಲ್ ಫೋಟೋಗಳಿಗೆ ಪೋಸ್ ನೀಡಿದರು. 
ಕ್ರೀಡೆ

Paralympics 2024: ಮಹಿಳೆಯರ 10 ಮೀಟರ್ ಏರ್ ರೈಫಲ್ ಶೂಟಿಂಗ್ ನಲ್ಲಿ ಅವನಿ ಲೇಖರ ಗೆ ಚಿನ್ನ; ಮೋನಾ ಅಗರ್ವಾಲ್ ಗೆ ಕಂಚು!

2020 ರಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ನಲ್ಲಿ ಅವನಿ ಲೇಖರ ಚಿನ್ನದ ಪದಕ ಗೆದ್ದು, ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿಗೆ ಭಾಜನರಾಗಿದ್ದರು.

ಪ್ಯಾರಿಸ್: ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ 2024 ನಲ್ಲಿ ಮಹಿಳೆಯರ 10 ಮೀಟರ್ Air Rifle Standing SH1 ವಿಭಾಗದ ಫೈನಲ್ ನಲ್ಲಿ ಅವನಿ ಲೇಖರ ಚಿನ್ನದ ಪದಕ ಗೆದ್ದಿದ್ದಾರೆ.

2020 ರಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ನಲ್ಲಿ ಅವನಿ ಲೇಖರ ಚಿನ್ನದ ಪದಕ ಗೆದ್ದು, ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿಗೆ ಭಾಜನರಾಗಿದ್ದರು. ಈಗ 2 ನೇ ಬಾರಿಗೆ ಅವನಿ ಲೇಖರ ಚಿನ್ನದ ಪದಕ ಗೆದ್ದಿದ್ದಾರೆ.

ವಿಶ್ವ ದಾಖಲೆಯನ್ನು ಹೊಂದಿರುವ, ಐರಿನಾ ಶ್ಚೆಟ್ನಿಕ್ ಮತ್ತು ಸಹ ದೇಶವಾಸಿ ಮೋನಾ ಅಗರ್ವಾಲ್ ಇತರರ ನಡುವಣ ಸ್ಪರ್ಧೆಯಲ್ಲಿ, ಅವನಿ ಲೇಖರ ವಿಶ್ವದ ಅತ್ಯುತ್ತಮ ಪ್ಯಾರಾ-ಶೂಟರ್‌ಗಳಲ್ಲಿ ಒಬ್ಬರು ಎಂಬುದನ್ನು ತೋರಿಸಿದ್ದಾರೆ.

ಅವನಿ ಲೇಖರ 2 ಸುತ್ತುಗಳಲ್ಲಿ ಒಟ್ಟು 103.7 ಅಂಕಗಳೊಂದಿಗೆ ಮೊದಲ ಹಂತವನ್ನು ಪೂರ್ಣಗೊಳಿಸಿದರು. ಸಹವರ್ತಿ ಮೋನಾ ಅಗರ್ವಾಲ್ ಜೊತೆಗೆ ಸ್ಪರ್ಧೆಯಲ್ಲಿ ಮರಳಲು ಅವರು ಎರಡನೇ ಹಂತದಲ್ಲಿ ವೇಗವನ್ನು ಪಡೆದರು. ನಂತರದವರು ಮೂರನೇ ಸ್ಥಾನದಲ್ಲಿದ್ದರು.

ಮೋನಾ ಅಗರ್ವಾಲ್ ಗೆ ಕಂಚು

ಮಹಿಳೆಯರ 10 ಮೀಟರ್ ಏರ್ ರೈಫಲ್ (SH1) ಸ್ಪರ್ಧೆಯಲ್ಲಿ ಭಾರತದ ಮೋನಾ ಅಗರ್ವಾಲ್ ಕಂಚಿನ ಪದಕ ಗೆದ್ದರು.

"ಇದು ತುಂಬಾ ಕಷ್ಟಕರವಾಗಿತ್ತು ಆದರೆ ನಾನು ಯಶಸ್ವಿಯಾದೆ. ಆದ್ದರಿಂದ, ಧನ್ಯವಾದಗಳು. ಅವನಿ ಜೊತೆಯಲ್ಲಿದ್ದದ್ದು ಖಂಡಿತವಾಗಿಯೂ ಸಹಾಯ ಮಾಡಿದೆ. ಅವಳು ಚಾಂಪಿಯನ್ ಮತ್ತು ಅವಳು ನನಗೆ ಸ್ಫೂರ್ತಿ ನೀಡುತ್ತಾಳೆ" ಎಂದು ಮೋನಾ ಹೇಳಿದರು.

37 ವರ್ಷದ ಮೋನಾ, ಶೂಟಿಂಗ್‌ ಗೂ ಮುಂಚೆ ಶಾಟ್‌ಪುಟ್, ಪವರ್‌ಲಿಫ್ಟಿಂಗ್ ಮತ್ತು ವೀಲ್‌ಚೇರ್ ವಾಲಿಬಾಲ್ ಸೇರಿದಂತೆ ಹಲವಾರು ಕ್ರೀಡೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು 228.7 ಅಂಕಗಳನ್ನು ಗಳಿಸಿ ಮೂರನೇ ಸ್ಥಾನ ಪಡೆದರು.

ಭಾರತದ ಪ್ಯಾರಾಲಿಂಪಿಕ್ ಇತಿಹಾಸದಲ್ಲಿ ಒಂದೇ ಸ್ಪರ್ಧೆಯಲ್ಲಿ ಇಬ್ಬರು ಶೂಟರ್‌ಗಳು ಪದಕಗಳನ್ನು ಗೆದ್ದಿರುವುದು ಇದೇ ಮೊದಲು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ನಲ್ಲಿ 2 ವಾರ ಪೂರೈಸಿದ ಪ್ರತಿಭಟನೆ: ಸರ್ಕಾರಿ ಕಟ್ಟಡಗಳಿಗೆ ಬೆಂಕಿ, ಪ್ರತಿಭಟನಾಕಾರರಿಗೆ 'ಮರಣ ದಂಡನೆ' ಬೆದರಿಕೆ!

"Surely It's Time": ಕೊಹ್ಲಿ ನಿವೃತ್ತಿ ಬಗ್ಗೆ ದೊಡ್ಡ ಸಂದೇಶ ರವಾನಿಸಿದ ಉತ್ತಪ್ಪ!

'ಮನ್ರೇಗಾ ಬಚಾವೋ' ಸಂಗ್ರಾಮ: ಕಾಂಗ್ರೆಸ್ ಪಕ್ಷದಿಂದ ದೇಶಾದ್ಯಂತ 45 ದಿನಗಳ ಹೋರಾಟ ಆರಂಭ!

ಮಹಾರಾಷ್ಟ್ರದಲ್ಲಿ ಸಿಎಂ, ಡಿಸಿಎಂ ಮುಸುಕಿನ ಗುದ್ದಾಟ: ಅಜಿತ್ ಪವಾರ್ ವಿರುದ್ಧ ಫಡ್ನವೀಸ್ ಕಿಡಿ!

ಭಾಷಾ ಮಸೂದೆ ವಿರೋಧಿಸಿ ಸಿದ್ದರಾಮಯ್ಯ ಪತ್ರ: ಕೇರಳ ಸಿಎಂ ಸ್ಪಷ್ಟೀಕರಣ; ಪಿಣರಾಯಿ ವಿಜಯನ್ ಹೇಳಿದ್ದೇನು?

SCROLL FOR NEXT