ಕೇಂದ್ರದ ಪ್ರಸ್ತಾವಿತ ಕ್ಷೇತ್ರ ವಿಂಗಡಣೆಯ ಫ್ರೇಮ್ ವರ್ಕನ್ನು ಸಮರ್ಥಿಸಿಕೊಂಡ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಹೇಳಿಕೆಯನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ತಳ್ಳಿಹಾಕಿದರು.
ರಾಜ್ಯಗಳಾದ್ಯಂತ ಲೋಕಸಭಾ ಸ್ಥಾನಗಳಲ್ಲಿ ಏಕರೂಪದ ಹೆಚ್ಚಳವು ಇನ್ನೂ ದೊಡ್ಡ ರಾಜ್ಯಗಳ ಕಡೆಗೆ ರಾಜಕೀಯ ಪ್ರಭಾವವನ್ನು ವರ್ಗಾಯಿಸುತ್ತದೆ ಎಂದು ವಾದಿಸಿದರು.
ಎಲ್ಲಾ ರಾಜ್ಯಗಳ ಸಂಸದೀಯ ಸ್ಥಾನಗಳಲ್ಲಿ 50% ಹೆಚ್ಚಳವು 'ಗಣಿತದ ಭ್ರಮೆ'ಯಾಗಿದೆ ಎಂದ ತರೂರ್, ಅದು ರಾಜ್ಯಗಳ ನಡುವಿನ ರಾಜಕೀಯ ಅಸಮಾನತೆಗಳನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.
850 ಸಂಸದರನ್ನು ಹೊಂದಿರುವ ಸಂಸತ್ತು ನಿಷ್ಪ್ರಯೋಜಕವಾಗುತ್ತದೆ ಎಂದು ಶಶಿ ತರೂರ್ ಅಭಿಪ್ರಾಯಪಟ್ಟರು. ವಿಡಿಯೋ ಇಲ್ಲಿದೆ ನೋಡಿ.