ನಂದಿ ಶಿಲ್ಪ 
ಪ್ರಧಾನ ಸುದ್ದಿ

ನಾಲ್ಕು ಮುಖದ ನಂದಿ ಶಿಲ್ಪ ಪತ್ತೆ

ನಾಲ್ಕು ಮುಖಗಳಿರುವ ನಂದಿಯ ಶಿಲ್ಪವು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ...

ಮೈಸೂರು: ನಾಲ್ಕು ಮುಖಗಳಿರುವ ನಂದಿಯ ಶಿಲ್ಪವು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕು ನಾಯಕನಹಟ್ಟಿ ಹೋಬಳಿಯ ಗೌರಿಪುರದ ಉಮಾಮಹೇಶ್ವರ ದೇವಾಲಯದಲ್ಲಿ ಪತ್ತೆಯಾಗಿದೆ.

ಗೌರಿಶಂಕರ, ಉಮಾಮಹೇಶ್ವರ ದೇವಾಲಯವೆಂದು ಕರೆಯುತ್ತಿರುವ ಈ ದೇವಾಲಯವು ಗರ್ಭ ಗುಡಿ, ಸುಕನಾಸಿ, ನವರಂಗ ಹಾಗೂ ಮುಖಮಂಟಪಗಳಿಂದ ನಿರ್ಮಾಣಗೊಂಡಿದೆ. ರಾಮ, ಲಕ್ಷಣ, ಸೀತೆ, ಸರಸ್ವತಿ, ದುರ್ಗಿ, ನರಸಿಂಹ, ಆಂಜನೇಯ, ಷಣ್ಮುಖ, ಗಂಡಭೇರುಂಡ, ಗಣೇಶ, ಬೇಡರಕಣ್ಣಪ್ಪ, ಭೈರವ, ವೀರಭದ್ರ ಇನ್ನಿತರ ಶಿಲ್ಪಗಳು ಈ ದೇವಾಲಯದಲ್ಲಿರುವ ನಾಲ್ಕು ಕಂಬಗಳ ಮೇಲಿದೆ.

ಒಂದು ದೇಹ ಹಾಗೂ ನಾಲ್ಕು ಮುಖವುಳ್ಳ ನಂದಿಯ ಈ ಶಿಲ್ಪದ ಕಾಲಮಾನವು 14-15ನೇ ಶತಮಾನವಾಗಿದ್ದು, ಲೌಕಿಕ ಜೀವನದಿಂದ ಅಲೌಕಿಕ ಜೀವನದೆಡೆಗೆ ಸಾಗಬೇಕಾದ ಅಥವಾ ಕೆಳಮುಖದಿಂದ ಮೇಲ್ಮುಖದ ಕಡೆಗೆ ಚಲಿಸಬೇಕಾದ ಜೀವನ ಧರ್ಮದ ನಾಲ್ಕು ಹಂತಗಳನ್ನು ಈ ನಾಲ್ಕು ಮುಖಗಳು ಸಂಕೇತಿಸುತ್ತವೆ ಎಂದು ಈ ಶಿಲ್ಪವನ್ನು ಶೋಧಿಸಿರುವ ಮೈಸೂರು ಕುವೆಂಪುನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಎಸ್. ಜಿ ರಾಮದಾಸ ರೆಡ್ಡಿ ತಿಳಿಸಿದ್ದಾರೆ.

ಇದೇ ತರಹದ ಮೂರು ಮುಖಗಳ ಶಿಲ್ಪವು ಹರಪ್ಪಾ, ಮೊಹೆಂಜೋದಾರೋ ಭೂ ಉತ್ಖನನಗಳಲ್ಲಿ ಪತ್ತೆಯಾಗಿದ್ದು, ಇದು ಕ್ರಿ.ಪೂ 2600 ರಿಂದ 1900ರ ಕಾಲಮಾನಕ್ಕೆ ಸೇರಿದ್ದು ಎಂದು ಪುರಾತತ್ವ ಶಾಸ್ತ್ರಜ್ಞರು ಉಲ್ಲೇಖಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT