ಡಿ ಗುಕೇಶ್  
ಕ್ರೀಡೆ

ನಾನು ಆರು ವರ್ಷದ ಬಾಲಕನಾಗಿದ್ದಾಗಲೇ ಚಾಂಪಿಯನ್ ಆಗುವ ಕನಸು ಕಾಣುತ್ತಿದ್ದೆ: ಡಿ ಗುಕೇಶ್

ಕೇವಲ 18 ವರ್ಷ. ಹದಿಹರೆಯದ ಹುಡುಗ ಡಿ ಗುಕೇಶ್ ಅತ್ಯಂತ ಕಿರಿಯ ಚೆಸ್ ವಿಶ್ವ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಶ್ವ ಚಾಂಪಿಯನ್ ಆಗಲು ಈ ಹುಡುಗ ಕನಸು ಕಂಡಿದ್ದು ಕೇವಲ 6 ವರ್ಷದಲ್ಲಿ. ನಿನ್ನೆ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ ನಂತರ ನಡೆದ ನೇರ ಪತ್ರಿಕಾಗೋಷ್ಠಿ ಕಾರ್ಯಕ್ರಮದಲ್ಲಿ ಭಾರತೀಯ ಗ್ರ್ಯಾಂಡ್‌ಮಾಸ್ಟರ್ ಗುಕೇಶ್ ತಮ್ಮ ಪಯಣದ ಬಗ್ಗೆ ತೆರೆದಿಟ್ಟಿದ್ದಾರೆ ಅವರ ಸಂದರ್ಶನದ ಆಯ್ದ ಭಾಗಗಳು ಇಂತಿದೆ:

Sumana Upadhyaya

ಚಾಂಪಿಯನ್ ಆಗಿ ಹೊರಹೊಮ್ಮಿದ ಬಗ್ಗೆ ಏನು ಹೇಳುತ್ತೀರಿ?

ನಾನು 6 ಅಥವಾ 7 ವರ್ಷ ವಯಸ್ಸಿನಿಂದಲೂ ಈ ಬಗ್ಗೆ ಕನಸು ಕಾಣುತ್ತಿದ್ದೆ. ಅದು ಇಂದು ನೆರವೇರಿದ್ದು, ಈ ಕ್ಷಣವನ್ನು ಅನುಭವಿಸುತ್ತಿದ್ದೇನೆ. ನಾನು 10 ವರ್ಷಗಳಿಂದಲೂ ಈ ಕ್ಷಣದಲ್ಲಿ ಬದುಕುತ್ತಿದ್ದೇನೆ. ಪ್ರತಿಯೊಬ್ಬ ಚೆಸ್ ಆಟಗಾರನು ಈ ಗಳಿಗೆಯನ್ನು ಅನುಭವಿಸಲು ಬಯಸುತ್ತಾನೆ, ಅವರಲ್ಲಿ ನಾನು ಕೂಡ ಒಬ್ಬ. ನಾನು ನನ್ನ ಕನಸಿನಲ್ಲಿ ಜೀವಿಸಲು ಬಯಸುತ್ತೇನೆ.

ನಿಮ್ಮ ಎದುರಾಳಿ ಡಿಂಗ್ ಲಿರೆನ್ ಬಗ್ಗೆ ಹೇಳಿ

ಕಳೆದ ಹಲವಾರು ವರ್ಷಗಳಿಂದ ಇತಿಹಾಸದಲ್ಲಿ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಈ ಪಂದ್ಯದಲ್ಲಿ ಅವರು ಎಷ್ಟು ಒತ್ತಡವನ್ನು ಎದುರಿಸಬೇಕಾಯಿತು ಮತ್ತು ಅವರು ಯಾವ ರೀತಿಯ ಹೋರಾಟವನ್ನು ನೀಡಿದರು ಎಂಬುದನ್ನು ನೋಡಿದರೆ, ಅವರು ಎಂತಹ ನಿಜವಾದ ಚಾಂಪಿಯನ್ ಎಂಬುದನ್ನು ತೋರಿಸುತ್ತದೆ. ಸಂಪೂರ್ಣವಾಗಿ ಸೋತ ಸ್ಥಿತಿಯಲ್ಲಿದ್ದ ಆಟಗಳಲ್ಲಿ ಅವರು, ಕಷ್ಟದ ಪರಿಸ್ಥಿತಿಯಲ್ಲಿ ಏನು ಸಿಗುತ್ತದೆ ಎಂಬುದನ್ನು ಹುಡುಕುತ್ತಿದ್ದರು.

ಆಟದಲ್ಲಿ ನಾನು ಮುನ್ನಡೆ ಸಾಧಿಸಿದ ನಂತರ, ಅವರು ಮತ್ತೆ ಹೋರಾಡಲು ಅದ್ಭುತ ಆಟವಾಡುತ್ತಾ ಹೋದರು. ನಾನು 12 ನೇ ಪಂದ್ಯದಲ್ಲಿ ಸೋತ ನಂತರ, ಸ್ವಲ್ಪ ನಿರಾಶಾದಾಯಕವಾಗಿತ್ತು, ಆದರೆ ನಾನು ನನ್ನ ಎದುರಾಳಿಯಿಂದ ಸ್ಫೂರ್ತಿ ಪಡೆದು ಆಟವಾಡಿದೆ. ಒಬ್ಬ ಸಾಮಾನ್ಯ ಮನುಷ್ಯ [11 ನೇ ಪಂದ್ಯದ ನಂತರ] ಆಟ ಕೈಬಿಡುತ್ತಿದ್ದನು, ಆದರೆ ಮರುದಿನ ಡಿಂಗ್ ಲಿರೆನ್ ಅವರು ಬಂದು ನನ್ನ ಆಟವನ್ನು ನಾಶ ಮಾಡಿದರು. ಅದು ನನಗೆ ನಿಜವಾದ ಸ್ಫೂರ್ತಿ ನೀಡಿತು.

ಅವರ ಆಟದ ಸೆಕೆಂಡ್ ಗಳ ಬಗ್ಗೆ ಹೇಳಿ

ನನ್ನ ತರಬೇತುದಾರರಾದ ಗ್ರ್ಜೆಗೋರ್ಜ್ ಗಜೆವ್ಸ್ಕಿ ಅವರು ಕಳೆದ ಎರಡು ವರ್ಷಗಳಿಂದ ನನ್ನ ತರಬೇತುದಾರರಾಗಿದ್ದಾರೆ. ಅವರು ದಣಿವರಿಯಿಲ್ಲದೆ ಕೆಲಸ ಮಾಡುವ ವ್ಯಕ್ತಿ -- ಅವರಿಗೆ ಈ ಸಂದರ್ಭದಲ್ಲಿ ತುಂಬು ಧನ್ಯವಾದಗಳನ್ನು ಹೇಳುತ್ತೇನೆ. ನಾನು ಪ್ಯಾಡಿ ಅವರ ಬಗ್ಗೆ ಈ ಸಂದರ್ಭದಲ್ಲಿ ಹೇಳಲೇಬೇಕು. ಅವರು ಕಳೆದ ಆರು ತಿಂಗಳಲ್ಲಿ ನನಗೆ ದೊಡ್ಡ ಬೆಂಬಲವಾಗಿದ್ದಾರೆ. ನಾನು ರಾಡೋಸ್ಲಾವ್ ವೊಜ್ಟಾಸ್ಜೆಕ್, ಪೆಂಟಾಲಾ ಹರಿಕೃಷ್ಣ, ವಿನ್ಸೆಂಟ್ ಕೀಮರ್, ಜಾನ್ ಕ್ಲಿಮ್ಕೋವ್ಸ್ಕಿ ಮತ್ತು ಜಾನ್-ಕ್ರಿಸ್ಜ್ಟೋಫ್ ದುಡಾ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ.

ನಿಮ್ಮ ಪೋಷಕರ ಬಗ್ಗೆ ಹೇಳಿ

ನನ್ನ ತಂದೆ ತಾಯಿ ಬಗ್ಗೆ ಹೇಳಲು ನನ್ನ ಬಳಿ ಪದಗಳೇ ಇಲ್ಲ. ನನ್ನ ತಂದೆ ತಾಯಿಯರಿಬ್ಬರಿಗೂ ಮೊದಲಿನಿಂದಲೂ ನನಗಿಂತ ಅವರ ಕನಸು ದೊಡ್ಡದಾಗಿತ್ತು. ಅವರಿಬ್ಬರೂ ಕ್ರೀಡಾ ಪ್ರೇಮಿಗಳು, ಯೌವನದಲ್ಲಿ ತಮ್ಮ ಉತ್ಸಾಹವನ್ನು ಮುಂದುವರಿಸಲು ಅವರಿಗೆ ಅವಕಾಶ ಸಿಗಲಿಲ್ಲ. ನಾನು ಜನಿಸಿದಾಗ, ಅವರು ನನ್ನನ್ನು ಬೆಂಬಲಿಸಲು ನಿರ್ಧರಿಸಿದರು. ಅವರು ನನ್ನನ್ನು ಎಷ್ಟರ ಮಟ್ಟಿಗೆ ಬೆಂಬಲಿಸಿದರು ಎಂದರೆ ಅವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು.

ಪಂದ್ಯದ ಸಮಯದಲ್ಲಿ ಅವರು ಎದುರಿಸಿದ ದೊಡ್ಡ ಸವಾಲು ಏನು?

ಮೊದಲ ಗೇಮ್‌ನಲ್ಲಿ ಸೋಲನುಭವಿಸಿದ್ದು ಪಂದ್ಯದಲ್ಲಿ ಅತ್ಯಂತ ಕಠಿಣ ಸವಾಲಾಗಿತ್ತು. ಅದು ಸಂಭವಿಸಬಹುದು ಎಂದು ನನಗೆ ತಿಳಿದಿತ್ತು, ನಾನು ಅದಕ್ಕೆ ಸಿದ್ಧನಾಗಿದ್ದೆ. ನೀವು ಎಷ್ಟೇ ತಯಾರಿ ಮಾಡಿಕೊಂಡರೂ ಅದು ಕಠಿಣವಾಗಿತ್ತು. ಆಟದ ನಂತರ, ಮೇಲಕ್ಕೆತ್ತುವ ಪಂದ್ಯದ ಸಮಯದಲ್ಲಿ ನನಗೆ ಸ್ಫೂರ್ತಿ ನೀಡಲು ವಿಶ್ವನಾಥನ್ ಆನಂದ್ ಸರ್ ಇದ್ದರು. ಅವರೊಂದಿಗೆ ಕಳೆದ ಕ್ಷಣ ಉತ್ತಮವಾಗಿತ್ತು. ಅವರು ನನಗೆ 11 ಪಂದ್ಯಗಳಿದ್ದವು, ನಿಮ್ಮ ಬಳಿ 13 ಪಂದ್ಯಗಳಿವೆ ಎಂದರು. ಇದು ಕೇವಲ ಒಂದು ಸುತ್ತಿನ ಆಟವಾಗಿದೆ ಅಷ್ಟೆ, ಮುಂದೆ ಹೋಗಲು ಬಹಳವಿದೆ ಎಂದು ನೆನಪು ಮಾಡಿದರು. ಆ ಕ್ಷಣದಲ್ಲಿ ಅವರ ಪ್ರೋತ್ಸಾಹ ನನಗೆ ಮಾನಸಿಕ ಗಟ್ಟಿತನ ನೀಡಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Coal mafia: ಜಾರ್ಖಂಡ್-ಪಶ್ಚಿಮ ಬಂಗಾಳದಲ್ಲಿ 40 ಕ್ಕೂ ಹೆಚ್ಚು ಸ್ಥಳಗಳ ಮೇಲೆ ED ದಾಳಿ, ತೀವ್ರ ಶೋಧ

ಬಾಂಗ್ಲಾದೇಶದಲ್ಲಿ ಪ್ರಬಲ ಭೂಕಂಪನ: ಕನಿಷ್ಠ 6 ಸಾವು, ಕೋಲ್ಕತಾ ಸೇರಿ ಭಾರತದ ಹಲವೆಡೆ ಕಂಪಿಸಿದ ಭೂಮಿ, Video

'7 ಕಿ.ಮೀ ಉದ್ದ, 25 ಮೀಟರ್ ಆಳ, 80 ರೂಮ್ ಗಳು': ಪಾತಾಳದಲ್ಲಿ 'ಹಮಾಸ್' ಲೋಕ ಪತ್ತೆ ಮಾಡಿದ ಇಸ್ರೇಲ್! Video

LKG, UKG in Anganwadis: ರಾಜ್ಯದ 5000 ಅಂಗನವಾಡಿಗಳಲ್ಲಿ ನ.28ರಿಂದ ತರಗತಿಗಳು ಆರಂಭ..!

ಆಫೀಸ್ ರೋಮ್ಯಾನ್ಸ್ ಎಫೆಕ್ಟ್: 150 ಕೋಟಿ ರೂ. ಸಂಬಳದ ಉದ್ಯೋಗ ಕಳೆದುಕೊಂಡ ಲಾಯ್ಡ್ಸ್ ಮಾಜಿ ಸಿಇಒ John Neal!

SCROLL FOR NEXT