ಡಾ. ವಿವೇಕ್ ಮೂರ್ತಿ 
ವಿದೇಶ

ಭಾರತದಲ್ಲಿ ಎರಡನೇ ಅಲೆ ಒಂದು ದುರಂತ: ಅಮೆರಿಕದ ಸರ್ಜನ್ ಜನರಲ್ ಡಾ. ವಿವೇಕ್ ಮೂರ್ತಿ

ಭಾರತದಲ್ಲಿನ ಕೋವಿಡ್-19 ಎರಡನೇ ಅಲೆ ಒಂದು ದುರಂತ ಎಂದು ಹೇಳಿರುವ ಅಮೆರಿಕದ ಸರ್ಜನ್ ಜನರಲ್ ಡಾ. ವಿವೇಕ್ ಮೂರ್ತಿ, ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶಗಳು ಪರಸ್ಪರ ಸಹಾಯ ಮಾಡುವ ಅವಶ್ಯಕತೆಯಿದೆ ಎಂದು ಒತ್ತಿ ಹೇಳಿದ್ದಾರೆ.

ವಾಷಿಂಗ್ಟನ್:  ಭಾರತದಲ್ಲಿನ ಕೋವಿಡ್-19 ಎರಡನೇ ಅಲೆ ಒಂದು ದುರಂತ ಎಂದು ಹೇಳಿರುವ ಅಮೆರಿಕದ ಸರ್ಜನ್
ಜನರಲ್ ಡಾ.ವಿವೇಕ್ ಮೂರ್ತಿ, ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶಗಳು ಪರಸ್ಪರ ಸಹಾಯ ಮಾಡುವ ಅವಶ್ಯಕತೆಯಿದೆ ಎಂದು
ಒತ್ತಿ ಹೇಳಿದ್ದಾರೆ.

ಕೋವಿಡ್ -19 ನಮಗೆ ಏನನ್ನಾದರೂ ಕಲಿಸಿದ್ದರೆ, ಅದು ಪರಸ್ಪರ ಸಹಕಾರದ ಅಗತ್ಯತೆಯಿಂದ ಸಾಂಕ್ರಾಮಿಕದಿಂದ 
ಹೊರಬರುವುದಾಗಿದೆ. ಒಂದು ವಿಶ್ವವಾಗಿ ನೋಡಿದಾಗ ರಾಷ್ಟ್ರಗಳು ಸೂಕ್ತ ಲಸಿಕೆ ಪೂರೈಕೆ ಮಾಡುವ ಮೂಲಕ ಜನರಿಗೆ
ಚಿಕಿತ್ಸೆ ಲಭ್ಯವಾಗುವಂತೆ ನೋಡಿಕೊಳ್ಳಬೇಕಾಗಿದೆ. ಪಿಪಿಇ ಪೂರೈಸಬೇಕಾಗಿದೆ. ಏಕೆಂದರೆ, ಕೋವಿಡ್ ವಿಶ್ವದ ಎಲ್ಲ ರಾಷ್ಟ್ರಗಳಿಗೂ
ಹೊಡೆತ ನೀಡಿದೆ ಎಂದು ನ್ಯೂಸ್ ಚಾನೆಲ್ ವೊಂದರ ಸಂದರ್ಶನದಲ್ಲಿ ಭಾರತೀಯ-ಅಮೆರಿಕನ್ ಪ್ರಜೆ ಡಾ. ವಿವೇಕ್ ಮೂರ್ತಿ
ಹೇಳಿದ್ದಾರೆ.

ಪ್ರಸ್ತುತ ಭಾರತ ಎದುರಿಸುತ್ತಿರುವ ಸಮಸ್ಯೆ ಅಮೆರಿಕಕ್ಕೂ ಎದುರಾಗಲಿದ್ದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಾ.ಮೂರ್ತಿ, ಅಂತಹ
ಸಮಸ್ಯೆ ಎಂದಿಗೂ ಎದುರಾಗದು,ಆದರೆ ಇದು ಯಾವಾಗಲೂ ಒಂದು ಸಾಧ್ಯತೆಯಾಗಿದೆ ಮತ್ತು ನಾವು ಎಚ್ಚರದಿಂದಿರಬೇಕು. 
ವಿಶೇಷವಾಗಿ ನಾವು ವ್ಯಾಕ್ಸಿನೇಷನ್ ಅಭಿಯಾನದಲ್ಲಿ  ನಮ್ಮ ಪ್ರಯತ್ನಗಳನ್ನು ಮುಂದುವರಿಸಿದರೆ,ಅಮೆರಿಕಾದಲ್ಲಿ ನಾವು ಉತ್ತಮ
ರೀತಿಯಲ್ಲಿ ಕಾರ್ಯನಿರ್ವಹಿಸುತ್ತೇವೆ ಎಂದರು.

ಭಾರತದಲ್ಲಿ ಉಂಟಾಗಿರುವುದು ಒಂದು ದುರಂತವಾಗಿದೆ. ಭಾರತ ಎರಡು ಸವಾಲುಗಳನ್ನು ಎದುರಿಸುತ್ತಿದೆ. ಆದರೆ,ಅಲ್ಲಿ ಕಾಣಿಸಿಕೊಂಡಿರುವ ಬಿ1117 ರೂಪಾಂತರಿಯನ್ನು ಕಳೆದ ವರ್ಷ ಅಮೆರಿಕದಲ್ಲಿ ಸರಿಯಾಗಿ ನಿರ್ವಹಿಸಲಾಗಿತ್ತು. 617 ರೂಪಾಂತರಿ ಮಾರಕ ವೈರಸ್ ಆಗಿದ್ದು,  ಇದು ಹೆಚ್ಚು ಹರಡುವ ಸಾಧ್ಯತೆಯಿದೆ. ಡಾಕ್ಟರ್ ಅದರ ಬಗ್ಗೆ ಇನ್ನೂ ಅಧ್ಯಯನ ನಡೆಸುತ್ತಿದ್ದಾರೆ ಎಂದು ಮಂಡ್ಯ ಮೂಲದ ಅಮೆರಿಕದ ಸರ್ಜನ್ ಜನರಲ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್