ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಪಡೆಯ ಸೈನಿಕರು ತಾಲೀಮು ನಡೆಸುತ್ತಿರುವುದು 
ವಿದೇಶ

ತಾಲಿಬಾನ್ ವಿರೋಧಿ ಬಣ ಹೋರಾಟಕ್ಕೆ ಸಜ್ಜು: ಮುಜಾಹಿದೀನ್ ಕಮಾಂಡರ್ ಪುತ್ರನಿಂದ ಹೊಸ ಸಂಘಟನೆ

ಮುಜಾಹಿದೀನ್ ಕಮ್ಯಾಂಡರ್ ಶಾ ಮಸೂದ್ ಪುತ್ರ ಅಹಮದ್ ಮಸೂದ್ ತಾಲಿಬಾನ್ ವಿರುದ್ಧ 9,000 ಮಂದಿ ಹೋರಾಟಗಾರರ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಎನ್ನುವ ನೂತನ ಪಡೆಯನ್ನು ಕಟ್ಟಿಕೊಂಡಿರುವುದಾಗಿ ತಿಳಿದುಬಂದಿದೆ. ಆಫ್ಘನ್ ಭದ್ರತಾಪಡೆಗಳ ಸೈನಿಕರು, ಸಮಾನಮನಸ್ಕರು ನೂತನ ಸಂಘಟನೆ ಸೇರಲು ಮುಂದಾಗಿದ್ದಾರೆ.

ಕಾಬೂಲ್: ತಾಲಿಬಾನ್ ವಿರುದ್ಧ ಸೋತು ತೆರೆಮರೆಗೆ ಸರಿದಿರುವ ಆಫ್ಘನ್ ಭದ್ರತಾಪಡೆಗಳ ಸೈನಿಕರು ಹಾಗೂ ಸಮಾನಮನಸ್ಕರು ತಾಲಿಬಾನ್ ವಿರುದ್ಧ ಹೋರಾಟ ಜಾರಿಯಲ್ಲಿಡಲು ಪರ್ಯಾಯ ಸಂಘಟನೆಯನ್ನು ಕಟ್ಟುತ್ತಿದೆ ಎನ್ನುವ ವರದಿ ಬಹಿರಂಗವಾಗಿದೆ. ಅದಕ್ಕೆ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಎಂದು ಹೆಸರಿಡಲಾಗಿದೆ. ಅದರ ಮೂಲಕ ದೇಶದಲ್ಲಿ ತಾಲಿಬಾನ್ ಆಡಳಿತ ನಡೆಸಿದರೂ ಅದಕ್ಕೆ ವಿರೋಧಿ ಬಣ ಹುಟ್ಟು ಹಾಕುವ ಪ್ರಕ್ರಿಯೆಗೆ ಚಾಲನೆ ದೊರೆತಂತಾಗಿದೆ. ತಾಲಿಬಾನಿಗೆ ನೆಮ್ಮದಿಯಿಂದ ರಾಜ್ಯಭಾರ ಮಾಡದಂತೆ ಮಾಡುಬೇಕು ಎನ್ನುವುದು ಈ ಸಂಘಟನೆಯ ಧ್ಯೇಯವಾಗಿರಲಿದೆ. ತಾಲಿಬಾನ್ ವಿರೋಧಿ ಬಣ ಕಟ್ಟುವುದಕ್ಕೂ ಮೊದಲು ತಾವು ತಾಲಿಬಾನ್ ಜೊತೆ ಮಾತುಕತೆ ನಡೆಸುವುದಾಗಿ ನೂತನ ಸಂಘಟನೆಯ ವಕ್ತಾರರು ತಿಳಿಸಿದ್ದಾರೆ. 

ಮಾತುಕತೆಯ ಮುಖ್ಯ ಉದ್ದೇಶ ತಾಲಿಬಾನ್ ಸರ್ಕಾರ ರಚಿಸುವಾಗ ಎಲ್ಲರನ್ನೂ ಗಣನೆಗೆ ತೆಗೆದುಕೊಳ್ಳಬೇಕು, ರಕ್ತಪಾತ ನಡೆಯಬಾರದು. ಒಂದುವೇಳೆ ತಾಲಿಬಾನ್ ತನ್ನ ಷರತ್ತುಗಳಿಗೆ ಒಪ್ಪದಿದ್ದರೆ ದೇಶಾದ್ಯಂತ ತಾಲಿಬಾನ್ ವಿರುದ್ಧ ಚಳವಳಿ ಹುಟ್ಟು ಹಾಕುವುದಾಗಿ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ (ಎನ್ ಆರ್ ಎಫ್) ತಿಳಿಸಿದೆ.

ತಾಲಿಬಾನ್ ದೇಶವನ್ನು ತನ್ನ ವಶಕ್ಕೆ ಪಡೆದುಕೊಂಡಾಗಿನಿಂದ ಆಫ್ಘನ್ ಭದ್ರತಾ ಪಡೆ ಸಿಬ್ಬಂದಿ ಪಂಜ್ ಶೀರ್ ಎಂಬಲ್ಲಿ ನೆಲೆ ಕಂಡುಕೊಂಡಿದ್ದರು. ಇದೀಗ ಸಾವಿರಾರು ಮಂದಿ ನಾಗರಿಕರು ಅವರಿಗೆ ಬೆಂಬಲ ಕೋರಿ ನೂತನ ಸಂಘಟನೆ ಸೇರಲು ಮುಂದಾಗಿದ್ದಾರೆ. ಮುಜಾಹಿದೀನ್ ಕಮ್ಯಾಂಡರ್ ಶಾ ಮಸೂದ್ ಪುತ್ರ ಅಹಮದ್ ಮಸೂದ್ ತಾಲಿಬಾನ್ ವಿರುದ್ಧ 9,000 ಮಂದಿ ಹೋರಾಟಗಾರರ ಈ ಪಡೆಯನ್ನು ಕಟ್ಟಿಕೊಂಡಿರುವುದಾಗಿ ತಿಳಿದುಬಂದಿದೆ. 2001ರ ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ದಾಳಿಗೂ ಮುನ್ನ ಶಾ ಮಸೂದ್ ನನ್ನು ಅಲ್ ಖೈದಾ ಹತ್ಯೆ ಮಾಡಿತ್ತು. 

ಇದೀಗ ಆತನ ಪುತ್ರ ಅಹಮದ್ ಮಸೂದ್ ಮೂದಾಳತ್ವದಲ್ಲಿ ಆತನ ನೂತನ ಸಂಘಟನೆಯ ಹೋರಾಟಗಾರರು ತಾಲೀಮು ನಡೆಸುತ್ತಿರುವ ಫೋಟೋ ಬಿಡುಗಡೆಯಾಗಿದ್ದು ಸಂಚಲನ ಸೃಷ್ಟಿಸಿದೆ.  
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT