ಹೊನ್ನಮ್ಮನ ಸಮಾಧಿ 
ಪ್ರವಾಸ-ವಾಹನ

ಹೊನ್ನಮ್ಮನ ಸಮಾಧಿ

ಕೆರೆಗೆ ಹಾರ ಘಟನೆಗಳು ನಮ್ಮ ಹಾಡಿನ ಹಲವು ಕಡೆ ನಡೆದಿವೆ. ಊರಿಗೆ ಉಪಕಾರಿಯಾಗಿ...

ಕೆರೆಗೆ ಹಾರ ಘಟನೆಗಳು ನಮ್ಮ ಹಾಡಿನ ಹಲವು ಕಡೆ ನಡೆದಿವೆ. ಊರಿಗೆ ಉಪಕಾರಿಯಾಗಿ ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ ತ್ಯಾಗ ಮಯಿಗಳು ನಮ್ಮ ನಾಡಿನಲ್ಲಿದ್ದಾರೆ. ಅವರಲ್ಲಿ ಭಾಗೀರಥಿ, ಮದಗದ ಕೆಂಚಮ್ಮ ಹಾಗೂ ಹೊನ್ನಮ್ಮ ಪ್ರಮುಖರು.

ಕೊಡಗು ಜಿಲ್ಲೆ ಸೋಮವಾರ ಪೇಟೆಯಿಂದ 6 ಕಿ.ಮೀ ದೂರದಲ್ಲಿರುವ ದೊಡ್ಡಮಳ್ತೆ ಗ್ರಾಮದ ಹೊನ್ನಮ್ಮನ ಕೆರೆ ಐತಿಹಾಸಿಕವಾಗಿ, ಧಾರ್ಮಿಕವಾಗಿ ಪವಿತ್ರ ಸ್ಥಳವಾಗಿದೆ. ಹಿಂದೆ ಗ್ರಾಮದ ಮುಖಂಡ ಮಲನಗೌಡ ದೊಡ್ಡ ಕೆರೆಯನ್ನು ಕಟ್ಟಿಸಿದಾಗ, ಆತನ ಸೊಸೆ ಹೊನ್ನಮ್ಮ ಕೆರೆಗೆ ಹಾರವಾಗಿ ಪ್ರಾಣಾರ್ಪಣೆ ಮಾಡಿಕೊಂಡು, ಊರಿಗೆ ಉಪಕಾರಿಯಾಗಿ ಕೊಡಗು ಭಾಗದ ಜನರ ಆರಾಧ್ಯ ದೇವತೆಯಾಗಿದ್ದಾಳೆ.

ನಿತ್ಯ ಹರಿದ್ವರ್ಣದ ಹಚ್ಚಹಸಿರಿನ ಬೆಟ್ಟಗಳ ನಡುವೆ ಆಕರ್ಷಕ ಹೊನ್ನಮ್ಮ ಕೆರೆ ರೂಪುಗೊಂಡಿದೆ. ಬೆಟ್ಟದ ಸಮೀಪದಲ್ಲೊಂದು ಗುಹೆಯಿದ್ದು, ಇದನ್ನು ಪಾಂಡವರ ಗುಹೆ ಎಂದು ಕರೆಯುತ್ತಾರೆ. ತ್ರೇತಾಯುಗದಲ್ಲಿ ಪಾಂಡವರು 12 ವರ್ಷ ವನವಾಸಕ್ಕೆ ಬಂದಿದ್ದಾಗ ಈ ಗುಹೆಯಲ್ಲಿ ವಾಸವಾಗಿದ್ದರು ಎಂಬ ನಂಬಿಕೆಯಿದೆ.

ಗೌರಿ ಹಬ್ಬದ ದಿನ ಸಾವಿರಾರು ಭಕ್ತಾದಿಗಳು ಹೊನ್ನಮ್ಮನ ಕೆರೆಗೆ ಬಂದು ಶ್ರದ್ಧೆ, ಭಕ್ತಿಯಿಂದ ಪೂಜಿಸುತ್ತಾರೆ. ಹೊಸದಾಗಿ ಮದುವೆಯಾದ ನವದಂಪತಿಗಳೆಲ್ಲ ಜೊತೆಯಾಗಿ ಬಂದು ಹೊನ್ನಮ್ಮನ ಕೆರೆಗ ಬಾಗಿನ ಸಮರ್ಪಿಸುವುದು ವಿಶೇಷವಾಗಿದೆ. ಕೆರೆಯ ಪಕ್ಕದಲ್ಲಿ ಹೊನ್ನಮ್ಮದೇವಿಯ ಸುಂದರ ದೇವಸ್ಥಾನ ಕೂಡ ನಿರ್ಮಿಸಲಾಗಿದೆ

-ಸುರೇಶ ಬಸವರಾಜ, ಶಾಂತಳ್ಳಿ.


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT