ಖ್ಯಾತ ಕವಿ-ಚಲನಚಿತ್ರ ಗೀತರಚನಕಾರ, ರಾಜ್ಯಸಭಾ ಸಂಸದ ಜಾವೇದ್ ಅಕ್ತರ್ 
ಪ್ರಧಾನ ಸುದ್ದಿ

ನಯನತಾರ ಸೈಗಲ್ ನೋವು ಅರ್ಥವಾಗುತ್ತದೆ: ರಾಜ್ಯಸಭಾ ಸಂಸದ ಜಾವೇದ್ ಅಕ್ತರ್

ಅಸಹನೆಯಿಂದ ಕೂಡಿದ ಇತ್ತೀಚಿನ ಘಟನೆಗಳು ಭಾರತದಲ್ಲಿ ನಡೆಯುತ್ತವೆ ಎಂಬ ನಿರೀಕ್ಷೆ ಇರಲಿಲ್ಲ ಎಂದು ಖ್ಯಾತ ಕವಿ-ಚಲನಚಿತ್ರ ಗೀತರಚನಕಾರ, ರಾಜ್ಯಸಭಾ ಸಂಸದ ಜಾವೇದ್ ಅಕ್ತರ್

ನವದೆಹಲಿ: ಅಸಹನೆಯಿಂದ ಕೂಡಿದ ಇತ್ತೀಚಿನ ಘಟನೆಗಳು ಭಾರತದಲ್ಲಿ ನಡೆಯುತ್ತವೆ ಎಂಬ ನಿರೀಕ್ಷೆ ಇರಲಿಲ್ಲ ಎಂದು ಖ್ಯಾತ ಕವಿ-ಚಲನಚಿತ್ರ ಗೀತರಚನಕಾರ, ರಾಜ್ಯಸಭಾ ಸಂಸದ ಜಾವೇದ್ ಅಕ್ತರ್ ಹೇಳಿದ್ದಾರೆ.

"ಕನಿಷ್ಠ ಇಂತಹ ಸಮಾಜವನ್ನು ಯಾರು ನಿರೀಕ್ಷಿಸುವುದಿಲ್ಲ. ಇಂತಹ ಘಟನೆಗಳು ಭಾರತದಲ್ಲಿ ಘಟಿಸುತ್ತವೆ ಎಂಬ ನಿರೀಕ್ಷೆ ಇರಲಿಲ್ಲ. ಬೇರೆ ಸಮಾಜಗಳಲ್ಲಿ ಅಂತಹ ಘಟನೆಗಳು ನಡೆಯುವುದನ್ನು ಕೇಳುತ್ತಿದ್ದೆವು, ಆದರೆ ನಮ್ಮಲ್ಲಲ್ಲ. ಇಲ್ಲಿ ನಡೆಯುತ್ತಿರುವುದರ ಬಗ್ಗೆ ಯಾರಿಗೂ ಹೆಮ್ಮೆ ಇಲ್ಲ" ಎಂದು ಅಕ್ತರ್ ತಿಳಿಸಿದ್ದಾರೆ.

ಆ ಅಸಹನೆಯನ್ನು ವಿರೋಧಿಸಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಿಂದಿರುಗಿಸಿದ ಬರಹಗಾರ್ತಿ, ದೇಶದ ಪ್ರಥಮ ಪ್ರಧಾನಿ ಜವಾಹಾರ್ ಲಾಲ್ ನೆಹರು ಅವರ ಸೋದರ ಸೊಸೆ ನಯನತಾರ ಸೈಗಲ್ ಅವರ ಬೆಂಬಲಕ್ಕೆ ಜಾವೇದ್ ಅಕ್ತರ್ ನಿಂತಿದ್ದಾರೆ.

"ಅವರ ದುಖಃವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಅವರು ಜಾತ್ಯಾತೀತತೆ ಮತ್ತು ಒಳ್ಳೆಯ ಮೌಲ್ಯಗಳುಳ್ಳ ಸಂಪ್ರದಾಯದಿಂದ ಬಂದವರು. ಅವರಿಗೆ ನೋವಾಗಿರಿವುದು ಸಹಜ" ಎಂದು ಅಕ್ತರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

'ಹನೂರು ಎನ್‌ಕೌಂಟರ್': ತಮಿಳುನಾಡು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಉದಯನಿಧಿ ಸ್ಟಾಲಿನ್! ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಆಗ್ರಹ

SIR ವೇಳೆ 1.08 ಕೋಟಿಗೂ ಅಧಿಕ ಮತದಾರರು ASDDO ಪಟ್ಟಿಗೆ: ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಿಸಬೇಕು- CECಗೆ ಸಿಎಂ ಶಿವಕುಮಾರ್ ಪತ್ರ!