ಗಲಭೆ ನಿರತ ಯೆಮನ್ 
ಪ್ರಧಾನ ಸುದ್ದಿ

ಯೆಮನ್ ಗಲಭೆ: ೧೦ ದೇಶದ ನಾಗರಿಕರನ್ನು ರಕ್ಷಿಸಿದ ಚೈನಾ

ಭಾರತವು ಒಳಗೊಂಡಂತೆ ೧೦ ದೇಶದ ನಾಗರಿಕರನ್ನು ಒಟ್ಟು ೨೨೫ ಜನರನ್ನು ಚೈನಾ ರಕ್ಷಿಸಿದೆ. ಗಲಭೆ ನಿರತ ರಾಷ್ಟ್ರದಿಂದ ವಿದೇಶಿ ನಾಗರಿಕರನ್ನು

ಬೀಜಿಂಗ್: ಭಾರತವು ಒಳಗೊಂಡಂತೆ ೧೦ ದೇಶದ ನಾಗರಿಕರನ್ನು ಒಟ್ಟು ೨೨೫ ಜನರನ್ನು ಚೈನಾ ರಕ್ಷಿಸಿದೆ. ಗಲಭೆ ನಿರತ ರಾಷ್ಟ್ರದಿಂದ ವಿದೇಶಿ ನಾಗರಿಕರನ್ನು ರಕ್ಷಿಸುವ ಮೊದಲ ಪ್ರಯತ್ನ ಚೈನಾದ್ದಾಗಿದೆ.

ಯೆಮನ್ ನ ಆಡೆನ್ ನಿಂದ ಜಿಬೂಟಿಗೆ ಪಾಕಿಸ್ತಾನದ ೧೭೬ ಜನರನ್ನು ಸೇರಿದಂತೆ ಭಾರತ, ಇಥಿಯೋಪಿಯ, ಸಿಂಗಪುರ, ಇಟಲಿ, ಜರ್ಮನಿ, ಪೋಲೆಂಡ್, ಐರ್ಲೆಂಡ್, ಬ್ರಿಟನ್, ಕೆನಡಾ ಮತ್ತು ಯೆಮನ್ ನಾಗರಿಕರನ್ನು ರಕ್ಷಿಸಿರುವ ಬಗ್ಗೆ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹ್ಯು ಚುನ್ಯಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಹಿಂದೆ ಚೈನಾ ೫೦೦ ಜನರನ್ನು ಯೆಮನ್ ನಿಂದ ರಕ್ಷಿಸಿತ್ತು.

ಈ ವಿದೇಶಿ ನಾಗರಿಕರು ನೆನ್ನೆ ಯೆಮನ್ ನಿಂದ ಜಿಬೂಟಿಗೆ ಚೈನಾದ ಯುದ್ಧನೌಕೆ ಏರಿ ಬಂದಿದ್ದಾರೆ. ವಿದೇಶಗಳ ಮನಿವಿಯ ಮೇರೆಗೆ ಮಾನವೀಯತೆಯ ದೃಷ್ಟಿಯಿಂದ ಈ ಕಾರ್ಯ ಕೈಗೊಂಡಿರುವುದಾಗಿ ಚೈನಾ ತಿಳಿಸಿದೆ.

ಇದೇ ಮೊದಲಬಾರಿಗೆ ಗಲಭೆ ನಿರತ ಪ್ರದೇಶದಿಂದ ವಿದೇಶಿಯರನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಚೈನಾ ಕೈಗೊಂಡಿರುವುದು. "ಇದು ಅಂತರಾಷ್ಟ್ರೀಯತನ ಮತ್ತು ಮಾನಾವತವಾದದಲ್ಲಿ ಚೈನಾದ ನಂಬಿಕೆಯನ್ನು ಧೃಢಪಡಿಸುತ್ತದೆ" ಎಂದು ಚೈನಾ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

SCROLL FOR NEXT