ಆಫ್ಘಾನಿಗರಿಂದ ದಾಳಿ 
ವಿದೇಶ

ತೀವ್ರ ಮುಜುಗರ: ಪಾಕಿಸ್ತಾನ ರಾಯಭಾರ ಕಚೇರಿಯ ಮೇಲೆ ದಾಳಿ, ಪಾಕ್ ಧ್ವಜ ಕಿತ್ತೆಸೆದ ಆಫ್ಘಾನಿಗರು; ವಿಡಿಯೋ ವೈರಲ್!

ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ಪಾಕಿಸ್ತಾನಿ ದೂತಾವಾಸದಲ್ಲಿ ಮೊದಲಿಗೆ ಭದ್ರತಾ ಸಿಬ್ಬಂದಿಯೊಂದಿಗೆ ಅಫ್ಘಾನಿಗರು ಘರ್ಷಣೆ ನಡೆಸಿರುವುದು ವೀಡಿಯೊದಲ್ಲಿ ನೋಡಬಹುದು.

ಅಫ್ಘಾನಿಸ್ತಾನದ ನಾಗರಿಕರು ಜರ್ಮನಿಯಲ್ಲಿನ ಪಾಕಿಸ್ತಾನದ ರಾಯಭಾರ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಅನೇಕ ಆಫ್ಘನ್ನರು ರಾಯಭಾರ ಕಚೇರಿಗೆ ಪ್ರವೇಶಿಸಿ ಧ್ವಂಸಗೊಳಿಸಿದ್ದು ಪಾಕಿಸ್ತಾನದ ಧ್ವಜವನ್ನು ಕಿತ್ತೆಸೆದಿದ್ದಾರೆ. ಇದರ ವೀಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ಪಾಕಿಸ್ತಾನಿ ದೂತಾವಾಸದಲ್ಲಿ ಮೊದಲಿಗೆ ಭದ್ರತಾ ಸಿಬ್ಬಂದಿಯೊಂದಿಗೆ ಅಫ್ಘಾನಿಗರು ಘರ್ಷಣೆ ನಡೆಸಿರುವುದು ವೀಡಿಯೊದಲ್ಲಿ ನೋಡಬಹುದು. ಈ ಸಮಯದಲ್ಲಿ ಅವರು ಧ್ವಜಸ್ಥಂಭದ ಮೇಲಕ್ಕೆ ಹತ್ತಿ ಪಾಕಿಸ್ತಾನಿ ಧ್ವಜವನ್ನು ಕಿತ್ತು ಬಿಸಾಡಿದ್ದಾರೆ. ಈ ವೇಳೆ ಹಲವರನ್ನು ಜರ್ಮನ್ ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ನಂತರ ಆಫ್ಘನ್ನರ ನಡೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಬಲವಾಗಿ ವಿರೋಧಿಸಲಾಗುತ್ತಿದೆ.

ಕೋಲಾಹಲದ ದೃಷ್ಟಿಯಿಂದ, ಪಾಕಿಸ್ತಾನವು ಕರಾಚಿಯಲ್ಲಿ ಜರ್ಮನಿಯ ದೂತಾವಾಸದ ಸುರಕ್ಷತೆಯನ್ನು ಹೆಚ್ಚಿಸಿದೆ. ಅದೇ ಸಮಯದಲ್ಲಿ, ಭದ್ರತಾ ಕಾರಣಗಳಿಂದಾಗಿ ರಾಯಭಾರ ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಕೆಲವು ಮಾಧ್ಯಮ ವರದಿಗಳು ಅಫ್ಘಾನ್ ನಿರಾಶ್ರಿತರನ್ನು ಪಾಕಿಸ್ತಾನದಿಂದ ಅಫ್ಘಾನಿಸ್ತಾನಕ್ಕೆ ಕಳುಹಿಸಿದ್ದರಿಂದ ಅವರು ಕೋಪಗೊಂಡಿದ್ದಾರೆ ಎಂದು ನಂಬಲಾಗಿದೆ. ಈ ಕಾರಣ ಜನರು ಕೋಲಾಹಲವನ್ನು ಸೃಷ್ಟಿಸುತ್ತಿದ್ದಾರೆ.

ಅದೇ ಸಮಯದಲ್ಲಿ ದಾಳಿಯ ವೀಡಿಯೊದ ನಂತರ, ಪಾಕಿಸ್ತಾನದ ಟಿವಿ ಆ್ಯಂಕರ್ ನಜೀಬಾ ಫೈಜ್ ಕೂಡ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ನಿಜವಾಗಿಯೂ ಧೈರ್ಯಶಾಲಿಗಳಾಗಿದ್ದರೆ ಇಂತಹ ಕೃತ್ಯ ಎಸಗುವ ಬದಲು ಪ್ಯಾಲೆಸ್ಟೀನಿಗರು ಹೋರಾಡುತ್ತಿರುವಂತೆ ಅವರು ತಮ್ಮ ತಾಯಿನಾಡುಗಾಗಿ ಹೋರಾಡುತ್ತಿದ್ದರು ಎಂದು ಎಕ್ಸ್ ನಲ್ಲಿ ಬರೆದಿದ್ದಾರೆ. ಈ ಘಟನೆಯು ಆಫ್ಘನ್ನರನ್ನು ಅಪಾಯಕಾರಿ, ಹಿಂಸಾತ್ಮಕ, ಬೇಜವಾಬ್ದಾರಿಯುತ ಎಂದು ತೋರಿಸುತ್ತದೆ. ಈ ಹೇಡಿಗಳಲ್ಲಿ ಯಾವುದೇ ಹೆಮ್ಮೆ ಇದ್ದರೆ, ಅವರು ಅವಮಾನದಿಂದ ಓಡಿಹೋಗುವ ಬದಲು ಪ್ಯಾಲೆಸ್ಟೈನ್ ಜನರಂತೆ ತಾಯಿನಾಡಿಗೆ ಹೋರಾಡುತ್ತಿದ್ದರು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT