ಮದುವೆ ಮಂಟಪಕ್ಕೆ ಬುಲೆಟ್ ಬೈಕ್ ಏರಿ ಬಂದ ವಧು 
ಪ್ರಧಾನ ಸುದ್ದಿ

ಮದುವೆ ಮಂಟಪಕ್ಕೆ ಬುಲೆಟ್ ಬೈಕ್ ಏರಿ ಬಂದ ವಧು

ಅದು ಅಹಮದಾಬಾದ್ ನ ಕಲ್ಯಾಣ ಮಂಟಪ. ಅಲ್ಲಿ ಸಂಪ್ರದಾಯಸ್ಥ ಮನೆತನದ ಮದುವೆ ನಡೆಯುತ್ತಿತ್ತು. ಇನ್ನೇನು ವಧುವಿನ ಆಗಮನವಾಗಬೇಕಿತ್ತು. ಸಹಜವಾಗಿ ವಧು ಗಂಭೀರ ವದನಳಾಗಿ, ಮನದಲ್ಲಿ ದುಗುಡ ತುಂಬಿ, ಸುತ್ತಲೂ ಸ್ನೇಹಿತೆಯರ ದಂಡಿನೊಂದಿಗೆ, ಅಕ್ಕಪಕ್ಕದಲ್ಲಿ...

ಅಹಮದಾಬಾದ್: ಅದು ಅಹಮದಾಬಾದ್ ನ ಕಲ್ಯಾಣ ಮಂಟಪ. ಅಲ್ಲಿ ಸಂಪ್ರದಾಯಸ್ಥ ಮನೆತನದ ಮದುವೆ ನಡೆಯುತ್ತಿತ್ತು. ಇನ್ನೇನು ವಧುವಿನ ಆಗಮನವಾಗಬೇಕಿತ್ತು. ಸಹಜವಾಗಿ ವಧು ಗಂಭೀರ ವದನಳಾಗಿ, ಮನದಲ್ಲಿ ದುಗುಡ ತುಂಬಿ, ಸುತ್ತಲೂ ಸ್ನೇಹಿತೆಯರ ದಂಡಿನೊಂದಿಗೆ, ಅಕ್ಕಪಕ್ಕದಲ್ಲಿ ತಾಯಿತಂದೆ, ಹಿರಿಯರೊಂದಿಗೆ, ತಲೆ ತಗ್ಗಿಸಿ, ಹಗುರ ಹೆಜ್ಜೆ ಹಾಕುತ್ತ ಸಿಂಗಾರಗೊಂಡು ಬರುತ್ತಿರಬಹುದು ಎಂದು ಅಲ್ಲಿ ಸೇರಿದ್ದ ಬಂಧು ಬಾಂಧವರು ನಿರೀಕ್ಷೆಯಲ್ಲಿದ್ದರು.

ಅಷ್ಟರಲ್ಲೇ ಡುಬುಡುಬು ಡುಬು ಎಂದು ಬುಲೆಟ್ ಬೈಕ್ ಸದ್ದು ಕೇಳಿಸಿತು. ಕಲ್ಯಾಣ ಮಂಟಪದ ಬಾಗಿಲ ಕಡೆ ತಿರುಗಿ ನೋಡಿದ ಅತಿಥಿಗಳಿಗೆ ಅಚ್ಚರಿಯೋ ಅಚ್ಚರಿ. ಸಂಪ್ರದಾಯಸ್ಥಳಂತೆ ಸಿಂಗಾರಗೊಂಡಿದ್ದರೂ. ಕರಿ ಕನ್ನಡಕ ಧರಿಸಿಕೊಂಡು. ಯಮಭಾರದ ಬುಲೆಟ್ ಸವಾರಿ ಮಾಡುತ್ತ ಬಂದ ವಧುವನ್ನು ಕಂಡು ಅವರೆಲ್ಲರೂ ಅವಾಕ್ಕಾದರು.

ಅಂದ ಹಾಗೆ, ಅಕೆಯ ಹೆಸರು ಆಯೆಷಾ ಉಪಾಧ್ಯಾಯ. ರಕ್ಷಾಬಂಧನದ ಉಡುಗೊರೆಯಾಗಿ, ಮದುವೆಗೆ ಕೆಲವೇ ದಿನಗಳ ಹಿಂದೆಯಷ್ಟೇ ಸೋದರ ಆಕಗೆ 350 ಸಿಸಿಯ ರಾಯಲ್ ಎನ್ ಫೀಲ್ಡ್ ಬೈಕ್ ಅನ್ನು ಕೊಡಿಸಿದ್ದ. ಅದನ್ನೇರಿ ಕಲ್ಯಾಣ ಮಂಟಪ ಪ್ರವೇಶಿದ್ದ ಆಯೆಷಾ, ಭಾವಿ ಪತಿ ಸೇರಿದಂತೆ ಎಲ್ಲರ ಅಚ್ಚರಿಗೂ ಕಾರಣಳಾದಳು.

ಅಷ್ಟಕ್ಕೂ ಆಕೆಗೆ 13ನೇ ವಯಸ್ಸಿನಿಂದಲೇ ಬೈಕ್ ರೈಡಿಂಗ್ ಗೊತ್ತು. ಅಷ್ಟೇ ಅಲ್ಲ, ಬೈಕ್ ಗಳೆಂದರೆ ಆಕೆಗೆ ಎಲ್ಲಿಲ್ಲದ ಪ್ರೀತಿ.

ಆಯೆಷಾ ವರಿಸಿದ್ದೂ ಕೆನಡಾದಲ್ಲಿ ನೆಲೆಸಿರುವ ಲೌಕಿಕ್ ವ್ಯಾಸ್ ಎಂಬುವವರನ್ನು. ಆತ ಆಯೇಷಾಳ ಬೈಕ್ ರೈಡಿಂಗ್ ಅನ್ನು ಇಷ್ಟ ಪಟ್ಟಿದ್ದಾರಂತೆ. ಬೈಕ್ ರೈಡಿಂಗ್ ವಿಚಾರದಲ್ಲಿ ನಾನು ಹಿಂಬದಿ ಸವಾರ. ಆಯೆಷಾ ಸಂಪ್ರದಾಯಸ್ಥಳಂತೆ ಮಂಟಪಕ್ಕೆ ಬರುತ್ತಾಳೆ ಎಂದುಕೊಂಡಿದ್ದೆ. ಆದರೆ, ಆಕೆ ಬುಲೆಟ್ ಏರಿ ಬಂದಳು. ಅವಳ ಈ ಬಗೆ ವಿಶಿಷ್ಟವಾಗಿತ್ತು. ನನಗೆ ಇಷ್ಟವಾಯಿತು. ಅವಳ ಬೈಕ್ ರೈಡಿಂಗ್ ಗೆ ನನ್ನ ಸಹಮತವಿದೆ ಎಂದು ಹೇಳಿದ್ದಾರೆ.

ನನ್ನ ಸೋದರ ಮಾವನ ಬುಲೆಟ್ ಪಡೆದು, ಬುಲೆಟ್ ರೈಡರ್ ಗಳೊಂದಿಗೆ ಆಗಾಗ ದೂರದ ಪ್ರಯಾಣ ಹೋಗುವುದೆಂದರೆ ನನಗೆ ಎಲ್ಲಿಲ್ಲದ ಖೂಷಿ. ಒಂದು ಬಾರಿ ಗೋವಾಕ್ಕೂ ಹೋಗಿ ಬಂದಿದ್ದೇನೆ. ಅಷ್ಟೇ ಅಲ್ಲ, ಬುಲೆಟ್ ಬಾಬಾ ದೇವಾಲಯ ಎಂದೇ ಕರೆಸಿಕೊಳ್ಳುವ ಓಂ ಬಣ್ಣಾ ದೇವಾಲಯಕ್ಕೂ ಹೋಗಿ ಬಂದಿದ್ದೇನೆ. ಎಂದು ತನ್ನ ಬುಲೆಟ್ ಸವಾರಿಯ ಮೇಲಿನ ಪ್ರೀತಿಯನ್ನು ಆಯೆಷಾ ಹಂಚಿಕೊಂಡಿದ್ದಾಳೆ. ಕೆನಡಕ್ಕೆ ಹೋದಮೇಲೂ ನಾನು ಬೈಕ್ ರೈಡಿಂಗ್ ಮುಂದುವರಿಸುವುದಾಗಿ ಆಯೆಷಾ ಹೇಳಿಕೊಂಡಿದ್ದಾಳೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

SCROLL FOR NEXT