ಚೆನ್ನೈನಲ್ಲಿ ಧರೆಗುರುಳಿದ ಮರ 
ಪ್ರಧಾನ ಸುದ್ದಿ

ಚೆನ್ನೈಯಿಂದ ಗೋವಾದತ್ತ ವರ್ಧಾ ಚಂಡಮಾರುತ

ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಭಾರಿ ಆತಂಕ ಸೃಷ್ಟಿಸಿರುವ ವರ್ಧಾ ಚಂಡಮಾರುತ ಇದೀಗ ಚೆನ್ನೈಯಿಂದ ದಕ್ಷಿಣ ಗೋವಾದತ್ತ ತೆರಳುತ್ತಿದ್ದು,...

ಪಣಜಿ: ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಭಾರಿ ಆತಂಕ ಸೃಷ್ಟಿಸಿರುವ ವರ್ಧಾ ಚಂಡಮಾರುತ ಇದೀಗ ಚೆನ್ನೈಯಿಂದ ದಕ್ಷಿಣ ಗೋವಾದತ್ತ ತೆರಳುತ್ತಿದ್ದು, ಡಿಸೆಂಬರ್ 14ರಂದು ಪಣಜಿಗೆ ಅಪ್ಪಳಿಸಲಿದೆ ಎಂದು ಸೋಮವಾರ ಅಧಿಕಾರಿಗಳು ತಿಳಿಸಿದ್ದಾರೆ.
ಚೆನ್ನೈಯಿಂದ ಹೊರಟಿರುವ ವರ್ಧಾ ನಾಳೆ ಕರ್ನಾಟಕ ತಲುಪಲಿದ್ದು, ಬುಧವಾರ ಗೋವಾಗೆ ಅಪ್ಪಳಿಸಲಿದೆ ಎಂದು ಗೋವಾದಲ್ಲಿರುವ ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಎಂಎಲ್ ಶಾಹು ಅವರು ಹೇಳಿದ್ದಾರೆ.
ಇಂದು ಮಧ್ಯಾಹ್ನ ಚೆನ್ನೈಗೆ ಅಪ್ಪಳಿಸಿರುವ ವರ್ಧಾ ಚಂಡಮಾರುತದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಬಿರುಗಾಳಿ ಸಹಿತ ಭಾರಿ ಮಳೆ ಸುರಿಯುತ್ತಿದೆ.
ಧರೆಗುರುಳಿದ ಸಾವಿರಾರು ಮರಗಳು
ಇನ್ನು ಚೆನ್ನೈಗೆ ಅಪ್ಪಳಿಸಿರುವ ವರ್ಧಾ ಚಂಡಮಾರುತದ ಪರಿಣಾಮ ನಗರಾದಾದ್ಯಂತ ಸಾವಿರಾರು ಮರಗಳು ಧರೆಗುರುಳಿದ್ದು, ಮಾಜಿ ಸಿಎಂ ಜಯಲಲಿತಾ ಅವರ ನಿವಾಸ ಪೋಯಸ್ ಗಾರ್ಡನ್ ನಲ್ಲಿ 7 ಮರಗಳು ಧರೆಗುರುಳಿದ್ದು,  ಉಳಿದಂತೆ ಮಂಡವೇಲಿಯಲ್ಲಿ 23, ಗೋಪಾಲಪುರಂನಲ್ಲಿ 16, ರಾಯಪೇಟೆಯಲ್ಲಿ 59, ನುಂಗಬಾಕ್ಕಂನಲ್ಲಿ 20 ಮರಗಳು ಸೇರಿದಂತೆ ಚೆನ್ನೈನಾದ್ಯಂತ ಸಾವಿರಕ್ಕೂ ಅಧಿಕ ಮರಗಳು ಧರೆಗುರುಳಿವೆ ಎಂದು ತಿಳಿದುಬಂದಿದೆ. ಇನ್ನ  ಚಂಡಮಾರುತದಿಂದಾಗಿ ಚೆನ್ನೈನಲ್ಲಿ ಬೀಳುತ್ತಿರುವ ಭಾರಿ ಮಳೆಯಿಂದಾಗಿ ಹಲವೆಡೆ ಭೂಕುಸಿತವಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಮುಂಜಾಗ್ರತಾ ಕ್ರಮವಾಗಿ ಚೆನ್ನೈನಾದ್ಯಂತ ವಿದ್ಯುತ್ ಸ್ಥಗಿತಗೊಳಿಸಲಾಗಿದ್ದು, ಎಲ್ಲ  ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅಂತೆಯೇ ಚೆನ್ನೈನ ಎಲ್ಲ ಖಾಸಗಿ ಕಂಪನಿಗಳು ಕೂಡ ರಜೆಘೋಷಣೆ ಮಾಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳದಲ್ಲಿ ಭೀಕರ ಪ್ರವಾಹ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇಶಿಯರು ಸೇರಿ 4,000ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆ!

ನೆರೆ ಸಂತ್ರಸ್ತರಿಗೆ ನೆರವು ಹೊತ್ತು ಹೋದವರಿಗೆ ಶಾಕ್: 'ಇಲ್ಲೇ ಖರೀದಿಸಿ' ಎಂದ ನೇಪಾಳ ಅಧಿಕಾರಿಗಳು! ಆಗಿದ್ದೇನು?

ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿದ 'Batwara 1947': ಸನ್ನಿ ಡಿಯೋಲ್ ಮುಸ್ಲಿಂ ಪಾತ್ರ ಜನರಿಗೆ ಇಷ್ಟವಾಗಲಿಲ್ಲವೇ! ಶಬಾನಾ ಆಜ್ಮಿ ಹೇಳಿದ್ದೇನು?

Hit And Run: ಪಾದಚಾರಿಗೂ ಜೀವಂತವಾಗಿ ರಸ್ತೆ ದಾಟುವ ಹಕ್ಕಿದೆ: ದೆಹಲಿ ಕೋರ್ಟ್

ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಒಪ್ಪದಿದ್ದರೆ TVK ಸಂಪುಟದಿಂದ ಕಾಂಗ್ರೆಸ್ ಹೊರಬರಲಿದೆ: ಸಚಿವ