ವಿದೇಶ

'ಮುಸ್ಲಿಂರ ರಕ್ಷಕ' ಪಾಕ್‌ನಲ್ಲಿ ನಮಾಜ್ ಮಾಡುತ್ತಿದ್ದ ವ್ಯಕ್ತಿಯನ್ನು ಕಂಟೈನರ್‌ನಿಂದ ಎತ್ತಿ ಎಸೆದು ಕೊಂದ ಸೇನೆ, ವಿಡಿಯೋ!

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಸಂದರ್ಭದಲ್ಲಿ, ಮುಸ್ಲಿಂ ವ್ಯಕ್ತಿ ನಮಾಜ್ ಮಾಡಲು ಕಂಟೈನರ್ ಮೇಲೆ ಹತ್ತಿದನು. ಈ ಮುಸ್ಲಿಂ ಯುವಕ ಜನರಿಂದ ದೂರ ಹೋಗಿ ನಮಾಜ್ ಮಾಡಲು ಕುಳಿತರು.

ಕರಾಚಿ: ಮುಸ್ಲಿಮರ ರಕ್ಷಕ ಎಂದು ಹೇಳಿಕೊಳ್ಳುವ ಪಾಕಿಸ್ತಾನಲ್ಲೇ ಮುಸ್ಲಿಮರಿಗೆ ರಕ್ಷಣೆ ಇಲ್ಲದಂತಾಗಿದೆ. ಡಿ ಚೌಕ್ ಬಳಿ ಕಂಟೈನರ್‌ ಮೇಲೆ ನಮಾಜ್ ಮಾಡುತ್ತಿದ್ದ ವ್ಯಕ್ತಿಯನ್ನು ಪಾಕಿಸ್ತಾನ್ ಸೇನೆ ಎತ್ತಿ ಕೆಳಕ್ಕೆ ಎಸೆದಿದ್ದಾರೆ. ಶಾಂತಿಯುತ ಪ್ರತಿಭಟನೆಯ ವೇಳೆ ವ್ಯಕ್ತಿಯೋರ್ವ ನಮಾಜ್ ಮಾಡಲು ಪಕ್ಕಕ್ಕೆ ಹೋಗಿ ಕುಳಿತಿದ್ದನು. ಇದನ್ನು ಗಮನಿಸಿದ ಪಾಕಿಸ್ತಾನಿ ರೇಂಜರ್‌ಗಳು ಆತನನ್ನು ಮೇಲಿಂದ ಕೆಳಕ್ಕೆ ಎಸೆದರೂ ಈ ಕೃತ್ಯದ ಬಗ್ಗೆ ಮುಸ್ಲಿಮ್ ಧಾರ್ಮಿಕ ಮುಖಂಡರು ಮತ್ತು ಸಂಘಟನೆಗಳು ಮೌನ ವಹಿಸುತ್ತಿವೆ. ಇದೇ ಕೃತ್ಯ ಭಾರತದಲ್ಲಿ ನಡೆದಿದ್ದರೆ ಇಷ್ಟೊತ್ತಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸುತ್ತಿತ್ತು. ಈ ಘಟನೆಯ ವಿಡಿಯೋ ಕೂಡ ವೈರಲ್ ಆಗಿದೆ.

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಸಂದರ್ಭದಲ್ಲಿ, ಮುಸ್ಲಿಂ ವ್ಯಕ್ತಿ ನಮಾಜ್ ಮಾಡಲು ಕಂಟೈನರ್ ಮೇಲೆ ಹತ್ತಿದನು. ಈ ಮುಸ್ಲಿಂ ಯುವಕ ಜನರಿಂದ ದೂರ ಹೋಗಿ ನಮಾಜ್ ಮಾಡಲು ಕುಳಿತರು. ಬಹುಶಃ ಈ ಯುವಕ ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಿದ್ದಿರಬಹುದು. ಅಲ್ಲಿದ್ದವರು ಈ ಯುವಕನೊಬ್ಬನೇ ಹೋಗಿ ನಮಾಜ್ ಮಾಡುವುದನ್ನು ನೋಡಿದ ಪಾಕಿಸ್ತಾನಿ ರೇಂಜರ್‌ಗಳ ಗುಂಪು ಆಯುಧಗಳು ಮತ್ತು ದೊಣ್ಣೆಗಳೊಂದಿಗೆ ಓಡಿದೆ.

