ಅಮೇರಿಕಾ ಅಧ್ಯಕ್ಷ ಜೋ ಬೈಡನ್- ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು 
ವಿದೇಶ

ಗಾಜಾ ಆಸ್ಪತ್ರೆ ಸ್ಫೋಟಕ್ಕೆ ಕಾರಣ 'ಅವರೇ' ಇರಬಹುದು: ಇಸ್ರೇಲ್ ನಲ್ಲಿ ಬೈಡನ್; ಹಮಾಸ್ ಖಂಡಿಸಿದ ಅಮೇರಿಕಾ ಅಧ್ಯಕ್ಷ

ತನ್ನ ವಿರುದ್ಧ ದಾಳಿ ನಡೆಸಿದ ಹಮಾಸ್ ಉಗ್ರರ ವಿರುದ್ಧ ಪ್ರತಿದಾಳಿ ನಡೆಸುತ್ತಿರುವ ಇಸ್ರೇಲ್ ಗೆ ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಭೇಟಿ ನೀಡಿದ್ದು, ಅಮೇರಿಕಾ ಯಹೂದಿಗಳ ಬೆಂಬಲಕ್ಕೆ ನಿಂತಿದೆ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಟೆಲ್ ಅವಿವ್: ತನ್ನ ವಿರುದ್ಧ ದಾಳಿ ನಡೆಸಿದ ಹಮಾಸ್ ಉಗ್ರರ ವಿರುದ್ಧ ಪ್ರತಿದಾಳಿ ನಡೆಸುತ್ತಿರುವ ಇಸ್ರೇಲ್ ಗೆ ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಭೇಟಿ ನೀಡಿದ್ದು, ಅಮೇರಿಕಾ ಯಹೂದಿಗಳ ಬೆಂಬಲಕ್ಕೆ ನಿಂತಿದೆ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಜೋ ಬೈಡನ್ ಇಸ್ರೇಲ್ ಭೇಟಿ ವೇಳೆ ಗಾಜಾ ಪಟ್ಟಿಯಲ್ಲಿ ಆಸ್ಪತ್ರೆಯೊಂದು ಸ್ಫೋಟಗೊಂಡಿದ್ದು, ಈ ಬೆನ್ನಲ್ಲೇ ಹೇಳಿಕೆ ನೀಡಿರುವ ಅಮೇರಿಕಾ ಅಧ್ಯಕ್ಷ, ಈ ಕೃತ್ಯ ನಡೆಸಿರುವುದು ಇಸ್ರೇಲಿ ಸೇನೆಯಲ್ಲ, ಆದರೆ 'ಆ ಕಡೆಯ' ತಂಡದಿಂದ ಈ ಸ್ಫೋಟ ನಡೆದಿರುವಂತೆ ತೋರುತ್ತಿದೆ ಎಂದು ಹೇಳಿದ್ದಾರೆ.

ಇಸ್ರೇಲ್ ಪ್ರಧಾನಿಯೊಂದಿಗೆ ಮಾತನಾಡಿದ ವೇಳೆ ಈ ಸ್ಫೋಟದ ಬಗ್ಗೆ ಉಲ್ಲೇಖಿಸಿರುವ ಜೋ ಬೈಡನ್, ನಾನು ಗಮನಿಸಿರುವ ಪ್ರಕಾರ, ನೀವು ಈ ಕೃತ್ಯ ಎಸಗಿಲ್ಲ. ಆದರೆ ಅವರ ತಂಡ ಇದನ್ನು ನಡೆಸಿದೆ ಎಂದು ಹೇಳಿದ್ದು, ಭಯೋತ್ಪಾದಕ ಹಮಾಸ್ ಅನ್ನು ಉಲ್ಲೇಖಿಸಿದ್ದಾರೆ. ಇದೇ ವೇಳೆ ಅಲ್ಲಿನ ಹಲವು ಮಂದಿಗೆ ಸ್ಫೋಟಕ್ಕೆ ಕಾರಣ ಏನೆಂದು ನಿಖರವಾಗಿ ತಿಳಿದಿಲ್ಲ ಎಂದೂ ಬೈಡನ್ ಹೇಳಿದ್ದಾರೆ.

ಹಮಾಸ್ ಆಡಳಿತದಲ್ಲಿನ ಗಾಜಾ ಆರೋಗ್ಯ ಸಚಿವರು, ಇಸ್ರೇಲ್ ನ ವೈಮಾನಿಕ ದಾಳಿಯಿಂದಾಗಿ ಆಸ್ಪತ್ರೆ ಸ್ಫೋಟಗೊಂಡಿದ್ದು, ನೂರಾರು ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಇಸ್ರೇಲಿ ಸೈನ್ಯ ತಳ್ಳಿಹಾಕಿದ್ದು, ಮತ್ತೊಂದು ಉಗ್ರ ಸಂಘಟನೆಯಾದ ಇಸ್ಲಾಮಿಕ್ ಜಿಹಾದ್ ಪ್ಯಾಲೆಸ್ತೇನ್ ನಿಂದ ತಪ್ಪಾಗಿ ಹಾರಿಸಿದ ರಾಕೆಟ್ ನಿಂದ ಈ ಅವಘಡ ಸಂಭವಿಸಿದೆ ಎಂದು ಹೇಳಿದೆ. ಆದರೆ ಆ ಸಂಘಟನೆ ಆರೋಪವನ್ನು ನಿರಾಕರಿಸಿದೆ.

ಇಸ್ರೇಲ್ ನಲ್ಲಿದ್ದ ಜೋ ಬೈಡನ್ ಮುಂದೆ ಜೋರ್ಡಾನ್ ಗೆ ಭೇಟಿ ನೀಡಲಿದ್ದಾರೆ. ಆದರೆ ಆಸ್ಪತ್ರೆ ಸ್ಫೋಟ ಘಟನೆಯ ಬಳಿಕ ಬೈಡನ್ ಅರಬ್ ನಾಯಕರೊಂದಿಗಿನ ಸಭೆಯನ್ನು ರದ್ದುಗೊಳಿಸಿದ್ದಾರೆ. ಈ ಸ್ಫೋಟ ಪ್ರಕರಣದಿಂದ ನೆತನ್ಯಾಹು ತೀವ್ರ ದುಃಖ ಮತ್ತು ಆಕ್ರೋಶಗೊಂಡಿದ್ದಾರೆ. ಅ.7 ರ ದಾಳಿಯಲ್ಲಿ ಹಮಾಸ್ ಇಸ್ರೇಲಿಗಳ ನರಮೇಧ ಮಾಡಿದೆ ಎಂದು ಹೇಳಿದರೆ ಅದು ಅತಿಶಯೋಕ್ತಿ ಆಗುವುದಿಲ್ಲ ಎಂದು ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT