ಆಲೂ ಬೆಳೆ 
ಪ್ರಧಾನ ಸುದ್ದಿ

ಪಶ್ಚಿಮ ಬಂಗಾಳದಲ್ಲಿ ಮತ್ತೊಬ್ಬ ರೈತನ ಆತ್ಮಹತ್ಯೆ; ೧೨ಕ್ಕೆ ಏರಿದ ಸಾವಿನ ಸಂಖ್ಯೆ

ಆಲುಗಡ್ಡೆ ಬೆಳೆಯಿಂದ ಲಾಭ ಬರದೆ ಹೋದದ್ದಕ್ಕೆ ರೈತನಾಗಿದ್ದ ಯುವ ಎಂಜಿನಿಯರಿಂಗ್ ಪದವೀಧರ ಪಶ್ಚಿಮ ಬಂಗಾಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು

ಬುರ್ಧ್ವಾನ್: ಆಲುಗಡ್ಡೆ ಬೆಳೆಯಿಂದ ಲಾಭ ಬರದೆ ಹೋದದ್ದಕ್ಕೆ ರೈತನಾಗಿದ್ದ ಯುವ ಎಂಜಿನಿಯರಿಂಗ್ ಪದವೀಧರ ಪಶ್ಚಿಮ ಬಂಗಾಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಇದು ೨೦೧೫ರಲ್ಲಿ ಪಶ್ಚಿಮ ಬಂಗಾಳದಲ್ಲಿ ಸತ್ತ ರೈತರ ಸಂಖ್ಯೆಯನ್ನು ೧೨ ಕ್ಕೆ ಏರಿಸಿದೆ.

ಮೆಮಾರಿಯ ತನ್ನ ಮನೆಯಲ್ಲಿ ೨೭ ವರ್ಷದ ಪ್ರೋಬಿನ್ ಕುಮಾರ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಧೃಢೀಕರಿಸಿದ್ದಾರೆ.

ಪ್ರತಿಷ್ಟಿತ ಜಾಧವಪುರ ವಿಶ್ವವಿದ್ಯಾಲಯದ ಪದವೀಧರ ಪ್ರೋಬಿನ್. ಉದ್ಯೋಗ ಸಿಗದೇ ರೈತನಾಗಿದ್ದ ಪ್ರೋಬಿನ್, ಐದು ಎಕರೆ ಜಾಗದಲ್ಲಿ ಆಲುಗಡ್ಡೆ ಬೆಳೆದಿದ್ದ ಎಂದು ಅವರ ತಂದೆ ನಿವೃತ್ತ ಶಾಲಾ ಶಿಕ್ಷಕ ಗಂಗಾಧರ್ ಲಾಹಾ ತಿಳಿಸಿದ್ದಾರೆ.

ಬಂಪರ್ ಬೆಳೆ ಬಂದಿರುವುದರಿಂದ ರಾಜ್ಯದಲ್ಲಿ ಆಲೂ ಬೆಲೆ ಕುಸಿಯುತ್ತಿದೆ. ಇದರಿಂದ ನೊಂದಿರುವ ಪ್ರೋಬಿನ್ ಗುರುವಾರ ರಾತ್ರಿ ಊಟಕ್ಕೂ ಮುಂಚೆ ನೇಣು ಹಾಕಿಕೊಂಡಿದ್ದಾನೆ. ಆಸ್ಪತ್ರೆಗೆ ಕರೆದುಕೊಂಡು ಹೋದಮೇಲೆ ವೈದ್ಯರು ಮೃತಪಟ್ಟಿರುವುದನ್ನು ಘೋಷಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT