ಆಸ್ಟ್ರಿಯಾದಲ್ಲಿರುವ ಭಾರತೀಯ ಸಮುದಾಯವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ online desk
ವಿದೇಶ

ಭಾರತ ಜಗತ್ತಿಗೆ ಬುದ್ಧನನ್ನು ನೀಡಿದೆ; ಯುದ್ಧವನ್ನಲ್ಲ: ಆಸ್ಟ್ರಿಯಾದಲ್ಲಿ ಪ್ರಧಾನಿ ಮೋದಿ

"ಸಾವಿರಾರು ವರ್ಷಗಳಿಂದ, ನಾವು ನಮ್ಮ ಜ್ಞಾನ ಮತ್ತು ಪರಿಣತಿಯನ್ನು ಪ್ರಪಂಚದೊಂದಿಗೆ ಹಂಚಿಕೊಂಡಿದ್ದೇವೆ. ನಾವು 'ಯುದ್ಧ' (ಯುದ್ಧ) ನೀಡಲಿಲ್ಲ, ನಾವು 'ಬುದ್ಧ'ವನ್ನು ನೀಡಿದ್ದೇವೆ. ಭಾರತವು ಯಾವಾಗಲೂ ಶಾಂತಿ ಮತ್ತು ಸಮೃದ್ಧಿಯನ್ನು ಉತ್ತೇಜಿಸಿದೆ- ಮೋದಿ

ಆಸ್ಟ್ರಿಯಾ: ಭಾರತ ಜಗತ್ತಿಗೆ ಬುದ್ಧ (ಶಾಂತಿ)ನನ್ನು ನೀಡಿದೆ ಯುದ್ಧವನ್ನಲ್ಲ ಎಂದು ಪ್ರಧಾನಿ ಮೋದಿ ಆಸ್ಟ್ರಿಯಾದಲ್ಲಿ ಹೇಳಿದ್ದಾರೆ.

ಭಾರತ ಎಂದಿಗೂ ಶಾಂತಿ ಮತ್ತು ಸಮೃದ್ಧಿಯನ್ನು ಉತ್ತೇಜಿಸಿದೆ ಎಂದಿರುವ ಪ್ರಧಾನಿ 21 ನೇ ಶತಮಾನದಲ್ಲಿ ಭಾರತ ತನ್ನ ಪಾತ್ರವನ್ನು ಹಿಗ್ಗಿಸಿಕೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಯೆನ್ನಾದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿ, ಹೊಸ ಮೈಲಿಗಲ್ಲುಗಳನ್ನು ತಲುಪಲು ಹಾಗೂ ಉತ್ಕೃಷ್ಟಗೊಳಿಸಿಕೊಳ್ಳುವುದಕ್ಕೆ ಭಾರತದ ನಿರಂತರ ಪ್ರಯತ್ನಗಳನ್ನು ಮೋದಿ ಒತ್ತಿ ಹೇಳಿದ್ದಾರೆ.

"ಸಾವಿರಾರು ವರ್ಷಗಳಿಂದ, ನಾವು ನಮ್ಮ ಜ್ಞಾನ ಮತ್ತು ಪರಿಣತಿಯನ್ನು ಪ್ರಪಂಚದೊಂದಿಗೆ ಹಂಚಿಕೊಂಡಿದ್ದೇವೆ. ನಾವು 'ಯುದ್ಧ' (ಯುದ್ಧ) ನೀಡಲಿಲ್ಲ, ನಾವು 'ಬುದ್ಧ'ವನ್ನು ನೀಡಿದ್ದೇವೆ. ಭಾರತವು ಯಾವಾಗಲೂ ಶಾಂತಿ ಮತ್ತು ಸಮೃದ್ಧಿಯನ್ನು ಉತ್ತೇಜಿಸಿದೆ ಮತ್ತು 21 ನೇ ಶತಮಾನದಲ್ಲಿ ದೇಶದ ಪಾತ್ರವನ್ನು ಬಲಪಡಿಸಲು ಇದು ಮುಂದುವರಿಯುತ್ತದೆ” ಎಂದು ಮಾಸ್ಕೋಗೆ ಭೇಟಿ ನೀಡಿದ ನಂತರ ಪ್ರಧಾನಿ ಹೇಳಿದರು. ಆಸ್ಟ್ರಿಯಾ ಭೇಟಿಗೂ ಮುನ್ನ ರಷ್ಯಾದಲ್ಲಿ ಪ್ರಧಾನಿ ಮೋದಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ಮಾತುಕತೆಯ ಸಮಯದಲ್ಲಿ ಉಕ್ರೇನ್ ಸಂಘರ್ಷಕ್ಕೆ ಶಾಂತಿಯುತ ಪರಿಹಾರದ ಅಗತ್ಯವನ್ನು ಒತ್ತಿ ಹೇಳಿದರು.

ಪ್ರಧಾನಿ ಮೋದಿ ಅವರು ಆಸ್ಟ್ರಿಯಾಕ್ಕೆ ತಮ್ಮ ಮೊದಲ ಭೇಟಿಯನ್ನು "ಅರ್ಥಪೂರ್ಣ" ಎಂದು ಬಣ್ಣಿಸಿದರು, ಇದು 41 ವರ್ಷಗಳಲ್ಲಿ ಭಾರತೀಯ ಪ್ರಧಾನಿಯ ಮೊದಲ ಭೇಟಿಯಾಗಿದೆ ಎಂದು ಮೋದಿ ಹೇಳಿದ್ದಾರೆ.

"ಭಾರತ ಮತ್ತು ಆಸ್ಟ್ರಿಯಾ ತಮ್ಮ ಸ್ನೇಹದ 75 ನೇ ವರ್ಷವನ್ನು ಆಚರಿಸುತ್ತಿರುವಾಗ ಈ ಸುದೀರ್ಘ ಕಾಯುವಿಕೆ ಐತಿಹಾಸಿಕ ಸಂದರ್ಭದಲ್ಲಿ ಕೊನೆಗೊಂಡಿದೆ" ಎಂದು ಮೋದಿ ಹೇಳಿದ್ದಾರೆ.

"ಭಾರತ ಮತ್ತು ಆಸ್ಟ್ರಿಯಾಗಳು ಭೌಗೋಳಿಕವಾಗಿ ದೂರದಲ್ಲಿದ್ದರೂ, ಅವುಗಳು ಅನೇಕ ಸಾಮ್ಯತೆಗಳನ್ನು ಹೊಂದಿವೆ. ಸ್ವಾತಂತ್ರ್ಯ, ಸಮಾನತೆ, ಬಹುತ್ವ ಮತ್ತು ಕಾನೂನಿನ ನಿಯಮಕ್ಕೆ ಗೌರವದ ಹಂಚಿಕೆಯ ಮೌಲ್ಯಗಳೊಂದಿಗೆ ಪ್ರಜಾಪ್ರಭುತ್ವವು ಎರಡೂ ರಾಷ್ಟ್ರಗಳನ್ನು ಸಂಪರ್ಕಿಸುತ್ತದೆ. ನಮ್ಮ ಸಮಾಜಗಳು ಬಹುಸಂಸ್ಕೃತಿ ಮತ್ತು ಬಹುಭಾಷಾ, ವೈವಿಧ್ಯತೆಯನ್ನು ಆಚರಿಸುತ್ತವೆ ಮತ್ತು ಚುನಾವಣೆಗಳು ಈ ಮೌಲ್ಯಗಳನ್ನು ಪ್ರತಿಬಿಂಬಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ" ಎಂದು ಅವರು 'ಮೋದಿ, ಮೋದಿ' ಘೋಷಣೆಗಳ ನಡುವೆ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT