ಅಮರನಾಥ ಯಾತ್ರೆಯ ಹಿಮ ಲಿಂಗ 
ಪ್ರಧಾನ ಸುದ್ದಿ

ಅಮರನಾಥ ಯಾತ್ರೆ: ಭದ್ರತೆಯನ್ನು ಪರಿಶೀಲಿಸಲಿರುವ ರಾಜನಾಥ್ ಸಿಂಗ್

ಅಮರನಾಥ ಯಾತ್ರೆಗೆ ಮಾಡಲಾಗಿರುವ ಭದ್ರತಾ ಸೌಕರ್ಯವನ್ನು ಪರಿಶೀಲಿಸಲು ಹಾಗೂ ಹಿಮಾಯದ ಶಿವ ಗುಹಾ ದೇವಾಲಯಲ್ಲಿ ಪ್ರಾರ್ಥನೆ ಸಲ್ಲಿಸಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್

ಶ್ರೀನಗರ: ಅಮರನಾಥ ಯಾತ್ರೆಗೆ ಮಾಡಲಾಗಿರುವ ಭದ್ರತಾ ಸೌಕರ್ಯವನ್ನು ಪರಿಶೀಲಿಸಲು ಹಾಗೂ ಹಿಮಾಯದ ಶಿವ ಗುಹಾ ದೇವಾಲಯಲ್ಲಿ ಪ್ರಾರ್ಥನೆ ಸಲ್ಲಿಸಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಬುಧವಾರ ಶ್ರೀನಗರಕ್ಕೆ ೨ ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಅಮರನಾಥ ಯಾತ್ರೆ ಜುಲೈ ೨ ರಿಂದ ಪ್ರಾರಂಭವಾಗಲಿದೆ.

ಮುಖ್ಯಮಂತ್ರಿ ಮುಫ್ತಿ ಮೊಹಮದ್ ಸಯ್ಯದ್ ಮತ್ತು ರಾಜ್ಯದ ಹಿರಿಯ ಅಧಿಕಾರಿಗಳೊಂದಿಗೆ ಗೃಹಸಚಿವರು ಈ ವರ್ಷದ ಅಮರನಾಥ ಯಾತ್ರೆಯ ಭದ್ರತಾ ಸೌಕರ್ಯಗಳನ್ನು ಪರಿಶೀಲಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

"ಅವರು ಜುಲೈ ೨ ರಂದು ಪವಿತ್ರ ಅಮರನಾಥ ಸನ್ನಿಧಾನದಲ್ಲಿ ಪೂಜೆ ಸಲ್ಲಿಸಲಿರುವ ಮೊದಲ ಸರಣಿಯ ಭಕ್ತರಲ್ಲಿ ಒಬ್ಬರಾಗಿರುತ್ತಾರೆ" ಎಂದು ಕೂಡ ಹಿರಿಯ ಸರ್ಕಾರಿ ಅಧಿಕಾರಿ ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಈ ಪವಿತ್ರ ಕ್ಷೇತ್ರದ ಹಿಮಾಲಯ ಗುಹಾ ದೇವಾಲಯದ ತೀರ್ಥಯಾತ್ರೆ ಜುಲೈ ೨ ರಿಂದ ಆಗಸ್ಟ್ ೨೯ರವರೆಗೆ ೫೯ದಿನಗಳ ಕಾಲ ನಡೆಯಲಿದೆ.

ಸಮುದ್ರಮಟ್ಟದಿಮ್ದ ೧೪೫೦೦ ಅಡಿ ಎತ್ತರದಲ್ಲಿರುವ ಈ ಗುಹಾ ದೇವಾಲಯದಲ್ಲಿ ಮಾನ್ಸೂನ್ ವೇಳೆಯಲ್ಲಿ ಹಿಮ ಸ್ವಾಭಾವಿಕವಾಗಿ ಲಿಂಗದ ರೂಪ ತಾಳುತ್ತದೆ. ೩೪ ಕಿಮೀ ಸಾಂಪ್ರದಾಯಿಕ ಫಹಲ್ಗಂ ಮಾರ್ಗ ಮೂಲಕ ಈ ಪವಿತ್ರ ತಾಣಕ್ಕೆ ತೆರಳಲು ನಾಲ್ಕು ದಿನದ ಚಾರಣ ಅಗತ್ಯ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT