ಕೆನಡಾ ಪ್ರಧಾನಿ 
ವಿದೇಶ

ಕೆನಡಾದ ಡಬಲ್ ಗೇಮ್: ಒಂದೆಡೆ ರೈತರಿಗೆ ಬೆಂಬಲ; ಮತ್ತೊಂದೆಡೆ ಕನಿಷ್ಟ ಬೆಂಬಲ ಬೆಲೆಗೆ ಡಬ್ಲ್ಯೂಟಿಒದಲ್ಲಿ ವಿರೋಧ!

ಭಾರತದಲ್ಲಿ ರೈತರು ಪ್ರತಿಭಟನೆ ಮಾಡುತ್ತಿರುವುದನ್ನು ಬೆಂಬಲಿಸಿರುವ ಕೆನಡಾ, ಆ ರೈತರು ಯಾವುದಕ್ಕಾಗಿ ಬೇಡಿಕೆ ಇಡುತ್ತಿದ್ದಾರೋ ಅದನ್ನೇ ವಿರೋಧಿಸುವಂತಹ ನಿಲುವನ್ನು ಜಾಗತಿಕ ವೇದಿಕೆಯಲ್ಲಿ ಸ್ಪಷ್ಟವಾಗಿ ತಳೆದಿದೆ. 

ನವದೆಹಲಿ: ಭಾರತದಲ್ಲಿ ರೈತರು ಪ್ರತಿಭಟನೆ ಮಾಡುತ್ತಿರುವುದನ್ನು ಬೆಂಬಲಿಸಿರುವ ಕೆನಡಾ, ಆ ರೈತರು ಯಾವುದಕ್ಕಾಗಿ ಬೇಡಿಕೆ ಇಡುತ್ತಿದ್ದಾರೋ ಅದನ್ನೇ ವಿರೋಧಿಸುವಂತಹ ನಿಲುವನ್ನು ಜಾಗತಿಕ ವೇದಿಕೆಯಲ್ಲಿ ಸ್ಪಷ್ಟವಾಗಿ ತಳೆದಿದೆ. 

ಒಂದೆಡೆ ಭಾರತಕ್ಕೆ ಉಪದೇಶ ಮಾಡುತ್ತಾ, ರೈತರ ಶಾಂತಿಯುತ ಪ್ರತಿಭಟನೆಯನ್ನು ಬೆಂಬಲಿಸ್ತೀವಿ ಅಂತೆಲ್ಲಾ ಹೇಳುತ್ತಿರುವ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಈಗ ಡಬ್ಲ್ಯೂಟಿಒ (ವರ್ಲ್ಡ್ ಟ್ರೇಡ್ ಆರ್ಗನೈಸೇಷನ್) ನಲ್ಲಿ ಕನಿಷ್ಟ ಬೆಂಬಲ ಬೆಲೆ ಸೇರಿದಂತೆ ಡಬ್ಲ್ಯೂಟಿಒದಲ್ಲಿ ರೈತರ ಹಿತಾಸಕ್ತಿಗೆ ವಿರುದ್ಧವಾಗಿ ಭಾರತದ ನೀತಿಗಳನ್ನು ಟೀಕಿಸುತ್ತಾ ಬಂದಿದೆ.

ಭಾರತ ಕೆನಡಾದ ದ್ವಿಮುಖ ನೀತಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಕೆನಡಾ ಭಾರತದಲ್ಲಿನ ರೈತರ ಪ್ರತಿಭಟನೆಯನ್ನು ಕೇವಲ ರಾಜಕೀಯ ಕಾರಣಗಳಿಗಾಗಿ ಮಾತ್ರ ಬಳಸಿಕೊಳ್ಳುತ್ತಿದೆ ಎಂದು ಅಸಮಾಧಾನ ತೋರಿದೆ.

ಒಂದೆಡೆ ಭಾರತದ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುತ್ತಿರುವ ಕೆನಡಾ, ಡಬ್ಲ್ಯುಟಿಒ ನ್ನಲ್ಲಿ ಭಾರತ ತನ್ನ ರೈತರಿಗೆ ಕೃಷಿ ಸಂಬಂಧಿತ ಬೆಂಬಲ ನೀತಿಗಳನ್ನು ತೀವ್ರವಾಗಿ ಟೀಕಿಸುತ್ತಿದೆ.

ಭಾರತವೂ ಸೇರಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳು ಡಬ್ಲ್ಯುಟಿಒದ ಅಗ್ರಿಮೆಂಟ್ ಆನ್ ಅಗ್ರಿಕಲ್ಚರ್ (ಎಒಎ) ನಲ್ಲಿ ಸುಧಾರಣೆ ತರಲು ಒತ್ತಾಯಿಸುತ್ತಿವೆ. 164 ರಾಷ್ಟ್ರಗಳ ಪೈಕಿ 32 ರಾಷ್ಟ್ರಗಳಿಗೆ ಮಾತ್ರವಷ್ಟೇ ಸಿಗುತ್ತಿರುವ ಎಫ್ ಬಿಟಿಟಿ-ಎಎಂಎಸ್ ಸಬ್ಸಿಡಿಗಳನ್ನು ತೆಗೆದುಹಾಕುವ ಬೇಡಿಕೆಯೂ ಈ ಸುಧಾರಣೆಗಳ ಪೈಕಿ ಒಂದಾಗಿದೆ, ಎಒಎ ನಲ್ಲಿ ಈಗಿರುವ ಅಸಮತೋಲನವನ್ನು ಸರಿದೂಗಿಸಲು ಡಬ್ಲ್ಯುಟಿಒ ಸದಸ್ಯ ರಾಷ್ಟ್ರಗಳು ಒಮ್ಮತಕ್ಕೆ ಬರಲು ಈವರೆಗೂ ಸಾಧ್ಯವಾಗಿಲ್ಲ.  

ಜಾಗತಿಕ ಮಟ್ಟದಲ್ಲಿ ವ್ಯಾಪಾರ ವಹಿವಾಟುಗಳಿಗೆ ಪರಿಣಾಮ ಬೀರುವ ದೇಶೀಯವಾಗಿ ಕೃಷಿಗೆ ಸಂಬಂಧಿಸಿದ ನೀತಿಗಳನ್ನು ಅಮೆರಿಕ, ಕೆನಡಾ, ಯುರೋಪಿಯನ್ ಯೂನಿಯನ್ ಸೇರಿದಂತೆ ಅನೇಕ ರಾಷ್ಟ್ರಗಳು ವಿರೋಧಿಸುತ್ತಿದ್ದು, ಚೀನಾ, ಭಾರತ, ಇಂಡೋನೇಷ್ಯಾ ಸೇರಿದಂತೆ ಅನೇಕ ರಾಷ್ಟ್ರಗಳನ್ನು ದೂಷಿಸುತ್ತಿವೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೈಸೂರಿನಲ್ಲಿ ರಾಹುಲ್ ಗಾಂಧಿ ಜತೆ ಸಿದ್ದರಾಮಯ್ಯ, ಡಿಕೆಸಿ ಮಹತ್ವದ ಚರ್ಚೆ; ಬಳಿಕ ಸಿಎಂ ಹೇಳಿದ್ದೇನು? Video

'Ground Ops ಗಾಗಿ ಭಾರತೀಯ ಸೇನೆ ಸಂಪೂರ್ಣ ಸಜ್ಜು: ಪಾಕ್ ಗೆ ವಾರ್ನಿಂಗ್ ನೀಡಿದ ಸೇನಾ ಮುಖ್ಯಸ್ಥ ದ್ವಿವೇದಿ!

ಬ್ಲಿಂಕಿಟ್, ಸ್ವಿಗ್ಗಿ, ಜೆಪ್ಟೊಗೆ 10 ನಿಮಿಷಗಳ ಡೆಲಿವರಿ ಸೇವೆ ನಿಲ್ಲಿಸುವಂತೆ ಸರ್ಕಾರ ಸೂಚನೆ; ಯಾಕೆ ಗೊತ್ತಾ?

'ಹಾವು ಕಚ್ಚಿದೆ ಬೇಗ ಚಿಕಿತ್ಸೆ ಕೊಡಿ'; ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂದ ಆಟೋ ಚಾಲಕ, Video

ಜಮ್ಮು-ಕಾಶ್ಮೀರ: ಇದೇ ಮೊದಲು, ಮಸೀದಿಯ ಇಮಾಮ್ ಸೇರಿದಂತೆ ಎಲ್ಲರ ವೈಯಕ್ತಿಕ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು! ಕಾರಣವೇನು ಗೊತ್ತಾ?

SCROLL FOR NEXT