ಬ್ರಿಟನ್ ನಲ್ಲಿ ಸ್ಕೈಪ್ ಮೂಲಕ ಅಪ್ರಾಪ್ತ ಮುಸ್ಲಿಂ ಯುವತಿಯರಿಗೆ ಒತ್ತಾಯಪೂರ್ವಕ ವಿವಾಹ! 
ವಿದೇಶ

ಬ್ರಿಟನ್ ನಲ್ಲಿ ಸ್ಕೈಪ್ ಮೂಲಕ ಅಪ್ರಾಪ್ತ ಮುಸ್ಲಿಂ ಯುವತಿಯರಿಗೆ ಒತ್ತಾಯಪೂರ್ವಕ ವಿವಾಹ!

ಗಂಧರ್ವ ವಿವಾಹ, ಪ್ರೇಮ ವಿವಾಹ, ಹೀಗೆ ವಿವಿಧ ರೀತಿಯ ವಿವಾಹಗಳ ಬಗ್ಗೆ ಕೇಳಿರುತ್ತೀರಿ, ಆದರೆ ಸ್ಕೈಪ್ ವಿವಾಹದ ಬಗ್ಗೆ ಎಲ್ಲಾದರೂ ಕೇಳಿದ್ದೀರಾ? ಇಲ್ಲ ಅಲ್ವಾ? ಇಂಥದ್ದೊಂದು ವಿವಾಹ ಬ್ರಿಟನ್ ನಲ್ಲಿ ನಡೆಯುತ್ತಿದೆ!.

