ಸಾಂದರ್ಭಿಕ ಚಿತ್ರ 
ವಿದೇಶ

'ಅಮೆರಿಕದಲ್ಲಿ ರಾಜೀನಾಮೆ ಪರ್ವ': ಅಮೆರಿಕನ್ನರಿಗೆ ಏನಾಗಿದೆ? ಏಕೆ ರಾಜೀನಾಮೆ ಕೊಡ್ತಿದ್ದಾರೆ?

ಮನುಷ್ಯ ಪ್ರತಿಯೊಂದು ಹಂತದಲ್ಲೂ ಶಕ್ತಿಶಾಲಿಯಾಗುತ್ತಿದ್ದಾನೆ. ಜಲ, ನೆಲ, ಆಗಸ, ಅಗ್ನಿ ಸೇರಿದಂತೆ ಪ್ರತಿಯೊಂದು ರಂಗದಲ್ಲೂ ತನ್ನನ್ನು ತಾನು ಸರ್ವೋತ್ತಮನನ್ನಾಗಿ ಮಾಡಿಕೊಳ್ಳುತ್ತಿದ್ದಾನೆ. ತನ್ನ ತೋಳ್ಬಲವನ್ನು ತೋರಿಸಿಕೊಳ್ಳಲು...

ವಾಷಿಂಗ್ಟನ್: ಮನುಷ್ಯ ಪ್ರತಿಯೊಂದು ಹಂತದಲ್ಲೂ ಶಕ್ತಿಶಾಲಿಯಾಗುತ್ತಿದ್ದಾನೆ. ಜಲ, ನೆಲ, ಆಗಸ, ಅಗ್ನಿ ಸೇರಿದಂತೆ ಪ್ರತಿಯೊಂದು ರಂಗದಲ್ಲೂ ತನ್ನನ್ನು ತಾನು ಸರ್ವೋತ್ತಮನನ್ನಾಗಿ ಮಾಡಿಕೊಳ್ಳುತ್ತಿದ್ದಾನೆ. ತನ್ನ ತೋಳ್ಬಲವನ್ನು ತೋರಿಸಿಕೊಳ್ಳಲು ಅಣು ಬಾಂಬ್ ಸಹ ಕಂಡುಹಿಡಿದಿದ್ದಾನೆ. ಆದರೆ, ಕಣ್ಣಿಗೆ ಕಾಣದ ಕೊರೋನಾ ವೈರಸ್ ಮುಂದೆ ಸೋಲೊಪ್ಪಿಕೊಂಡಿದ್ದಾನೆ.

ಇದು ಇಲ್ಲಿಗೆ ನಿಲ್ಲಲ್ಲ... ಪ್ರತಿ ವರ್ಷವೂ ಹೊಸ ಹೊಸ ವೈರಸ್ ಗಳು ಹುಟ್ಟಿಕೊಳ್ಳುತ್ತವೆ. ಮನುಷ್ಯ ತನ್ನ ಅಸ್ಥಿತ್ವ ಉಳಿಸಿಕೊಳ್ಳಲು ಹೋರಾಡುತ್ತಲೇ ಇರುತ್ತಾನೆ.

ಪ್ರಪಂಚಕ್ಕೆ ಕೊರೋನಾ ಲಗ್ಗೆ ಇಟ್ಟಿದ್ದೆ ತಡ ಜಗತ್ತು ಬದಲಾವಣೆಯ ಗಾಳಿಗೆ ಸಿಲುಕಿದೆ.. ಯಾವುದನ್ನು ಊಹಿಸಿಕೊಳ್ಳಲು ಅಸಾಧ್ಯವಾಗುತ್ತಿತ್ತೋ ಅದನ್ನು ಕ್ಷಣಕಾಲದಲ್ಲೇ ನಮ್ಮ ಮುಂದೆ ದರ್ಶನ ಮಾಡಿಸುತ್ತಿದೆ ಕಣ್ಣಿಗೆ ಕಾಣಿಸದ ವಸ್ತು. ಇದರಿಂದಾಗಿ ವಿಶ್ವದ ಕೆಲ ದೇಶಗಳು ಕೆಲಸ ಸಿಗುತ್ತಿಲ್ಲ ಅಂತಾ ಬಾಯಿ ಬಾಯಿ ಬಡಿದುಕೊಂಡ್ರೆ, ಅಮೆರಿಕಾದಲ್ಲಿ ಮಾತ್ರ ಕೆಲಸ ಬಿಡುವವರ ಸಂಖ್ಯೆಯಲ್ಲಿ ಹಠಾತ್ ಜಿಗಿತ ಕಂಡುಬಂದಿದೆ.

US ಬ್ಯೂರೋ ಆಫ್ ಲೇಬರ್ ಸ್ಟ್ಯಾಟಿಸ್ಟಿಕ್ಸ್ ಪ್ರಕಾರ, ಸೆಪ್ಟೆಂಬರ್‌ನಲ್ಲಿ 44 ಲಕ್ಷ ಅಮೆರಿಕನ್ನರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ಆಗಸ್ಟ್ ತಿಂಗಳಿಗಿಂತ 2 ಲಕ್ಷ ಅಧಿಕ. ಆಗಸ್ಟ್‌ನಲ್ಲಿ 43 ಲಕ್ಷ ಜನರು ಕೆಲಸ ತೊರೆದಿದ್ದರೆ, ಜುಲೈನಲ್ಲಿ 36 ಲಕ್ಷ ಉದ್ಯೋಗಿಗಳು ತಮ್ಮ ರಾಜೀನಾಮೆ ಬೀಸಾಕಿದ್ದಾರೆ.

ವಾಷಿಂಗ್ಟನ್ ಪೋಸ್ಟ್‌ (Washington Post) ವರದಿಯ ಪ್ರಕಾರ ವೇಗವಾಗಿ ಬೆಳೆಯುತ್ತಿರುವ ಸ್ಟಾರ್ಟ್‌ಅಪ್‌ಗಳ (StratUp) ಸಂಖ್ಯೆ ಸಹ ಕೆಲಸ ಬಿಡಲು ಕಾರಣ. ಅಮೆರಿಕದಲ್ಲಿ ಉದ್ಯೋಗವನ್ನು ತೊರೆಯುವ ಹೆಚ್ಚಿನ ಜನರು ಸೇವಾ ಅಥವಾ ಚಿಲ್ಲರೆ ವಲಯದಲ್ಲಿ ತಮ್ಮನ್ನು ಗುರುತಿಸಿಕೊಂಡು ಜೀವನ ಕಂಡುಕೊಳ್ಳುತ್ತಿದ್ದಾರೆ.

ಕೊರೋನಾ ಹೊಡೆತದಿಂದಾಗಿ ಕೆಲವರು ಬಹಳ ಸಮಯದಿಂದ ಕೆಲಸ ಬದಲಾಯಿಸುವ ಬಗ್ಗೆ ಆಲೋಚನೆ ಮಾಡುತ್ತಿದ್ದರು. ಇನ್ನೂ ಕೆಲವರು ಸ್ಟಾರ್ಟಪ್ (StratUp) ಗಳತ್ತ ಮುಖ ಮಾಡುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ಅಮೆರಿಕದಲ್ಲಿ ಕೆಲಸ ಬಿಡೋದ್ರಲ್ಲಿ ಮಹಿಳೆಯರ ಒಂದು ಕೈ ಮುಂದು ಅನ್ನೋ ಬಗ್ಗೆ ಮಾಹಿತಿ ಹೊರಬಿದ್ದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!