ಈ ಘಟನೆಯ ವೈರಲ್ ವೀಡಿಯೋದಲ್ಲಿ ಈ ಯುವಕ ಕಂಟೈನರ್ ಮೇಲೆ ಹತ್ತಿ ನಮಾಜ್ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಆಗ ಪಾಕಿಸ್ತಾನದ ರೇಂಜರ್‌ಗಳು ಅವನನ್ನು ಸುತ್ತುವರೆದರು. ನಮಾಜ್ ಮಾಡುವಾಗ ಯುವಕನನ್ನು ಮೊದಲು ಹಿಂಬದಿಯಿಂದ ತಳ್ಳಿ ಮೇಲಿಂದ ಎಸೆದಿದ್ದು, ಕತ್ತು ಮುರಿದು ಸಾವನ್ನಪ್ಪಿದ್ದಾನೆ. ಈ ಮುಸ್ಲಿಂ ಯುವಕನನ್ನು ಕಂಟೈನರ್‌ನಿಂದ ಎಸೆದ ನಂತರ ಆಸ್ಪತ್ರೆಗೆ ಕೊಂಡೊಯ್ಯಲು ಸಾಧ್ಯವಾಗದ ಕಾರಣ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಪಾಕಿಸ್ತಾನವು ತಾವು ಮುಸ್ಲಿಮರ ದೊಡ್ಡ ನಾಯಕ ಎಂದು ಪ್ರಪಂಚದಾದ್ಯಂತ ಪ್ರಚಾರ ಮಾಡಿಕೊಳ್ಳುತ್ತಿದೆ. ಮುಸ್ಲಿಮರು ಎಲ್ಲಿಯಾದರೂ ಹಿಂಸಿಸಲ್ಪಟ್ಟರೆ ಪಾಕಿಸ್ತಾನವು ಮುಸ್ಲಿಮರೊಂದಿಗೆ ನಿಲ್ಲುತ್ತದೆ. ಭಾರತದಲ್ಲಿ ಇರುವ ಮುಸ್ಲಿಂ ಸಂಘಟನೆಗಳು ಕೂಡ ಪಾಕಿಸ್ತಾನದ ಈ ಘಟನೆಯನ್ನು ವಿರೋಧಿಸಿಲ್ಲ. ಆದರೆ ಭಾರತದಲ್ಲಿ ಇಂತಹ ಘಟನೆ ನಡೆದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂದು ಊಹಿಸಿ? ಹಲವು ಮುಸ್ಲಿಂ ಸಂಘಟನೆಗಳು ಈ ವಿಚಾರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗದ್ದಲ ಎಬ್ಬಿಸುತ್ತಿದ್ದವು. ನಮಾಜ್ ಮಾಡುತ್ತಿದ್ದ ಮುಸ್ಲಿಂ ಯುವಕನನ್ನು ಭದ್ರತಾ ಪಡೆಗಳು ಕೊಂದಿದ್ದಾರೆ ಎಂದು ಪ್ರಚಾರ ಮಾಡಲಾಗುತ್ತಿತ್ತು. ಆದರೆ ಪಾಕಿಸ್ತಾನಿ ರೇಂಜರ್‌ಗಳು ಮಾಡಿದ ಈ ಕೃತ್ಯಕ್ಕೆ ಭಾರತ ಸೇರಿದಂತೆ ವಿಶ್ವದಾದ್ಯಂತದ ಮುಸ್ಲಿಂ ಸಂಘಟನೆಗಳು ಮತ್ತು ಧಾರ್ಮಿಕ ಮುಖಂಡರು ಮೌನವಾಗಿ ಕುಳಿತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran-Israel war- ಇರಾನ್‌ನ ತೈಲ ಘಟಕ ಮೇಲೆ ಇಸ್ರೇಲ್ ದಾಳಿ, ಪ್ರತೀಕಾರವಾಗಿ ಗಲ್ಫ್ ರಾಷ್ಟ್ರಗಳ ಇಂಧನ ಸೌಲಭ್ಯಗಳ ಮೇಲೆ ಟೆಹ್ರಾನ್ ಪ್ರತೀಕಾರ

ಇರಾನ್ ಮತ್ತೊಮ್ಮೆ ಕತಾರ್ ಮೇಲೆ ದಾಳಿ ಮಾಡಿದರೆ, ಸೌತ್ ಪಾರ್ಸ್ ಅನಿಲ ಸ್ಥಾವರ ಮೇಲೆ ಯುದ್ಧ ಖಂಡಿತ: Donald Trump

ಉಪಚುನಾವಣೆ: ಯುಗಾದಿ ಹಬ್ಬದ ದಿನವೇ ಬಾಗಲಕೋಟೆ, ದಾವಣಗೆರೆ ದಕ್ಷಿಣ ಬಿಜೆಪಿ ಅಭ್ಯರ್ಥಿಗಳ ಘೋಷಣೆ

ಅಮೇರಿಕಾದಲ್ಲಿ ರಿಲಯನ್ಸ್ ಹೂಡಿಕೆಯೆಷ್ಟು ಸರಿ? (ಹಣಕ್ಲಾಸು)

ಯುಗಾದಿ, ರಂಜಾನ್ ರಜೆ: ಬೆಂಗಳೂರಿನಿಂದ ವಿವಿಧೆಡೆ ಸಂಚಾರಕ್ಕೆ ವಿಶೇಷ ರೈಲು ಸೇವೆ, ವೇಳಾಪಟ್ಟಿ ಹೀಗಿದೆ...

SCROLL FOR NEXT