ವಿದೇಶ

'ಮುಸ್ಲಿಂರ ರಕ್ಷಕ' ಪಾಕ್‌ನಲ್ಲಿ ನಮಾಜ್ ಮಾಡುತ್ತಿದ್ದ ವ್ಯಕ್ತಿಯನ್ನು ಕಂಟೈನರ್‌ನಿಂದ ಎತ್ತಿ ಎಸೆದು ಕೊಂದ ಸೇನೆ, ವಿಡಿಯೋ!

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಸಂದರ್ಭದಲ್ಲಿ, ಮುಸ್ಲಿಂ ವ್ಯಕ್ತಿ ನಮಾಜ್ ಮಾಡಲು ಕಂಟೈನರ್ ಮೇಲೆ ಹತ್ತಿದನು. ಈ ಮುಸ್ಲಿಂ ಯುವಕ ಜನರಿಂದ ದೂರ ಹೋಗಿ ನಮಾಜ್ ಮಾಡಲು ಕುಳಿತರು.

ಕರಾಚಿ: ಮುಸ್ಲಿಮರ ರಕ್ಷಕ ಎಂದು ಹೇಳಿಕೊಳ್ಳುವ ಪಾಕಿಸ್ತಾನಲ್ಲೇ ಮುಸ್ಲಿಮರಿಗೆ ರಕ್ಷಣೆ ಇಲ್ಲದಂತಾಗಿದೆ. ಡಿ ಚೌಕ್ ಬಳಿ ಕಂಟೈನರ್‌ ಮೇಲೆ ನಮಾಜ್ ಮಾಡುತ್ತಿದ್ದ ವ್ಯಕ್ತಿಯನ್ನು ಪಾಕಿಸ್ತಾನ್ ಸೇನೆ ಎತ್ತಿ ಕೆಳಕ್ಕೆ ಎಸೆದಿದ್ದಾರೆ. ಶಾಂತಿಯುತ ಪ್ರತಿಭಟನೆಯ ವೇಳೆ ವ್ಯಕ್ತಿಯೋರ್ವ ನಮಾಜ್ ಮಾಡಲು ಪಕ್ಕಕ್ಕೆ ಹೋಗಿ ಕುಳಿತಿದ್ದನು. ಇದನ್ನು ಗಮನಿಸಿದ ಪಾಕಿಸ್ತಾನಿ ರೇಂಜರ್‌ಗಳು ಆತನನ್ನು ಮೇಲಿಂದ ಕೆಳಕ್ಕೆ ಎಸೆದರೂ ಈ ಕೃತ್ಯದ ಬಗ್ಗೆ ಮುಸ್ಲಿಮ್ ಧಾರ್ಮಿಕ ಮುಖಂಡರು ಮತ್ತು ಸಂಘಟನೆಗಳು ಮೌನ ವಹಿಸುತ್ತಿವೆ. ಇದೇ ಕೃತ್ಯ ಭಾರತದಲ್ಲಿ ನಡೆದಿದ್ದರೆ ಇಷ್ಟೊತ್ತಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸುತ್ತಿತ್ತು. ಈ ಘಟನೆಯ ವಿಡಿಯೋ ಕೂಡ ವೈರಲ್ ಆಗಿದೆ.

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಸಂದರ್ಭದಲ್ಲಿ, ಮುಸ್ಲಿಂ ವ್ಯಕ್ತಿ ನಮಾಜ್ ಮಾಡಲು ಕಂಟೈನರ್ ಮೇಲೆ ಹತ್ತಿದನು. ಈ ಮುಸ್ಲಿಂ ಯುವಕ ಜನರಿಂದ ದೂರ ಹೋಗಿ ನಮಾಜ್ ಮಾಡಲು ಕುಳಿತರು. ಬಹುಶಃ ಈ ಯುವಕ ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಿದ್ದಿರಬಹುದು. ಅಲ್ಲಿದ್ದವರು ಈ ಯುವಕನೊಬ್ಬನೇ ಹೋಗಿ ನಮಾಜ್ ಮಾಡುವುದನ್ನು ನೋಡಿದ ಪಾಕಿಸ್ತಾನಿ ರೇಂಜರ್‌ಗಳ ಗುಂಪು ಆಯುಧಗಳು ಮತ್ತು ದೊಣ್ಣೆಗಳೊಂದಿಗೆ ಓಡಿದೆ.

ಈ ಘಟನೆಯ ವೈರಲ್ ವೀಡಿಯೋದಲ್ಲಿ ಈ ಯುವಕ ಕಂಟೈನರ್ ಮೇಲೆ ಹತ್ತಿ ನಮಾಜ್ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಆಗ ಪಾಕಿಸ್ತಾನದ ರೇಂಜರ್‌ಗಳು ಅವನನ್ನು ಸುತ್ತುವರೆದರು. ನಮಾಜ್ ಮಾಡುವಾಗ ಯುವಕನನ್ನು ಮೊದಲು ಹಿಂಬದಿಯಿಂದ ತಳ್ಳಿ ಮೇಲಿಂದ ಎಸೆದಿದ್ದು, ಕತ್ತು ಮುರಿದು ಸಾವನ್ನಪ್ಪಿದ್ದಾನೆ. ಈ ಮುಸ್ಲಿಂ ಯುವಕನನ್ನು ಕಂಟೈನರ್‌ನಿಂದ ಎಸೆದ ನಂತರ ಆಸ್ಪತ್ರೆಗೆ ಕೊಂಡೊಯ್ಯಲು ಸಾಧ್ಯವಾಗದ ಕಾರಣ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಪಾಕಿಸ್ತಾನವು ತಾವು ಮುಸ್ಲಿಮರ ದೊಡ್ಡ ನಾಯಕ ಎಂದು ಪ್ರಪಂಚದಾದ್ಯಂತ ಪ್ರಚಾರ ಮಾಡಿಕೊಳ್ಳುತ್ತಿದೆ. ಮುಸ್ಲಿಮರು ಎಲ್ಲಿಯಾದರೂ ಹಿಂಸಿಸಲ್ಪಟ್ಟರೆ ಪಾಕಿಸ್ತಾನವು ಮುಸ್ಲಿಮರೊಂದಿಗೆ ನಿಲ್ಲುತ್ತದೆ. ಭಾರತದಲ್ಲಿ ಇರುವ ಮುಸ್ಲಿಂ ಸಂಘಟನೆಗಳು ಕೂಡ ಪಾಕಿಸ್ತಾನದ ಈ ಘಟನೆಯನ್ನು ವಿರೋಧಿಸಿಲ್ಲ. ಆದರೆ ಭಾರತದಲ್ಲಿ ಇಂತಹ ಘಟನೆ ನಡೆದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂದು ಊಹಿಸಿ? ಹಲವು ಮುಸ್ಲಿಂ ಸಂಘಟನೆಗಳು ಈ ವಿಚಾರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗದ್ದಲ ಎಬ್ಬಿಸುತ್ತಿದ್ದವು. ನಮಾಜ್ ಮಾಡುತ್ತಿದ್ದ ಮುಸ್ಲಿಂ ಯುವಕನನ್ನು ಭದ್ರತಾ ಪಡೆಗಳು ಕೊಂದಿದ್ದಾರೆ ಎಂದು ಪ್ರಚಾರ ಮಾಡಲಾಗುತ್ತಿತ್ತು. ಆದರೆ ಪಾಕಿಸ್ತಾನಿ ರೇಂಜರ್‌ಗಳು ಮಾಡಿದ ಈ ಕೃತ್ಯಕ್ಕೆ ಭಾರತ ಸೇರಿದಂತೆ ವಿಶ್ವದಾದ್ಯಂತದ ಮುಸ್ಲಿಂ ಸಂಘಟನೆಗಳು ಮತ್ತು ಧಾರ್ಮಿಕ ಮುಖಂಡರು ಮೌನವಾಗಿ ಕುಳಿತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT