ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಲುಂಗಿ ಮೇಲೆತ್ತಿ ಕಟ್ಟಿದ್ದಕ್ಕೆ ದಲಿತ ಯುವಕನ ಮೇಲೆ ಹಲ್ಲೆ

೨೨ ವರ್ಷದ ದಲಿತ ಯುವಕನೊಬ್ಬ ತನ್ನ ಲುಂಗಿಯನ್ನು ಕಾಲ್ಬೆರಳು ಕಾಣದಂತೆ ಮುಚ್ಚಿ ಇಳೆ ಬಿಡದೆ ಮೇಲೆತ್ತಿ ಕಟ್ಟಿಕೊಂಡು ಕುಲಸೇಕರಪಟ್ಟಿನಂನ ಹಿಂದೂ ಉಚ್ಛಜಾತಿಯ

ತೂತುಕುಡಿ: ೨೨ ವರ್ಷದ ದಲಿತ ಯುವಕನೊಬ್ಬ ತನ್ನ ಲುಂಗಿಯನ್ನು ಕಾಲ್ಬೆರಳು ಕಾಣದಂತೆ ಮುಚ್ಚಿ ಇಳೆ ಬಿಡದೆ ಮೇಲೆತ್ತಿ ಕಟ್ಟಿಕೊಂಡು ಕುಲಸೇಕರಪಟ್ಟಿನಂನ ಹಿಂದೂ  ಉಚ್ಛಜಾತಿಯ ಬೀದಿಯನ್ನು ಹಾದುಹೋದನೆಂದು ದೂರಿ ಆ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆಯ ಹಿನ್ನಲೆಯಲ್ಲಿ ಐವರನ್ನು ಬಂಧಿಸಲಾಗಿದೆ.

ತಿರುವನೇಲಿ ಜಿಲ್ಲೆಯ ಮುನೈಂಚಿಪಟ್ಟಿಯ, ಮುನೈಂಡಿ ಎಂದು ಸಂತ್ರಸ್ತನನ್ನು ಗುರುತಿಸಲಾಗಿದೆ. ಇವರು ದಸರಾ ಹಬ್ಬದ ಸಂಭ್ರಮಕ್ಕೆ ಕುಲಸೇಕರಪಟ್ಟಿನಂ ಬೀಚಿನಲ್ಲಿದ್ದಾಗ ದುರೈ, ಆನಂದ್, ಚೆಲ್ಲ, ಸಮ್ಮುಕುಟ್ಟಿ ಮತ್ತು ಎಸಾಕಿದುರೈ ಎಂಬ ಐವರು ಇವರ ಮೇಲೆ ದಾಳಿ ನಡೆಸಿದ್ದಾರೆ. ನಿರ್ಜನ ಪ್ರದೇಶಕ್ಕೆ ಮುನೈಂಡಿಯನ್ನು ಕರೆದೊಯ್ದು ಪಿವಿಸಿ ಪೈಪುಗಳಿಮ್ದ ಥಳಿಸಿದ್ದಾರೆ. ಮುನೈಂಡಿಯವರಿಗೆ ತೀವ್ರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಂತರ ಅವರು ನೀಡಿದ ದೂರಿನ ಆಧಾರದ ಮೇಲೆ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಮೇಲಿನ ಹಲ್ಲೆ ತಡೆ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಲಾಗಿದೆ.

ಮುನೈಂಡಿ ಪಾಠ ಕಲಿಸಲು ತಾವು ಕಾಯುತ್ತಿದ್ದಾಗಿ ಈ ಹಿಂದೂ ಉಚ್ಚ ಜಾತಿಯ ಯುವಕರು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದು ಹಿಂದೂ  ಉಚ್ಛ ಜಾತಿಯವರು ವಾಸಿಸುವ ಬೀದಿಗಳಲ್ಲಿ ನಡೆಯುವಾಗ ಲುಂಗಿ ಎತ್ತಿ ಕಟ್ಟದಿರಲು ಉಳಿದ ದಲಿತರಿಗೂ ಬೆದರಿಕೆ ಹಾಕಿದ್ದಾರೆ ಎಂದು ಕೂಡ ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT