ಅಮರನಾಥ ಯಾತ್ರೆಯ ಹಿಮ ಲಿಂಗ 
ಪ್ರಧಾನ ಸುದ್ದಿ

ಅಮರನಾಥ ಯಾತ್ರೆ: ಭದ್ರತೆಯನ್ನು ಪರಿಶೀಲಿಸಲಿರುವ ರಾಜನಾಥ್ ಸಿಂಗ್

ಅಮರನಾಥ ಯಾತ್ರೆಗೆ ಮಾಡಲಾಗಿರುವ ಭದ್ರತಾ ಸೌಕರ್ಯವನ್ನು ಪರಿಶೀಲಿಸಲು ಹಾಗೂ ಹಿಮಾಯದ ಶಿವ ಗುಹಾ ದೇವಾಲಯಲ್ಲಿ ಪ್ರಾರ್ಥನೆ ಸಲ್ಲಿಸಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್

ಶ್ರೀನಗರ: ಅಮರನಾಥ ಯಾತ್ರೆಗೆ ಮಾಡಲಾಗಿರುವ ಭದ್ರತಾ ಸೌಕರ್ಯವನ್ನು ಪರಿಶೀಲಿಸಲು ಹಾಗೂ ಹಿಮಾಯದ ಶಿವ ಗುಹಾ ದೇವಾಲಯಲ್ಲಿ ಪ್ರಾರ್ಥನೆ ಸಲ್ಲಿಸಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಬುಧವಾರ ಶ್ರೀನಗರಕ್ಕೆ ೨ ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಅಮರನಾಥ ಯಾತ್ರೆ ಜುಲೈ ೨ ರಿಂದ ಪ್ರಾರಂಭವಾಗಲಿದೆ.

ಮುಖ್ಯಮಂತ್ರಿ ಮುಫ್ತಿ ಮೊಹಮದ್ ಸಯ್ಯದ್ ಮತ್ತು ರಾಜ್ಯದ ಹಿರಿಯ ಅಧಿಕಾರಿಗಳೊಂದಿಗೆ ಗೃಹಸಚಿವರು ಈ ವರ್ಷದ ಅಮರನಾಥ ಯಾತ್ರೆಯ ಭದ್ರತಾ ಸೌಕರ್ಯಗಳನ್ನು ಪರಿಶೀಲಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

"ಅವರು ಜುಲೈ ೨ ರಂದು ಪವಿತ್ರ ಅಮರನಾಥ ಸನ್ನಿಧಾನದಲ್ಲಿ ಪೂಜೆ ಸಲ್ಲಿಸಲಿರುವ ಮೊದಲ ಸರಣಿಯ ಭಕ್ತರಲ್ಲಿ ಒಬ್ಬರಾಗಿರುತ್ತಾರೆ" ಎಂದು ಕೂಡ ಹಿರಿಯ ಸರ್ಕಾರಿ ಅಧಿಕಾರಿ ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಈ ಪವಿತ್ರ ಕ್ಷೇತ್ರದ ಹಿಮಾಲಯ ಗುಹಾ ದೇವಾಲಯದ ತೀರ್ಥಯಾತ್ರೆ ಜುಲೈ ೨ ರಿಂದ ಆಗಸ್ಟ್ ೨೯ರವರೆಗೆ ೫೯ದಿನಗಳ ಕಾಲ ನಡೆಯಲಿದೆ.

ಸಮುದ್ರಮಟ್ಟದಿಮ್ದ ೧೪೫೦೦ ಅಡಿ ಎತ್ತರದಲ್ಲಿರುವ ಈ ಗುಹಾ ದೇವಾಲಯದಲ್ಲಿ ಮಾನ್ಸೂನ್ ವೇಳೆಯಲ್ಲಿ ಹಿಮ ಸ್ವಾಭಾವಿಕವಾಗಿ ಲಿಂಗದ ರೂಪ ತಾಳುತ್ತದೆ. ೩೪ ಕಿಮೀ ಸಾಂಪ್ರದಾಯಿಕ ಫಹಲ್ಗಂ ಮಾರ್ಗ ಮೂಲಕ ಈ ಪವಿತ್ರ ತಾಣಕ್ಕೆ ತೆರಳಲು ನಾಲ್ಕು ದಿನದ ಚಾರಣ ಅಗತ್ಯ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

'sir' ವಿವಾದ ಕೊನೆಗೂ ಅಂತ್ಯ: 'ಸರ್.. ನೀವು ನನ್ನ ಹಿರಿಯರು': ಕಿಚ್ಚಾ ಸುದೀಪ್ ಗೆ ಧನ್ಯವಾದ ಹೇಳಿದ ನಟ ಯಶ್!

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..': ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದಳಪತಿ ವಿಜಯ್ ಅಭಿನಯದ 'ಜನ ನಾಯಗನ್'

SCROLL FOR NEXT