ಪ್ಯಾರಿಸ್ ನಲ್ಲಿ ಭಾರತೀಯರನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು 
ವಿದೇಶ

ಬದಲಾಗುತ್ತಿರುವ ಜಗತ್ತಿನಲ್ಲಿ ಭಾರತದ ಶಕ್ತಿ, ಪಾತ್ರ ಬಹುಬೇಗ ಬದಲಾಗುತ್ತಿದೆ: ಪ್ಯಾರಿಸ್‌ನಲ್ಲಿ ಪ್ರಧಾನಿ ಮೋದಿ ಮಾತು

ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಗುರುವಾರ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಭಾರತೀಯ ವಲಸಿಗರನ್ನುದ್ದೇಶಿಸಿ ಮಾತನಾಡಿದರು. ಭಾರತವು ಪ್ರಜಾಪ್ರಭುತ್ವಕ್ಕೆ ತಾಯಿಯಾಗಿದ್ದು, ವೈವಿಧ್ಯತೆಗೆ  ಮಾದರಿಯಾಗಿದೆ ಎಂದು ಹೇಳಿದರು ಮತ್ತು ಅದು ಅದರ ಪ್ರಜಾಪ್ರಭುತ್ವದ ಅತ್ಯಂತ ಶಕ್ತಿಶಾಲಿ ಅಂಶವಾಗಿದೆ ಎಂದು ಹೇಳಿದರು.

ಪ್ಯಾರಿಸ್: ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಗುರುವಾರ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಭಾರತೀಯ ವಲಸಿಗರನ್ನುದ್ದೇಶಿಸಿ ಮಾತನಾಡಿದರು. ಭಾರತವು ಪ್ರಜಾಪ್ರಭುತ್ವಕ್ಕೆ ತಾಯಿಯಾಗಿದ್ದು, ವೈವಿಧ್ಯತೆಗೆ  ಮಾದರಿಯಾಗಿದೆ ಎಂದು ಹೇಳಿದರು ಮತ್ತು ಅದು ಅದರ ಪ್ರಜಾಪ್ರಭುತ್ವದ ಅತ್ಯಂತ ಶಕ್ತಿಶಾಲಿ ಅಂಶವಾಗಿದೆ ಎಂದು ಹೇಳಿದರು.

ಜನರಿಂದ ಜನರ ಸಂಪರ್ಕ ಭಾರತ-ಫ್ರಾನ್ಸ್ ಪಾಲುದಾರಿಕೆಯ ಪ್ರಬಲ ಅಡಿಪಾಯವಾಗಿದೆ. ಭಾರತ ಮತ್ತು ಫ್ರಾನ್ಸ್ 21ನೇ ಶತಮಾನದ ಹಲವು ಸವಾಲುಗಳನ್ನು ಎದುರಿಸುತ್ತಿವೆ. ಆದ್ದರಿಂದ, ಈ ನಿರ್ಣಾಯಕ ಸಮಯದಲ್ಲಿ, ನಮ್ಮ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯ ಪ್ರಾಮುಖ್ಯತೆಯು ಇನ್ನಷ್ಟು ಹೆಚ್ಚಾಗಿದೆ ಎಂದರು. ಅನಿವಾಸಿ ಭಾರತೀಯ ಉದ್ಯಮಿಗಳನ್ನು ಭಾರತದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಿದರು.

ಅವರ ಭಾಷಣದ ಪ್ರಮುಖ 10 ಅಂಶಗಳು ಇಂತಿದೆ:

  1. ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ಜಗತ್ತು ನಂಬಿದೆ, ಜಗತ್ತಿನ ದೇಶಗಳಿಗೆ ಭಾರತದ ಶಕ್ತಿ ಗೊತ್ತಾಗಿದೆ.
  2. ಭಾರತವು ಪ್ರಜಾಪ್ರಭುತ್ವದ ತಾಯಿ ಮತ್ತು ವೈವಿಧ್ಯತೆಯ ಮಾದರಿ; ಅದು ನಮ್ಮ ದೊಡ್ಡ ಶಕ್ತಿ.
  3. ಕೆಲವು ಗಂಟೆಗಳ ನಂತರ, ಭಾರತವು ಶ್ರೀಹರಿಕೋಟಾದಿಂದ ಐತಿಹಾಸಿಕ ಚಂದ್ರಯಾನ-3 ನ್ನು ಉಡಾವಣೆ ಮಾಡಲಿದೆ.
  4. ನಗದು ಇಲ್ಲದೆ ಭಾರತಕ್ಕೆ ಬನ್ನಿ, ಕೇವಲ ಮೊಬೈಲ್ ಫೋನ್ ತೆಗೆದುಕೊಳ್ಳಿ, ಒಂದು ಪೈಸೆ ನಗದಿಲ್ಲದೆ ನೀವು ಭಾರತದಲ್ಲಿ ಬದುಕಲು ಸಾಧ್ಯವಾಗುತ್ತದೆ.
  5. ಶೀಘ್ರದಲ್ಲೇ, ಪ್ಯಾರಿಸ್‌ನ ಐಫೆಲ್ ಟವರ್‌ನಲ್ಲಿ ಭಾರತೀಯ ಪ್ರವಾಸಿಗರು ಮೊಬೈಲ್ ಫೋನ್ ಮೂಲಕ ರೂಪಾಯಿಗಳಲ್ಲಿ ಪಾವತಿಸಲು ಸಾಧ್ಯವಾಗುತ್ತದೆ.
  6. ಫ್ರಾನ್ಸ್‌ನಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ 5 ವರ್ಷಗಳ ದೀರ್ಘಾವಧಿಯ ನಂತರದ ಅಧ್ಯಯನ ವೀಸಾವನ್ನು ನೀಡಲು ನಿರ್ಧರಿಸಲಾಗಿದೆ.
  7. ನೂರಾರು ವರ್ಷಗಳ ಹಿಂದೆ, ಫ್ರಾನ್ಸ್‌ನ ಹೆಮ್ಮೆಯನ್ನು ರಕ್ಷಿಸುವ ಭಾರತೀಯ ಸೈನಿಕರು ತಮ್ಮ ಕರ್ತವ್ಯವನ್ನು ನಿರ್ವಹಿಸುವಾಗ ಫ್ರೆಂಚ್ ನೆಲದಲ್ಲಿ ಹುತಾತ್ಮರಾಗಿದ್ದರು. ಇಲ್ಲಿನ ಯುದ್ಧದಲ್ಲಿ ಪಾಲ್ಗೊಂಡಿದ್ದ ರೆಜಿಮೆಂಟ್‌ಗಳಲ್ಲಿ ಒಂದಾದ ಪಂಜಾಬ್ ರೆಜಿಮೆಂಟ್ ನಲ್ಲಿ ನಾಳೆ ರಾಷ್ಟ್ರೀಯ ದಿನಾಚರಣೆಯ ಪರೇಡ್‌ನಲ್ಲಿ ಭಾಗವಹಿಸಲಿದ್ದೇನೆ.
  8. ಭಾರತವು ಯಾವುದೇ ಅವಕಾಶವನ್ನು ಬಿಡುವುದಿಲ್ಲ. ಒಂದು ಕ್ಷಣವೂ ವ್ಯರ್ಥವಾಗಲು ಬಿಡುವುದಿಲ್ಲ ಎಂದು ನಿರ್ಧರಿಸಿದೆ. ನನ್ನ ಪ್ರತಿ ಸೆಕೆಂಡ್ ದೇಶದ ಜನರಿಗಾಗಿ ಎಂದು ಸಂಕಲ್ಪ ಮಾಡಿದ್ದೇನೆ.
  9. ಹವಾಮಾನ ಬದಲಾವಣೆ, ಜಾಗತಿಕ ಪೂರೈಕೆ ಸರಪಳಿ ಅಥವಾ ಭಯೋತ್ಪಾದನೆ ಇರಲಿ, ವಿವಿಧ ಸವಾಲುಗಳನ್ನು ಎದುರಿಸುವಲ್ಲಿ ಭಾರತದ ಅನುಭವವು ಜಗತ್ತಿಗೆ ಸಹಾಯಕವಾಗಿದೆ.
  10. ಜಗತ್ತು ಹೊಸ ಕ್ರಮದತ್ತ ಸಾಗುತ್ತಿದೆ, ಭಾರತದ ಶಕ್ತಿ ಮತ್ತು ಪಾತ್ರವು ತ್ವರಿತವಾಗಿ ಬದಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

SCROLL FOR NEXT