ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ 
ಪ್ರಧಾನ ಸುದ್ದಿ

ಚುನಾವಣಾ ಭರವಸೆಗಳನ್ನು ಪೂರೈಸಲು ಎಎಪಿ ವಿಫಲವಾಗಿದೆ: ಬಿಜೆಪಿ

ಚುನಾವಣೆಗೂ ಪ್ರಣಾಳಿಕೆಯಲ್ಲಿ ತಿಳಿಸಲಾಗಿದ್ದ ಮಹಿಳೆಯರಿಗೆ ಸುರಕ್ಷತೆ, ಉಚಿತ ವೈ-ಫೈ ಮುಂತಾದ ವಚನಗಳಿಗೆ ರೂಪ ನಿಡಲು ಎಎಪಿ ಸರ್ಕಾರ ವಿಫಲವಾಗಿದೆ

ನವದೆಹಲಿ: ಚುನಾವಣೆಗೂ ಪ್ರಣಾಳಿಕೆಯಲ್ಲಿ ತಿಳಿಸಲಾಗಿದ್ದ ಮಹಿಳೆಯರಿಗೆ ಸುರಕ್ಷತೆ, ಉಚಿತ ವೈ-ಫೈ ಮುಂತಾದ ವಚನಗಳಿಗೆ ರೂಪ ನಿಡಲು ಎಎಪಿ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ಪಕ್ಷದ ಎಲ್ಲ ೭ ಲೋಕಸಭಾ ಸಂಸದರು ಜಂಟಿ ಹೇಳಿಕೆ ನಿಡಿದ್ದಾರೆ.

"ಎಎಪಿ ಸರ್ಕಾರಕ್ಕೆ ಒಂದು ವರ್ಷ ತುಂಬುತ್ತಿದೆ ಆದರೆ ಅವರು ನೀಡಿದ್ದ ೭೦ ಚುನಾವಣಾ ಭರವಸೆಗಳನ್ನು ಪೂರೈಸಲು ವಿಫಲವಾಗಿದೆ" ಎಂದು ಬಿಜೆಪಿ ಸಂಸದ ಮತ್ತು ಕೆಂದ್ರ ಸಚಿವ ಹರ್ಷವರ್ಧನ್ ಹೇಳಿದ್ದಾರೆ.

ಮುಂದಿನ ವರ್ಷ ಫೆಬ್ರವರಿ ೧೪ಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸರ್ಕಾರ ಒಂದು ವರ್ಷದ ಆಡಳಿತ ಪೂರೈಸಲಿದೆ.

ದೆಹಲಿ ಸಂಸದರಿಗೆ ಎಎಪಿ ಸರ್ಕಾರ ಸರಿಯಾದ ಮರ್ಯಾದೆ ನೀಡುತ್ತಿಲ್ಲ ಎಂದು ಕೂಡ ಚಾಂದಿನಿ ಚೌಕ್ ನಿಂದ ಆಯ್ಕೆಯಾಗಿರುವ ಸಂಸದ ಹರ್ಷವರ್ಧನ್ ದೂರಿದ್ದಾರೆ.

ಮಹಿಳಾ ಸುರಕ್ಷತೆಗಾಗಿ ಯಾವುದೇ ಒಳ್ಳೆಯ ಯೋಜನೆ ರೂಪಿಸಲು ಎಎಪಿ ಪಕ್ಷ ವಿಫಲವಾಗಿದೆ ಎಂದು ಮತ್ತೊಬ್ಬ ಸಂಸದೆ ಮೀನಾಕ್ಷಿ ಲೇಕಿ ದೂರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜಮ್ಮು-ಕಾಶ್ಮೀರ: ಬುಡ್ಗಾಮ್‌ ಎನ್ ಕೌಂಟರ್ ನಲ್ಲಿ ಉಗ್ರನ ಹತ್ಯೆ; AK ರೈಫಲ್ ಮತ್ತಿತರ ಶಸ್ತ್ರಾಸ್ತ್ರಗಳು ವಶ!

ಈ ಬಾರಿಯ 'ಯುವ ದಸರಾ' ಉದ್ಘಾಟನೆಗೆ ಖ್ಯಾತ ನೃತ್ಯ ನಿರ್ದೇಶಕ ಪ್ರಭುದೇವಗೆ ಆಹ್ವಾನ!

10 ದಿನಗಳ ಬಳಿಕ ಸುರಂಗದಿಂದ ಕಾರ್ಮಿಕರ ಪವಾಡ ಸದೃಶ ರಕ್ಷಣೆ; ‘ಜಗತ್ತು ಈವರೆಗೆ ಕಂಡು ಕೇಳರಿಯದ ರಕ್ಷಣಾ ಕಾರ್ಯಾಚರಣೆ’; ತಜ್ಞ Arnold Dix

'ಭಾರತ ಕೂಡ ಸೋತಿದೆ' ಎಂದ PCB, ಮೊಹ್ಸಿನ್ ನಕ್ವಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ Iceland Cricket Board

ಹೊಲದಲ್ಲಿ ಅಪ್ರಾಪ್ತ ಬಾಲಕಿಯೊಂದಿಗೆ ಲೈಂಗಿಕ ಕ್ರಿಯೆ: ಗದರಿದ ಮಹಿಳೆಯನ್ನು ಉಸಿರುಗಟ್ಟಿಸಿ ಕೊಂದ ಯುವಕ!