ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಕಲ್ಲೆಸೆಯುವ ಪ್ರತಿಭಟನಕಾರರ ಮೇಲಿನ ಬಿಜೆಪಿ ಸಚಿವನ ಪ್ರತಿಕ್ರಿಯೆ 'ಅಸಹ್ಯಕರ' ಎಂದ ಪಿಡಿಪಿ

ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಪಡೆಗಳ ಮೇಲೆ ಕಲ್ಲೆಸೆಯುವ ಪ್ರತಿಭಟನಕಾರರ ಬಗ್ಗೆ ಕೈಗಾರಿಕಾ ಸಚಿವ ಚಂದ್ರ ಪ್ರಕಾಶ್ ಗಂಗಾ ಮಾಡಿರುವ ಪ್ರತಿಕ್ರಿಯೆಗಳು 'ಅಸಹ್ಯಕರ' ಎಂದು ಜಮ್ಮು ಕಾಶ್ಮೀರದ ಆಡಳಿತ

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಪಡೆಗಳ ಮೇಲೆ ಕಲ್ಲೆಸೆಯುವ ಪ್ರತಿಭಟನಕಾರರ ಬಗ್ಗೆ ಕೈಗಾರಿಕಾ ಸಚಿವ ಚಂದ್ರ ಪ್ರಕಾಶ್ ಗಂಗಾ ಮಾಡಿರುವ ಪ್ರತಿಕ್ರಿಯೆಗಳು 'ಅಸಹ್ಯಕರ' ಎಂದು ಜಮ್ಮು ಕಾಶ್ಮೀರದ ಆಡಳಿತ ಪಿಡಿಪಿ ಪಕ್ಷ ವಾಗ್ದಾಳಿ ನಡೆಸಿದೆ. 
ಕಲ್ಲೆಸೆಯುವ ಯುವಕರ ಬಗ್ಗೆ ಪ್ರತಿಕ್ರಿಯಿಸಿದ್ದ ಬಿಜೆಪಿ ಸಚಿವ "ಯಾರು ಒದೆಸಿಕೊಳ್ಳಲು ಯೋಗ್ಯರೋ ಅವರಿಗೆ ಮಾತಿನಿಂದ ಮನದಟ್ಟು ಮಾಡಲು ಸಾಧ್ಯವಿಲ್ಲ" ಎಂದಿದ್ದರು.
ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗುವ ಕೆಲವು ಯುವಕರಿಗೆ ಭದ್ರತಾ ಪಡೆಗಳು ಥಳಿಸಿದ ಮೇಲೆ ಭಾರತದ ಪರ ಘೋಷಣೆಗಳನ್ನು ಕೂಗಿದರು ಎಂದು ಕೂಡ ಅವರು ಪ್ರತಿಕ್ರಿಯಿಸಿದ್ದರು. 
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪಿಡಿಪಿ ಉಪಾಧ್ಯಕ್ಷ ಸತ್ರಜ್ ಮದನಿ "ಈ ಅಸಹ್ಯಕರ ಮಾತುಗಳು ಸಮರ್ಥನೆಗೆ ಯೋಗವಲ್ಲವಷ್ಟೆ ಅಲ್ಲ, ಅಪಾಯಕಾರಿ ಎಂದು ಕೂಡ ಹೇಳಿದ್ದಾರೆ. ಕಾಶ್ಮೀರಿ ಯುವಕರ ಬಗ್ಗೆ ಇಂತಹ ಸಾಮಾನ್ಯವಾದ, ಅಸಹ್ಯಕರವಾದ ಮತ್ತು ಪ್ರಚೋದನಕಾರಿ ಹೇಳಿಕೆ ನೀಡುವುದು ಹಿರಿಯ ಸಚಿವರಿಗೆ ಶೋಭೆ ತರುವುದಿಲ್ಲ" ಎಂದಿದ್ದಾರೆ.
ಕಣಿವೆಯಲ್ಲಿ ಪ್ರಾಣ ಕಳೆದುಕೊಂಡ ಯುವಕರ ಬಗ್ಗೆ ದುಃಖ ವ್ಯಕ್ತಪಡಿಸಿದ ಸಂಪುಟ ನಿರ್ಧಾರಕ್ಕೆ ಸಚಿವನ ಹೇಳಿಕೆ ವಿರುದ್ಧವಾಗಿದೆ ಎಂದು ಕೂಡ ಮದನಿ ಹೇಳಿದ್ದಾರೆ. 
ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಜೊತೆಗೆ ಮುಫ್ತಿ ಮೊಹಮದ್ ಸಯೀದ್ ಸಖ್ಯ ಬೆಳೆಸಿದ್ದು ವಿವಿಧ ಭಾಗಗಳ ಜನರೊಂದಿಗಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳುವುದಕ್ಕೆ ಎಂದಿರುವ ಮದನಿ "ಜನರನ್ನು ಒಟ್ಟಿಗೆ ತರುವ ಬದಲು, ಇಂತಹ ಪ್ರಚೋದನಕಾರಿ ಹೇಳಿಕೆಗಳು ಈ ಕಂದಕವನ್ನು ಮತ್ತಷ್ಟು ಹೆಚ್ಚಿಸುತ್ತಿರುವುದು ದುರದೃಷ್ಟಕರ" ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನಟ ದೇವರಾಜ್ 2ನೇ ಪುತ್ರ ನಟ ಪ್ರಣಮ್ ನಿಶ್ಚಿತಾರ್ಥ

Nepal Floods: ನೇಪಾಳದ ವಿನಾಶಕಾರಿ ಪ್ರವಾಹಕ್ಕೆ ಇದೇನಾ ಕಾರಣ? ಉಪಗ್ರಹ ಚಿತ್ರಗಳಲ್ಲಿ ಸ್ಫೋಟಕ ಸುಳಿವು!

'Chhatron Ki Goonj' ಕಾರ್ಯಕ್ರಮದ ವೇಳೆ Rahul Gandhi ಮಾಡಿದ 29 ತಪ್ಪುಗಳ ದಾಖಲೆ ನೀಡಿದ ಜೂಟ್ ಕಿ ಗೂಂಜ್ ವೆಬ್​ಸೈಟ್!

ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕಾರ್ಯಕ್ರಮಕ್ಕೆ ವಿರೋಧ: ಮೇಯರ್ ಮಮ್ದಾನಿ ವಿರುದ್ಧ ಅಮೆರಿಕದ ಖ್ಯಾತ ಗಾಯಕಿ ಕಿಡಿ!