ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 
ವಿದೇಶ

ಹೆಚ್1-ಬಿ ವೀಸಾಕ್ಕೆ ಕಡಿವಾಣ: 'ಅಮೆರಿಕಾದ ವಸ್ತುಗಳನ್ನೇ ಕೊಳ್ಳಿ, ಅಮೆರಿಕನ್ನರನ್ನೇ ನೇಮಿಸಿ' ಆದೇಶಕ್ಕೆ ಟ್ರಂಪ್ ಸಹಿ

ಭಾರತೀಯ ಐಟಿ ಉದ್ಯೋಗಿಗಳ ಅಮೆರಿಕ ಕನಸಿಗೆ ರಹದಾರಿಯಾಗಿರುವ, ಬಹುಬೇಡಿಕೆಯ ಹೆಚ್1-ಬಿ ವೀಸಾಕ್ಕೆ ಕಡಿವಾಣ ಹಾಕುವ ಕಾರ್ಯಕಾರಿ ಆದೇಶವೊಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ಸಹಿ ಹಾಕಿದ್ದಾರೆ...

ವಾಷಿಂಗ್ಟನ್: ಭಾರತೀಯ ಐಟಿ ಉದ್ಯೋಗಿಗಳ ಅಮೆರಿಕ ಕನಸಿಗೆ ರಹದಾರಿಯಾಗಿರುವ, ಬಹುಬೇಡಿಕೆಯ ಹೆಚ್1-ಬಿ ವೀಸಾಕ್ಕೆ ಕಡಿವಾಣ ಹಾಕುವ ಕಾರ್ಯಕಾರಿ ಆದೇಶವೊಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ಸಹಿ ಹಾಕಿದ್ದಾರೆ. 
ಟ್ರಂಪ್ ಕಠಿಣ ನಿರ್ಣಯದಿಂದಾಗಿ ಭಾರತೀಯರು ಸೇರಿ ವಿದೇಶಿಯರಿಗೆ ಹೆಚ್1-ಬಿ ವೀಸಾ ದುರ್ಲಭವಾಗುವ ಸಂಭವವಿದೆ. ಅಮೆರಿಕನ್ನರಿಗೆ ಉದ್ಯೋಗ ದೊರಕಿಸಿಕೊಡುವ ಉದ್ದೇಶದೊಂದಿಗೆ ಟ್ರಂಪ್ ಅವರು ಈ ಕ್ರಮವನ್ನು ಕೈಗೊಂಡಿದ್ದಾರೆ. 
ಅಮೆರಿಕ ಸಂಸತ್ತಿನ ಕೆಳಮನೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನ ಸ್ಪೀಕರ್ ಪಾಲ್ ರ್ಯಾನ್ ಅವರ ತವರು ರಾಜ್ಯ ವಿಸ್ಕಾನ್ಸಿನ್ ನಲ್ಲಿರುವ ಮಿಲ್ವೌಕಿಗೆ ತೆರಳಿದ ಟ್ರಂಪ್ ಅವರು 'ಅಮೆರಿಕಾದ ವಸ್ತುಗಳನ್ನೇ ಕೊಳ್ಳಿ, ಅಮೆರಿಕನ್ನರನ್ನೇ ನೇಮಿಸಿ' ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ. 
ಅಧ್ಯಾದೇಶಕ್ಕೆ ಸಹಿ ಹಾಕಿದ ಬಳಿಕ ಮಾತನಾಡಿರುವ ಟ್ರಂಪ್ ಅವರು, ಅಮೆರಿಕನ್ನದ ಉದ್ಯೋಗಗಳನ್ನುವಿದೇಶಿಗರು ಕಸಿದುಕೊಳ್ಳುವುದಕ್ಕೆ ಕಡಿವಾಣ ಹಾಕುವ ಸಲುವಾಗಿ ಈ ಆದೇಶವನ್ನು ಹೊರಡಿಸಲಾಗಿದೆ. ಅಮೆರಿಕನ್ನರು ಅಮೆರಿಕ ವಸ್ತುಗಳನ್ನೇ ಖರೀದಿಸಲು ಪ್ರೋತ್ಸಾಹವನ್ನು ನೀಡುವ ಅಂಶವನ್ನು ಈ ಆದೇಶ ಹೊಂದಿದೆ. ಹೊಸ ಆದೇಶ ಅಮೆರಿಕ ಟೆಕ್ನಾಲಜಿ ಕಂಪನಿಗಳು ಮಾಡಿಕೊಳ್ಳುತ್ತಿದ್ದ ವೀಸಾ ದುರ್ಬಳಕೆಗೆ ಕಡಿವಾಣ ಹಾಕಲಿದೆ. ನಮ್ಮ ಉದ್ಯೋಗಿಗಳನ್ನು ನಾವು ಸಮರ್ಥಿಸಿಕೊಳ್ಳುತ್ತೇವೆ. ನಮ್ಮ ಉದ್ಯೋಗವನ್ನು ರಕ್ಷಿಸಿಕೊಂಡು ಮೊದಲು ಅಮೆರಿಕನ್ನರಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ. 
ಟ್ರಂಪ್ ಹೊರಡಿಸಿರುವ ಕಾರ್ಯಕಾರಿ ಆದೇಶದಿಂದಾಗಿ ಕೆಳ ಹಂತದ ನೌಕರರ ಬದಲಾಗಿ ಅತ್ಯಂತ ನುರಿತ ಅಥವಾ ಅತೀ ಹೆಚ್ಚು ವೇತನ ಪಡೆಯುವ ವಿದೇಶಿ ನೌಕರರಿಗೆ ಮಾತ್ರವೇ ಹೆಚ್1-ಬಿ ವೀಸಾ ದೊರೆಯಲಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವು ಇಲ್ಲಿ ಹುಟ್ಟೋದು ಬೇಡ ನಿಮ್ಮ ಕ್ಷೇತ್ರದ ಶೇ. 75 ರಷ್ಟಾದರೂ ಇಲ್ಲಿ ಅಭಿವೃದ್ಧಿ ಮಾಡಿ: ಡಿಕೆಶಿಗೆ ಖರ್ಗೆ ಟಾಂಗ್

ಯಶ್ 'ಟಾಕ್ಸಿಕ್' ಟೀಸರ್ ವಿರುದ್ಧ ಮಹಿಳಾ ಆಯೋಗಕ್ಕೆ ಎಎಪಿ ದೂರು; ಆ ದೃಶ್ಯಕ್ಕೆ ಆಕ್ಷೇಪ!

ಟ್ರಂಪ್ ಗೆ 'ಮರೆಯಲಾಗದ ಪಾಠ' ಕಲಿಸುತ್ತೇವೆ: ಖಡಕ್ ವಾರ್ನಿಂಗ್ ನೀಡಿದ ಇರಾನ್ ಸಂಸತ್ ಸ್ಪೀಕರ್!

ಲೂಟಿಕೋರನ ಭಯವೇ? ಖರ್ಗೆಯವರೇ, ಭಿಕ್ಷೆ ಬೇಡುವ 'ದಯನೀಯ ಸ್ಥಿತಿ' ಬರಬಾರದಿತ್ತು! ಜೆಡಿಎಸ್ ಟಾಂಗ್

ಕುರ್ಚಿ ಕದನ: ಡಿಕೆಶಿ ಸಿಎಂ ಆಗುವುದು ಯಾವಾಗ?; ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ

SCROLL FOR NEXT