ಇಮ್ರಾನ್ ಖಾನ್ 
ವಿದೇಶ

ಇಮ್ರಾನ್ ಖಾನ್ ಮೂರು ಉಡುಗೊರೆ ವಾಚ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡಿ 36 ಮಿಲಿಯನ್ ಗಳಿಸಿದ್ದಾರೆ: ವರದಿ

ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ಅವರು ವಿದೇಶಿ ಗಣ್ಯರು ಉಡುಗೊರೆಯಾಗಿ ನೀಡಿದ ಮೂರು ವಾಚ್‌ಗಳನ್ನು ಸ್ಥಳೀಯ ವಾಚ್ ಡೀಲರ್‌ಗೆ ಅಕ್ರಮವಾಗಿ ಮಾರಾಟ ಮಾಡುವ ಮೂಲಕ 36 ಮಿಲಿಯನ್ ರೂಪಾಯಿ ಗಳಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.

ಇಸ್ಲಾಮಾಬಾದ್: ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ಅವರು ವಿದೇಶಿ ಗಣ್ಯರು ಉಡುಗೊರೆಯಾಗಿ ನೀಡಿದ ಮೂರು ವಾಚ್‌ಗಳನ್ನು ಸ್ಥಳೀಯ ವಾಚ್ ಡೀಲರ್‌ಗೆ ಅಕ್ರಮವಾಗಿ ಮಾರಾಟ ಮಾಡುವ ಮೂಲಕ 36 ಮಿಲಿಯನ್ ರೂಪಾಯಿ ಗಳಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.

ಜಿಯೋ ನ್ಯೂಸ್‌ ನ ವಿವರಗಳ ಪ್ರಕಾರ, ಇಮ್ರಾನ್ ಖಾನ್ ಪ್ರಧಾನ ಮಂತ್ರಿಯಾಗಿದ್ದ ಅವಧಿಯಲ್ಲಿ ಒಟ್ಟಾರೆಯಾಗಿ 154 ಮಿಲಿಯನ್‌ಗಿಂತಲೂ ಹೆಚ್ಚು ಮೌಲ್ಯದ ಈ ಆಭರಣ-ವರ್ಗದ ಕೈಗಡಿಯಾರಗಳಿಂದ ಲಕ್ಷ ರೂಪಾಯಿಗಳನ್ನು ಗಳಿಸಿದರು. 

ಅತ್ಯಂತ ದುಬಾರಿ ವಾಚ್ 101 ಮಿಲಿಯನ್ ಮೌಲ್ಯದಾಗಿದೆ. ಪಾಕಿಸ್ತಾನದ ಕಾನೂನಿನ ಪ್ರಕಾರ, ವಿದೇಶಿ ಗಣ್ಯರಿಂದ ಪಡೆದ ಯಾವುದೇ ಉಡುಗೊರೆಯನ್ನು ರಾಜ್ಯ ಠೇವಣಿ ಅಥವಾ ತೋಷಖಾನಾದಲ್ಲಿ ಇಡಬೇಕು. ತೋಷಖಾನಾದಿಂದ ಉಡುಗೊರೆಯಾಗಿ ನೀಡಲಾದ ಆಭರಣಗಳನ್ನು ಮೊದಲಿಗೆ ಮಾರಾಟ ಮಾಡಿ ಅದರಿಂದ ಬಂದ ಹಣದಲ್ಲಿ 20 ಪ್ರತಿಶತವನ್ನು ಮಾತ್ರವನ್ನು ಖಜಾನೆಗೆ ಠೇವಣಿ ಮಾಡಿದ್ದಾರೆ ಎಂದು ದಾಖಲೆಗಳು ಮತ್ತು ಮಾರಾಟದ ರಸೀದಿಗಳನ್ನು ಉಲ್ಲೇಖಿಸಿ ಜಿಯೋ ನ್ಯೂಸ್ ವರದಿ ಮಾಡಿದೆ. 

ಇವರು ಯಾವುದೇ ಉಡುಗೊರೆಗಳನ್ನು ಎಂದಿಗೂ ತೋಷಖಾನಾದಲ್ಲಿ ಠೇವಣಿ ಮಾಡಲಾಗಿಲ್ಲ. ಯಾವುದೇ ಸರ್ಕಾರಿ ಅಧಿಕಾರಿ ಸ್ವೀಕರಿಸಿದ ಉಡುಗೊರೆಯನ್ನು ತಕ್ಷಣವೇ ವರದಿ ಮಾಡಿಲ್ಲ,  ಉಡುಗೊರೆಯನ್ನು ಠೇವಣಿ ಮಾಡಿದ ನಂತರ ಮಾತ್ರ, ಸ್ವೀಕರಿಸುವವರು ಅದನ್ನು ತನ್ನ ಬಳಿ ಇರಿಸಿಕೊಳ್ಳಲು ಬಯಸಿದರೆ ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕಾಗುತ್ತದೆ.

ಸೌಹಾರ್ದ ಗಲ್ಫ್ ರಾಷ್ಟ್ರಗಳ ಗಣ್ಯರು ಉಡುಗೊರೆಯಾಗಿ ನೀಡಿದ ಈ ಮೂರು ದುಬಾರಿ ವಾಚ್‌ಗಳ ಮಾರಾಟದಿಂದ ಖಾನ್ ಅವರು 36 ಮಿಲಿಯನ್ ಗಳಿಸಿದ್ದಾರೆ ಎಂದು ತೋಷಖಾನಾ ದಾಖಲೆಗಳು ತೋರಿಸುತ್ತವೆ ವರದಿಯಲ್ಲಿ ಹೇಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT