ಗಲಭೆ ನಿರತ ಯೆಮನ್ 
ಪ್ರಧಾನ ಸುದ್ದಿ

ಯೆಮನ್ ಗಲಭೆ: ೧೦ ದೇಶದ ನಾಗರಿಕರನ್ನು ರಕ್ಷಿಸಿದ ಚೈನಾ

ಭಾರತವು ಒಳಗೊಂಡಂತೆ ೧೦ ದೇಶದ ನಾಗರಿಕರನ್ನು ಒಟ್ಟು ೨೨೫ ಜನರನ್ನು ಚೈನಾ ರಕ್ಷಿಸಿದೆ. ಗಲಭೆ ನಿರತ ರಾಷ್ಟ್ರದಿಂದ ವಿದೇಶಿ ನಾಗರಿಕರನ್ನು

ಬೀಜಿಂಗ್: ಭಾರತವು ಒಳಗೊಂಡಂತೆ ೧೦ ದೇಶದ ನಾಗರಿಕರನ್ನು ಒಟ್ಟು ೨೨೫ ಜನರನ್ನು ಚೈನಾ ರಕ್ಷಿಸಿದೆ. ಗಲಭೆ ನಿರತ ರಾಷ್ಟ್ರದಿಂದ ವಿದೇಶಿ ನಾಗರಿಕರನ್ನು ರಕ್ಷಿಸುವ ಮೊದಲ ಪ್ರಯತ್ನ ಚೈನಾದ್ದಾಗಿದೆ.

ಯೆಮನ್ ನ ಆಡೆನ್ ನಿಂದ ಜಿಬೂಟಿಗೆ ಪಾಕಿಸ್ತಾನದ ೧೭೬ ಜನರನ್ನು ಸೇರಿದಂತೆ ಭಾರತ, ಇಥಿಯೋಪಿಯ, ಸಿಂಗಪುರ, ಇಟಲಿ, ಜರ್ಮನಿ, ಪೋಲೆಂಡ್, ಐರ್ಲೆಂಡ್, ಬ್ರಿಟನ್, ಕೆನಡಾ ಮತ್ತು ಯೆಮನ್ ನಾಗರಿಕರನ್ನು ರಕ್ಷಿಸಿರುವ ಬಗ್ಗೆ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹ್ಯು ಚುನ್ಯಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಹಿಂದೆ ಚೈನಾ ೫೦೦ ಜನರನ್ನು ಯೆಮನ್ ನಿಂದ ರಕ್ಷಿಸಿತ್ತು.

ಈ ವಿದೇಶಿ ನಾಗರಿಕರು ನೆನ್ನೆ ಯೆಮನ್ ನಿಂದ ಜಿಬೂಟಿಗೆ ಚೈನಾದ ಯುದ್ಧನೌಕೆ ಏರಿ ಬಂದಿದ್ದಾರೆ. ವಿದೇಶಗಳ ಮನಿವಿಯ ಮೇರೆಗೆ ಮಾನವೀಯತೆಯ ದೃಷ್ಟಿಯಿಂದ ಈ ಕಾರ್ಯ ಕೈಗೊಂಡಿರುವುದಾಗಿ ಚೈನಾ ತಿಳಿಸಿದೆ.

ಇದೇ ಮೊದಲಬಾರಿಗೆ ಗಲಭೆ ನಿರತ ಪ್ರದೇಶದಿಂದ ವಿದೇಶಿಯರನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಚೈನಾ ಕೈಗೊಂಡಿರುವುದು. "ಇದು ಅಂತರಾಷ್ಟ್ರೀಯತನ ಮತ್ತು ಮಾನಾವತವಾದದಲ್ಲಿ ಚೈನಾದ ನಂಬಿಕೆಯನ್ನು ಧೃಢಪಡಿಸುತ್ತದೆ" ಎಂದು ಚೈನಾ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT