ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ 
ವಿದೇಶ

ಉಡುಗೊರೆ ಪ್ರಕರಣ: ಸಾರ್ವಜನಿಕ ಹುದ್ದೆಯಿಂದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ 5 ವರ್ಷ ನಿಷೇಧ!

ಬೇರೆ ದೇಶಗಳ ನಾಯಕರಿಂದ ಸ್ವೀಕರಿಸಿದ ಉಡುಗೊರೆಗಳನ್ನು ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಗೆ ಸಾರ್ವಜನಿಕ ಹುದ್ದೆಯಿಂದ 5 ವರ್ಷ ನಿಷೇಧ ಹೇರಲಾಗಿದೆ.

ಇಸ್ಲಾಮಾಬಾದ್: ಬೇರೆ ದೇಶಗಳ ನಾಯಕರಿಂದ ಸ್ವೀಕರಿಸಿದ ಉಡುಗೊರೆಗಳನ್ನು ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಗೆ ಸಾರ್ವಜನಿಕ ಹುದ್ದೆಯಿಂದ 5 ವರ್ಷ ನಿಷೇಧ ಹೇರಲಾಗಿದೆ.

ಪ್ರಕರಣದ ವಿಚಾರಣೆ ನಡೆಸಿದ್ದ ಪಾಕಿಸ್ತಾನ ಚುನಾವಣಾ ಆಯೋಗ ಶುಕ್ರವಾರ ಕ್ರಮ ಈ ಕೈಗೊಂಡಿದ್ದು, ಸಂವಿಧಾನದ 63(1)(3) ವಿಧಿ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಇಮ್ರಾನ್‌ ಅವರಿಗೆ ಐದು ವರ್ಷಗಳ ಕಾಲ ಸಾರ್ವಜನಿಕ ಹುದ್ದೆಯಲ್ಲಿರದಂತೆ ನಿಷೇಧ ಹೇರಲಾಗಿದೆ.

'ಇಮ್ರಾನ್‌ ಖಾನ್‌ ಅವರು ಆಸ್ತಿ ಘೋಷಣೆ ವೇಳೆ ‘ತೋಷಖಾನ’ (ಸರ್ಕಾರಿ ಖಜಾನೆ) ಸ್ವೀಕರಿಸಿರುವ ಉಡುಗೊರೆಗಳ ಕುರಿತ ಮಾಹಿತಿ ಬಹಿರಂಗಪಡಿಸಿಲ್ಲ. ಹೀಗಾಗಿ ಸಂವಿಧಾನದ 62 (1)(ಎಫ್‌) ವಿಧಿ ಅಡಿಯಲ್ಲಿ ಬದುಕಿರುವವರೆಗೂ ಚುನಾವಣೆಗೆ ಸ್ಪರ್ಧಿಸದಂತೆ ಅವರ ಮೇಲೆ ನಿರ್ಬಂಧ ಹೇರಬೇಕು' ಎಂದು ಆಡಳಿತರೂಢ ಪಾಕಿಸ್ತಾನ ಡೆಮಾಕ್ರಟಿಕ್‌ ಮೂವ್‌ಮೆಂಟ್‌ (ಪಿಡಿಎಂ) ಇತ್ತೀಚೆಗೆ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.

ಇದಕ್ಕೂ ಮೊದಲು ಸೆಪ್ಟೆಂಬರ್ 19 ರಂದು, ತೋಶಖಾನಾ ಪ್ರಕರಣದ ವಿಚಾರಣೆಯಲ್ಲಿ, ಇಮ್ರಾನ್ ಖಾನ್ ಅವರ ವಕೀಲ ಅಲಿ ಜಾಫರ್ ಅವರು 2018-19 ರ ಅವಧಿಯಲ್ಲಿ ಅವರು ಪಡೆದ ಕನಿಷ್ಠ ನಾಲ್ಕು ಉಡುಗೊರೆಗಳನ್ನು ತಮ್ಮ ಗ್ರಾಹಕರು ಮಾರಾಟ ಮಾಡಿದ್ದಾರೆ ಎಂದು ಒಪ್ಪಿಕೊಂಡಿದ್ದರು. ಉಡುಗೊರೆಗಳನ್ನು ರೂ 58 ಮಿಲಿಯನ್‌ಗೆ ಮಾರಾಟ ಮಾಡಲಾಗಿದೆ ಮತ್ತು ಅವರ ರಸೀದಿಗಳನ್ನು ನನ್ನ ಕಕ್ಷಿದಾರರು ಸಲ್ಲಿಸಿದ ಆದಾಯ ತೆರಿಗೆ ರಿಟರ್ನ್ಸ್‌ನೊಂದಿಗೆ ಲಗತ್ತಿಸಲಾಗಿದೆ ಎಂದು ಹೇಳಿದ್ದರು.

 ಕಳೆದ ತಿಂಗಳು, ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಸರ್ಕಾರಿ ಖಜಾನೆಯಿಂದ ಮೂರು ದುಬಾರಿ ವಾಚ್‌ಗಳನ್ನು ಒಟ್ಟು 154 ಮಿಲಿಯನ್ ಪಾಕಿಸ್ತಾನಿ ರೂಪಾಯಿ (ಪಿಕೆಆರ್) ಸ್ಥಳೀಯ ವಾಚ್ ಡೀಲರ್‌ಗೆ ಮಾರಾಟ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಇಮ್ರಾನ್ ಖಾನ್ ಅವರಿಗೆ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ವಿದೇಶಿ ಗಣ್ಯರು ಉಡುಗೊರೆಯಾಗಿ ನೀಡಿದ ಈ ಆಭರಣ-ಕ್ಲಾಸ್ ವಾಚ್‌ಗಳಿಂದ ಲಕ್ಷಾಂತರ ರೂಪಾಯಿ ಗಳಿಸಿದ್ದಾರೆ ಎಂದು ದಿ ನ್ಯೂಸ್ ಇಂಟರ್‌ನ್ಯಾಶನಲ್ ಪತ್ರಿಕೆ ವರದಿ ಮಾಡಿತ್ತು.

101 ಮಿಲಿಯನ್‌ಗಿಂತಲೂ ಹೆಚ್ಚು ಮೌಲ್ಯದ ಅತ್ಯಂತ ದುಬಾರಿ ಗಡಿಯಾರವನ್ನು ಖಾನ್ ಅವರ PTI ಸರ್ಕಾರವು ನಿಯಮಗಳನ್ನು ತಿದ್ದುಪಡಿ ಮಾಡಿದ ನಂತರ ಮತ್ತು ಅದರ ಮೂಲ ಮೌಲ್ಯದ ಶೇ.20ರಿಂದ 50ರಷ್ಟು ಕಡಿಮೆ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕದ್ದುಮುಚ್ಚಿ ದೆಹಲಿಗೆ ಹೋಗಲ್ಲ; ಸೂಕ್ತ ಸಮಯದಲ್ಲಿ ಹೈಕಮಾಂಡ್ ನಮ್ಮನ್ನು ಕರೆಯುತ್ತದೆ: ಡಿಕೆಶಿ

ಒಳನುಸುಳುವವರನ್ನು ಹೊರಗಿಡಲು SIR; ಆದ್ರೆ ದಶಕಗಳಿಂದ ಕಾಂಗ್ರೆಸ್ ಅವರನ್ನು ರಕ್ಷಿಸಿತ್ತು: ಪ್ರಧಾನಿ ಮೋದಿ

BMC election: ಕಾಂಗ್ರೆಸ್ ಏಕಾಂಗಿ ಸ್ಪರ್ಧೆ; ಉದ್ಧವ್ ಠಾಕ್ರೆ, ಶರದ್ ಪವಾರ್ ಜತೆ ಮೈತ್ರಿ ಇಲ್ಲ

ಬುರುಡೆ ಗ್ಯಾಂಗ್ ವಿರುದ್ಧ ತಿರುಗಿಬಿದ್ದ ಚಿನ್ನಯ್ಯ: ಜೀವ ಬೆದರಿಕೆ ಆರೋಪ ಮಾಡಿ ಐವರ ವಿರುದ್ಧ ಪೊಲೀಸರಿಗೆ ದೂರು!

'ಜಗತ್ತಿನಲ್ಲಿ ಅಧಿಕಾರದ ಅರ್ಥ ಈಗ ಬದಲಾಗಿದೆ...'; ಅಮೆರಿಕ-ಚೀನಾ ಜೊತೆ ಸಂಬಂಧ ವೃದ್ಧಿ ಮತ್ತಷ್ಟು ಜಟಿಲ: ಜೈಶಂಕರ್

SCROLL FOR NEXT