ಲಂಡನ್: ಗಂಧರ್ವ ವಿವಾಹ, ಪ್ರೇಮ ವಿವಾಹ, ಹೀಗೆ ವಿವಿಧ ರೀತಿಯ ವಿವಾಹಗಳ ಬಗ್ಗೆ ಕೇಳಿರುತ್ತೀರಿ, ಆದರೆ ಸ್ಕೈಪ್ ವಿವಾಹದ ಬಗ್ಗೆ ಎಲ್ಲಾದರೂ ಕೇಳಿದ್ದೀರಾ? ಇಲ್ಲ ಅಲ್ವಾ? ಇಂಥದ್ದೊಂದು ವಿವಾಹ ಬ್ರಿಟನ್ ನಲ್ಲಿ ನಡೆಯುತ್ತಿದೆ!.
ಅಪ್ರಾಪ್ತ ಮುಸ್ಲಿಂ ಯುವತಿಯರಿಗೆ ಧರ್ಮ ಗುರುಗಳಾಗಿರುವ ಇಮಾಮ್ ಗಳು ಸ್ಕೈಪ್ ಮೂಲಕ ಮಾಡುವೆ ಮಾಡಿಸುತ್ತಿದ್ದಾರೆ ಎಂಬ ವರದಿ ಬಹಿರಂಗವಾಗಿದೆ. ಬ್ರಿಟನ್ ನಲ್ಲಿ ಒತ್ತಾಯ ಪೂರ್ವಕ ಮದುವೆಗೆ ನಿಷೇಧ ವಿಧಿಸಿದ್ದರೂ ಮುಸ್ಲಿಂ ಯುವತಿಯರು ತೀರಾ ಪಾಶ್ಚಿಮಾತ್ಯ ಸಂಸ್ಕೃತಿಗೆ ಹೊಂದಿಕೊಳ್ಳುವುದನ್ನು ತಡೆಗಟ್ಟಲು ಸ್ಕೈಪ್ ಮೂಲಕ ವಿವಾಹ ನಿಶ್ಚಯ ಮಾಡಲಾಗುತ್ತಿದೆ ಎಂದು ಫ್ರೀಡಂ ಚಾರಿಟಿಯ ಸಂಸ್ಥಾಪಕ ಅನಿತಾ ಪ್ರೇಮ್ ಹೇಳಿದ್ದಾರೆ.
ಬ್ರಿಟನ್ ನಲ್ಲಿರುವ ಮುಸ್ಲಿಂ ಯುವತಿಯನ್ನು ವಿವಾಹವಾಗುವ ಯುವಕನಿಗೆ ವೀಸಾ ಕೊಡಿಸುವ ಭರವಸೆಯೊಂದಿಗೆ ಸ್ಕೈಪ್ ನಲ್ಲಿ ವಿವಾಹ ನಿಶ್ಚಯವಾಗುತ್ತದೆ. ಸ್ಕೈಪ್ ಮೂಲಕ ವಿವಾಹವಾಗುತ್ತಿದ್ದಂತೆಯೇ ಸಂಗಾತಿಯ ದೇಶದ ವೀಸಾ ಪಡೆಯುವುದಕ್ಕೆ ಒತ್ತಡ ಹೆಚ್ಚುತ್ತದೆ. ಇದರಿಂದಾಗಿ ವಿವಾಹವಾದ ಯುವತಿ ಪತಿಯ ದೇಶಕ್ಕೆ ಭೇಟಿ ನೀಡಿ ಗರ್ಭಧರಿಸುವಂತೆ ಒತ್ತಾಯಿಸಲಾಗುತ್ತದೆ.  ಬ್ರಿಟನ್ ಯುವತಿ ವಿವಾಹವಾದ ಯುವಕನನ್ನು ವಾಪಸ್ ಕರೆತರುವುದನ್ನು ಕಾನೂನುಬದ್ಧಗೊಳಿಸಲು ಈ ಕ್ರಮ ಅನುಸರಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಇಂಥದ್ದೇ ಒಂದು ಪ್ರಕರಣಾದಲ್ಲಿ 11 ವರ್ಷದ ಬ್ರಿಟನ್ ಯುವತಿಗೆ ಬಾಂಗ್ಲಾದೇಶದ 25 ವರ್ಷದ ಯುವಕನೊಂದಿಗೆ ಸ್ಕೈಪ್ ಮೂಲಕ ವಿವಾಹ ಮಾಡಿಸಲಾಗಿದೆ. ಸ್ಕೈಪ್ ಮೂಲಕ ವಿವಾಹವಾದ ಸಂದರ್ಭದಲ್ಲಿ ಯುವತಿಗೆ ಅದರ ಬಗ್ಗೆ ಸ್ಪಷ್ಟ ಅರಿವಿರುವುದಿಲ್ಲ. ಸ್ಕೈಪ್ ಮೂಲಕ ವಿವಾಹವಾದ ನಂತರ ಯುವತಿ ಪತಿಯನ್ನು ಭೇಟಿ ಮಾಡಬೇಕಿರುತ್ತದೆ. ಇದಕ್ಕೂ ಮುನ್ನ ತನ್ನ ಹಿರಿಯ ಸಹೋದರನಿಗೆ ಶಾಲೆಯಲ್ಲಿ ನೀಡಲಾಗಿದ್ದ ಪುಸ್ತಕದಲ್ಲಿ ಒತ್ತಾಯ ಪೂರ್ವಕ ವಿವಾಹದ ಬಗ್ಗೆ ತಿಳಿದು ಫ್ರೀಡಂ ಚಾರಿಟಿಯನ್ನು ಸಂಪರ್ಕಿಸಿದ್ದಾಳೆ. ಈ ಪ್ರಕರಣದಿಂದ ಸ್ಕೈಪ್ ವಿವಾಹ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. 
ಯಾವುದೇ ಧರ್ಮದಲ್ಲಿ ಒತ್ತಾಯಪೂರ್ವಕ ವಿವಾಹವನ್ನು ಒಪ್ಪುವುದಿಲ್ಲ. ಯುವತಿಯರನ್ನು ನಿಯಂತ್ರಿಸಲು ಕೆಲವು ಪೋಷಕರು ಇಂತಹ ಕ್ರಮ ಅನುಸರಿಸುತ್ತಿದ್ದಾರೆ ಎಂದು ಅನಿತಾ ಪ್ರೇಮ್ ಹೇಳಿದ್ದಾರೆ.  ಕಳೆದ ವರ್ಷ  14 ಶಾಲೆಗಳಿಂದ ಇಂಥದ್ದೇ 38 ಪ್ರಕರಣಗಳು ಬೆಳಕಿಗೆ ಬಂದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!